ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ʼಸಂವಿಧಾನ ರಕ್ಷಿಸಿ ಭಾರತ ಉಳಿಸಿʼ ದುಂಡು ಮೇಜಿನ ಸಭೆ

Date:

Advertisements

ಈ ದೇಶವನ್ನು ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿಗಳಿಂದ ರಕ್ಷಿಸಬೇಕಿದೆ. ಈಗಾಗಲೇ ಚುನಾವಣೆ ಅಬ್ಬರ ಜೋರಾಗಿದೆ. ಚುನಾವಣೆ ಗೆಲ್ಲಲು ಎನ್‌ಡಿಎ ಎಲ್ಲ ಕಸರತ್ತುಗಳನ್ನು ಮಾಡುತ್ತಲಿದೆ ಎಂದು ಕಾರ್ಮಿಕ ಮುಖಂಡ ಧರ್ಮೇಶ್ ಹೇಳಿದರು.

ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ʼಸಂವಿಧಾನ ರಕ್ಷಿಸಿ ಭಾರತ ಉಳಿಸಿʼ ಘೋಷದೊಡನೆ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.

“ಚುನಾವಣಾ ಪೂರ್ವ ರಾಮಮಂದಿರ ಉದ್ಘಾಟನೆಯಲ್ಲಿ ಸ್ವತಃ ದೇಶದ ಪ್ರಧಾನಿಗಳೇ ಪುರೋಹಿತರಾಗಿ ಹಿಂದೂ ಧರ್ಮದ ಪರವಾಗಿ ಹೋಗಿ ಪೂಜೆ ಸಲ್ಲಿಸುವುದು ಎಷ್ಟು ಸರಿ? ಈ ದೇಶದ ಪ್ರಜಾಪ್ರಭುತ್ವ ಸರ್ವಧರ್ಮಗಳನ್ನು ಸಮನಾಗಿ ನೋಡುವುದು ದೇಶದ ಸಂವಿಧಾನದ ಆಶಯವಾಗಿದೆ‌. ಜ್ಯಾತ್ಯತೀತತೆ ಧರ್ಮನಿರಪೇಕ್ಷತೆಗೆ ವಿರುದ್ಧವಾಗಿದೆ. ಹೀಗೆ ಬಿಜೆಪಿ ಸರ್ಕಾರ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಪ್ರಜಾಪ್ರಭುಹುತ್ವ ವಿರೋಧಿ ನಡೆಯಾಗಿದೆ. ಹಾಗಾಗಿ ಇಂತಹ ಜನವಿರೋಧಿ ಸರ್ಕಾರವನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶವನ್ನು ಉಳಿಸೋಣ” ಎಂದು ಕರೆ ನೀಡಿದರು.

Advertisements

ದುಂಡು ಮೇಜಿನ ಸಭೆ 1 1

ನಸೀರ್ ಮುಲ್ಲಾ ಮಾತನಾಡಿ, “ನಮ್ಮ ದೇಶ ಎಲ್ಲ ಸಂಸ್ಕೃತಿಗಳ ತಾಣವಾಗಿದೆ. ನಾವೆಲ್ಲರೂ ಸಹೋದರರು, ನಾವು ಧರ್ಮಗಳಲ್ಲಿ ಬೇರೆಯಾದರೂ ಕೂಡಾ ನಾವೆಲ್ಲರೂ ಭಾರತೀಯರು. ನಮ್ಮನ್ನು ಧರ್ಮಗಳಲ್ಲಿ, ಜಾತಿಗಳಲ್ಲಿ, ಸಂಸ್ಕೃತಿಗಳಲ್ಲಿ ವಿಂಗಡಿಸಿ ನಮ್ಮನ್ನು ಒಡೆದು ಆಳುತ್ತಿದ್ದಾರೆ. ಇದನ್ನು ನಾವು ಗಮನಿಸಿ ಎಲ್ಲರೂ ಒಟ್ಟಾಗಬೇಕಿದೆ. ದೇಶದ ಬಹು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ‌” ಎಂದು ಹೇಳಿದರು.

“ಸತ್ಯ ಮೇವ ಜಯತೆ ಎಂಬುದು ನಮ್ಮ ದೇಶದಲ್ಲಿ ಸುಳ್ಳಾಗಿದೆ. ಈ ಸುಳ್ಳುಗಳು ರಾರಾಜಿಸುತ್ತಿರುವುದು ದೊಡ್ಡ ದುರಂತವಾಗಿದೆ. ಇಡೀ ವ್ಯವಸ್ಥೆ ದೊಡ್ಡ ಭ್ರಷ್ಟಾಚಾರದಿಂದ‌ ಕೂಡಿದೆ” ಎಂದು ತನ್ವೀರ್ ಅಹಮದ್ ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗ್ಯಾರಂಟಿ ನೀಡಿದಂತೆ ಕೇಂದ್ರದಲ್ಲೂ ಗ್ಯಾರಂಟಿ ಅನುಷ್ಠಾನ: ಮುನಿರಾ ಎ ಮಕಾಂದಾರ್

ರೈತ ಮುಖಂಡ ನವೀನ್ ಕುಮಾರ್ ಮಾತನಾಡಿ, “ಒಂದು ಕಡೆ ದೇಶದ ಪ್ರಧಾನಿ ನಾವು ಜಗತ್ತಿನಲ್ಲಿ ದೊಡ್ಡಣ್ಣ ಎಂದು ಬೀಗುತ್ತಿದ್ದಾರೆ. ಇನ್ನೊಂದು ಕಡೆ ಅದೇ ಸಂವಿಧಾನದ ವಿರೋಧವಾಗಿ ನಡೆದುಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಈಗ ನಾವು ಅವರ ಸಾಂಸ್ಕೃತಿಕ ರಾಜಕರಣವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ‌. ಆರ್‌ಎಸ್‌ಎಸ್‌ನ ಮನುವಾದಿ ರಾಜಕರಣ ಬ್ರಾಹ್ಮಣ್ಯವನ್ನು ದೇಶದ ಮೇಲೆ‌ ಹೇರಿಕೆ ಮಾಡಲು ಹೊರಟಿದ್ದಾರೆ” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X