ಸ್ಯಾಮ್ ಪಿತ್ರೋಡ ಮುನ್ನೆಲೆ ಗಾಯಕ, ಡಿ ಕೆ ಸುರೇಶ್‌ ಅವರ ಹಿನ್ನೆಲೆ ಗಾಯಕ: ಆರ್‌ ಅಶೋಕ್

Date:

Advertisements

ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡ ಹೇಳಿಕೆ ದೇಶವನ್ನು ಛಿದ್ರ ಮಾಡುವ ಹೇಳಿಕೆ. ಡಿ ಕೆ ಸುರೇಶ್‌ ಅವರ ಹಿನ್ನೆಲೆ ಗಾಯಕ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, “ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನರಿಗೆ ಹೋಲಿಕೆ ಮಾಡಿದ ಸ್ಯಾಮ್ ಪಿತ್ರೋಡ 420 ಆಗಿದ್ದಾರೆ. ಅವರು ದೇಶ ವಿಭಜನೆಯ ಮುನ್ನಲೆ ಗಾಯಕರು” ಎಂದು ಕಿಡಿಕಾರಿದರು.

“ಸಿಎಂ ಸಿದ್ದರಾಮಯ್ಯ ಅವರೇ ಯಾವಾಗ ಆಫ್ರಿಕಾಗೆ ಹೋಗುತ್ತಿರಾ? ಕಾಂಗ್ರೆಸ್ ಇದೀಗ ಬಣ್ಣದ ಭಾಗ್ಯವನ್ನು ಕೊಡುತ್ತಿದೆ. ಬಣ್ನದ ಗ್ಯಾರಂಟಿಗಳನ್ನು ಕೊಡುತ್ತಿದೆ. ಬಣ್ಣದ ಜನಾಂಗೀಯ ಗಲಭೆಯನ್ನು ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧಿಯ ಹೋರಾಟ ಇದಕ್ಕೆ ಅಂತ್ಯ ಹಾಡಿತ್ತು” ಎಂದರು.

Advertisements

“ನಾನು ಭಾರತೀಯನೇ ಅಲ್ಲ ಎಂಬ ಪ್ರಶ್ನೆಯನ್ನು ಸ್ಯಾಮ್ ಪಿತ್ರೋಡ ಎತ್ತಿದ್ದಾರೆ. ನಮಗೆ 5000 ವರ್ಷದ ಇತಿಹಾಸ ಇದೆ. ಹಾಗಿದ್ದರೂ ನಮ್ಮನ್ನು ಆಫ್ರಿಕಾದ ಜನರಿಗೆ ಹೋಲಿಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರು ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್‌ನವರು ಒತ್ತಾಯ ಮಾಡ್ತಾರೆ. ಹಾಗಾದರೆ ಸೋನಿಯಾ ಯಾರು ಎಂದು ಪಿತ್ರೋಡ ಹೇಳಬೇಕು” ಎಂದು ಆಗ್ರಹಿಸಿದರು.

“ಸೋನಿಯಾ ಗಾಂಧಿ ಇಟಲಿಯವರಾದರೂ ನಾವು ಅವರನ್ನು ಭಾರತೀಯ ಸೊಸೆ ಎಂದು ಒಪ್ಪಿಕೊಂಡಿದ್ದೇವೆ. ರಾಹುಲ್ ಗಾಂಧಿ ಈ ಚುನಾವಣೆಯ ಬಳಿಕ ಇಟಲಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೂ ನಾವು ಅವರನ್ನು ಭಾರತೀಯರು ಎಂದು ಒಪ್ಪಿಕೊಂಡಿದ್ದೇವೆ ಅಲ್ವಾ? ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದೇಶವನ್ನು ಜನರ ಮೈಬಣ್ಣದ ಮೇಲೆ ವಿಂಗಡನೆ ಮಾಡುವ ಹಾಗೂ ಕರ್ನಾಟಕದ ತೆರಿಗೆ ಪಾಲು ಕೊಟ್ಟಿಲ್ಲವೆಂದು ದೇಶವನ್ನು ವಿಭಜನೆ ಮಾಡಬೇಕೆಂದು ಹೇಳಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅಂತವರು ಏಕೀಕೃತ ಭಾರತಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗದಿರರು..ಹೀಗೆ ಮೂರ್ಖತನದಿಂದ ಹೇಳಿಕೆ ನೀಡುವ ಇಂತಹ ಜನ್ರ ವಿರುದ್ದ ಜನಜಾಗೃತರಾಗಬೇಕಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X