ಟಾಕ್ಸಿಕ್ ಜಾಬ್| ಉದ್ಯೋಗ ತೊರೆದು ಮ್ಯಾನೇಜರ್ ಎದುರೇ ಡೋಲು ಬಾರಿಸಿ ಕುಣಿದಾಡಿದ!

Date:

Advertisements

ಟಾಕ್ಸಿಕ್ ಜಾಬ್ ಎನ್ನುವುದು ಈಗ ಸಾಮಾನ್ಯವಾಗಿ ಕೇಳಿ ಬರುವ ಪದವಾಗಿದೆ. ಆದರೆ ಈ ಸವಾಲಿನಿಂದ ಹೊರಬರಲು ಹಲವಾರು ಮಂದಿಗೆ ಹಣಕಾಸು ಸ್ಥಿತಿ ಅಡ್ಡಿಯಾಗುತ್ತಿದೆ. ಇವೆಲ್ಲವುದರ ನಡುವೆ ಪುಣೆಯ ಸೇಲ್ಸ್ ಎಕ್ಸಿಕ್ಯೂಟಿವ್ ಓರ್ವ ತನ್ನ ಈ ಟಾಕ್ಸಿಕ್ ಜಾಬ್ ತೊರೆದು ಮ್ಯಾನೇಜರ್ ಎದುರೇ ಡೋಲು ಬಾರಿಸಿ ಕುಣಿದಾಡಿದ ಘಟನೆ ಇತ್ತೀಚೆಗೆ ನಡೆದಿದ್ದು ಇದರ ವಿಡಿಯೋ ಭಾರೀ ವೈರಲ್ ಆಗಿದೆ.

ಈ ಉದ್ಯೋಗಿಯ ಸ್ನೇಹಿತ ಮತ್ತು ಕಂಟೆಂಟ್ ಕ್ರಿಯೇಟರ್ ಅನೀಶ್ ಭಗತ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅನಿಕೇತ್ ಎಂಬ ಪುಣೆಯ ಸೇಲ್ಸ್ ಎಕ್ಸಿಕ್ಯೂಟಿವ್ ತನ್ನ ಟಾಕ್ಸಿಕ್ ಜಾಬ್ ಬಗ್ಗೆ ವಿವರಿಸಿದ್ದಾನೆ.

 

View this post on Instagram

 

A post shared by Anish Bhagat (@anishbhagatt)

ಹಾಗೆಯೇ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರೂ ಸ್ವಲ್ಪವೇ ವೇತನ ಹೆಚ್ಚಿಸಲಾಗಿದೆ. ನಮ್ಮ ಬಾಸ್ ನಮ್ಮನ್ನು ಅಗೌರವದಿಂದ ನೋಡುತ್ತಾರೆ. ಮಧ್ಯಮವರ್ಗದ ಕುಟುಂಬದಿಂದ ಬಂದ ನನಗೆ ಕೆಲಸ ತೊರೆಯುವುದು ಕಷ್ಟ ಎಂದು ಅನಿಕೇತ್ ಹೇಳಿಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ?  ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ

ಕೊನೆಗೂ ಕೆಲಸವನ್ನು ತೊರೆಯುವ ನಿರ್ಧಾರ ಮಾಡಿದ ಅನಿಕೇತ್ ಇದನ್ನು ವಿಭಿನ್ನವಾಗಿಸುವ ಪ್ರಯತ್ನ ಮಾಡಿದ್ದಾರೆ. ಭಗತ್ ತನ್ನ ಸ್ನೇಹಿತರೊಂದಿಗೆ ಡೋಲಿನೊಂದಿಗೆ ಅನಿಕೇತ್‌ನ ಕಚೇರಿಯ ಹೊರಗೆ ನಿಂತಿದ್ದು ಅನಿಕೇತ್ ತನ್ನ ಮ್ಯಾನೇಜರ್ ಕಛೇರಿಯಿಂದ ಹೊರಬರುತ್ತಿದ್ದಂತೆ, ಅವರ ಕೈ ಕುಲುಕಿಸಿ “ಕ್ಷಮಿಸಿ ಸರ್, ಬೈ-ಬೈ” ಎಂದು ಹೇಳಿ ಕುಣಿದಾಡಿದ್ದಾರೆ. ಆದರೆ ಆಕ್ರೋಶಗೊಂಡ ಮ್ಯಾನೇಜರ್‌ ಕೂಗಾಡಿದ್ದಾರೆ.

ಇನ್ನು ಸಣ್ಣ ವಯಸ್ಸಿನಲ್ಲಿಯೇ ಫಿಟ್ನೆಸ್ ತರಬೇತುದಾರರಾಗಲು ಬಯಸಿದ್ದ ಅನಿಕೇತ್‌ಗೆ ಸ್ನೇಹಿತರು ಶೂ ನೀಡಿದ್ದಾರೆ. ಈ ವಿಡಿಯೋ 70 ಸಾವಿರಕ್ಕೂ ಅಧಿಕ ಲೈಕ್ ಪಡೆದಿದೆ. ಇನ್ನು ಕೆಲವರು ಸಂಸ್ಥೆಯ ಹೆಸರು ಹೇಳಿ ಎಂದು ಕಾಮೆಂಟ್ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X