ಐಪಿಎಲ್ ತೊರೆದು ತವರಿಗೆ ಹೊರಟ ಇಂಗ್ಲೆಂಡ್‌ನ ಆಟಗಾರರು; ಪ್ರಮುಖ ಪಂದ್ಯ ಮಿಸ್ ಮಾಡಲಿರುವ RCBಯ ವಿಲ್ ಜಾಕ್ಸ್‌!

Date:

Advertisements

ದೇಶದಲ್ಲಿ ಸದ್ಯ ನಡೆಯುತ್ತಿರುವ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್(ಐಪಿಎಲ್)​ ಸೀಸನ್​ ಬೆನ್ನಲ್ಲೇ ಐಸಿಸಿಯ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ, ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್​, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ.

ಮೇ 18ರಂದು ಆರ್​​​ಸಿಬಿ ಹಾಗೂ ಚೆನ್ನೈ ಸೂಪರ್​​ ಕಿಂಗ್ಸ್​ ಮಧ್ಯೆ ಪ್ಲೇ-ಆಫ್​​ ಪ್ರವೇಶ ಅರ್ಹತೆಯನ್ನು ಪಡೆಯುವ​​ ಫಂದ್ಯ  ನಡೆಯಲಿದೆ. ಈ ರೋಚಕ ಪಂದ್ಯಕ್ಕೂ ಮುನ್ನವೇ ಆರ್​​​ಸಿಬಿಗೆ ಆಘಾತ ಉಂಟಾಗಿದೆ. ಆರ್‌ಸಿಬಿ ಸೇರಿದಂತೆ ಕೆಲ ಪ್ರಮುಖ ತಂಡಗಳಲ್ಲಿ ಆಡುತ್ತಿದ್ದ ಇಂಗ್ಲೆಂಡ್‌ನ ಆಟಗಾರರು ತಮ್ಮ ತವರಿಗೆ ಮರಳಿದ್ದಾರೆ.

ಐಪಿಎಲ್​ ಪ್ಲೇ ಆಫ್​ಗೆ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್ ವಿಲ್ ಜಾಕ್ಸ್​​​ ಇಂಗ್ಲೆಂಡ್​ ತಂಡ ಸೇರಿಕೊಳ್ಳಬೇಕಿದೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್​​​ ಆರ್​​ಸಿಬಿ ತೊರೆದು ಇಂಗ್ಲೆಂಡ್​ ತಂಡ ಸೇರಿಕೊಳ್ಳಲು ಹೊರಟಿದ್ದಾರೆ. ಈ ಬಗ್ಗೆ ಖುದ್ದು ಆರ್​​ಸಿಬಿ ಟ್ವೀಟ್​ ಮಾಡಿದ್ದು, ವಿಲ್ ಜಾಕ್ಸ್‌ ಹಾಗೂ ಬೌಲರ್ ರೀಸ್‌ ಟೋಪ್ಲಿ ಅವರನ್ನು ತವರಿಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದೆ.

Advertisements

ಗುಜರಾತ್​​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿಲ್​​ ಜಾಕ್ಸ್, ​​​ ಕೇವಲ 41 ಎಸೆತದಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಈ ಸಾಧನೆಯಲ್ಲಿ 10 ಸಿಕ್ಸರ್​​, 5 ಬೌಂಡರಿಗಳು ಕೂಡ ಇದ್ದವು. ಉತ್ತಮ ಫಾರ್ಮ್‌ನಲ್ಲಿರುವ ಮಧ್ಯೆಯೇ ವಿಲ್​ ಜಾಕ್ಸ್​ ಇಂಗ್ಲೆಂಡ್​ ಮತ್ತೆ ವಾಪಸ್​ ಆಗಲಿದ್ದು, ಇದು ಆರ್​​ಸಿಬಿಗೆ ಆಘಾತ ತಂದಿದೆ. ತೆರವಾಗಲಿರುವ ವಿಲ್ ಜಾಕ್ಸ್ ಸ್ಥಾನವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ತುಂಬಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಆರ್‌ಸಿಬಿಯಿಂದ ವಿಲ್​ ಜಾಕ್ಸ್​ ಹಾಗೂ ರೀಸ್ ಟೋಪ್ಲಿ, ಕೆಕೆಆರ್‌ನಿಂದ ಫಿಲ್ ಸಾಲ್ಟ್‌ನಿಂದ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಮೊಯೀನ್ ಅಲಿ, ರಾಜಸ್ಥಾನ ರಾಯಲ್ಸ್‌ ತಂಡದಿಂದ ಜೋಶ್ ಬಟ್ಲರ್ ಸೇರಿದಂತೆ ಪ್ರಮುಖ ಇಂಗ್ಲೆಂಡ್‌ನ ಆಟಗಾರರು ತಮ್ಮ ಫ್ರಾಂಚೈಸಿಗಳನ್ನು ತೊರೆದಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X