ಕಲಬುರಗಿ | ಬಿಜೆಪಿಯಿಂದ ಮಹಿಳಾ ವಿರೋಧಿ ಜಾಹೀರಾತು; ಸಿಪಿಐ ಖಂಡನೆ

Date:

Advertisements

ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಮಾಡಿರುವ ಜಾಹೀರಾತೊಂದು ಮಹಿಳಾ ವಿರೋಧಿಯಾಗಿದೆ ಎಂದು ಖಂಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಮುಖಂಡರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, “ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಜಾಹೀರಾತೊಂದನ್ನು ಮಾಡಿದೆ. ಅದು ಮಹಿಳಾ ವಿರೋಧಿಯಾಗಿದೆ. ವಧು ವೇಷದ ಮಹಿಳೆಯನ್ನು ಸುತ್ತುವರಿದು ವರನಾಗುವ ಸ್ಪರ್ಧೆ ನಡೆಯುವಂತಹ ಕಿತ್ತಾಡುವ ದೃಶ್ಯಗಳು ಇದ್ದು ಮತ್ತು ಕೊನೆಯಲ್ಲಿ ಮೋದಿಯವರನ್ನು ತೋರಿಸಲಾಗಿದೆ. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲಲು ಮಹಿಳೆಯರಿಗೆ ಅಪಮಾನ ಮಾಡುವಂತಹ ಜಾಹಿರಾತು ಬಳಸಿರುವುದು ಆ ಪಕ್ಷದ ಮಹಿಳಾ ವಿರೋಧಿ ನಡೆಯನ್ನು ಜಗಜ್ಜಾಹಿರುಗೊಳಿಸಿದಂತಾಗಿದೆ” ಎಂದರು.

ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವ ಸಂವಿಧಾನದ ಆಶಯವನ್ನು ಉಲ್ಲಂಘಿಸಿದೆ ಬಿಜೆಪಿ, ಸಿಪಿಐಎಂ ಪಕ್ಷ ಕಲಬುರಗಿ ಜಿಲ್ಲಾ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲ ಈ ಜಾಹೀರಾತನ್ನು ಕೂಡಲೇ ರದ್ದುಗೊಳಿಸಿ ದೇಶದ ಜನತೆಯಲ್ಲಿ ಬಿಜೆಪಿಯು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

Advertisements

ಚುನಾವಣಾ ಕಮಿಷನ್ ಕೂಡಲೇ ದೇಶದ ಮಹಿಳೆಯರನ್ನು ಹೀಗೆ ಅಪಮಾನಿಗೊಳಿಸಿದ ಮತ್ತು ಮಹಿಳೆಯರ ಆಯ್ಕೆಯ ಹಕ್ಕಿನ ಧಾಳಿ ಮಾಡಿದ್ದರಿಂದ ಬಿಜೆಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮದುವೆಯು ಸಂಪೂರ್ಣ ವೈಯಕ್ತಿಕವಾದ ಸಾಂಸ್ಕೃತಿಕ ವಿಷಯವಾಗಿದೆ. ಆದರೆ, ಬಿಜೆಪಿಯು ಒಬ್ಬ ವಧುವಿಗೋಸ್ಕರ ಎಲ್ಲರೂ ಕಿತ್ತಾಡುವ ದೃಶ್ಯವನ್ನು ವರ್ಣರಂಜತವಾಗಿ ತೋರಿಸಿ ಮಹಿಳೆಯ ಅಸ್ತಿತ್ವ, ಅಸ್ಮಿತೆಗೆ ಧಕ್ಕೆ ಉಂಟು ಮಾಡಿದೆ. ಇಂತಹ ಮಹಿಳಾ ವಿರೋಧಿ ಮತ್ತು ಸಂವಿಧಾನದ ಮೌಲ್ಯದ ವಿರೋಧಿ ಜಾಹೀರಾತು ತರುವ ಮೂಲಕ ಮನುಸ್ಮೃತಿಯ ಕಣ್ಣೋಟವನ್ನು ಜನಮಾನಸದಲ್ಲಿ ತುಂಬಲು ಹೊರಟಿದೆ ಎಂದರು.

ಇಂತಹ ದೃಶ್ಯಗಳ ಮೂಲಕ ಮಹಿಳೆಯರ ಘನತೆಗೆ ದಕ್ಕೆ ತಂದಿರುವುದಲ್ಲದೆ, ಈ ಜಾಹೀರಾತು ವೀಕ್ಷಕರ ಮನದಲ್ಲಿ ಮನುಸ್ಮೃತಿಯ ಮೌಲ್ಯಗಳನ್ನು ತುಂಬಿ ಸಂವಿಧಾನದ ದೃಢ ನಿಲುವಾದ ವರ್ಣ-ವರ್ಣ-ಲಿಂಗ-ಜಾತಿಯ ತಾರತಮ್ಯವನ್ನು ಅಳಿಸಿ ಹಾಕುವ ಸಮಾನತೆಯ ಸಮಾಜವಾದಿ ನಾಡು ಕಟ್ಟುವ ಆಶಯವನ್ನು ಮಣ್ಣುಪಾಲು ಮಾಡಲು ಹೊರಟಿದೆ. ಇದು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದರು.

ಈ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯು ಅತ್ಯಂತ ಕೀಳು ಮಟ್ಟದ ಜಾಹೀರಾತುಗಳನ್ನು ಮಾಡುವ, ಸುಳ್ಳನ್ನು ಪ್ರಚಾರಗೊಳಿಸುವ, ಜನರನ್ನು ಭಾವೋದ್ರೇಕಗೊಳಿಸುವ, ಮತೀಯ ಪ್ರಚೋದನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರುವ ಮುಂತಾದ ಅಸಂವಿಧಾನಿಕ ಕೃತ್ಯಕ್ಕೆ ಇಳಿದಿದೆ. ಹೀಗೆ ಮಾಡುವ ಮೂಲಕ ತಾನೊಂದು ಮಹಿಳಾ ವಿರೋಧಿ, ಜನವಿರೋಧಿ ಪಕ್ಷ ಎಂಬುದನ್ನು ಜಾಹೀರುಗೊಳಿಸುತ್ತಿದೆ. ದೇಶದ ಜನತೆಯು ಇದನ್ನು ಅರಿಯಬೇಕಿದೆ ಎಂದು ಸಿಪಿಐಎಂ ಪಕ್ಷವು ವಿನಂತಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X