ಮತ್ತೆ ನಿಖರ ಅಂಕಿಅಂಶ ನೀಡದ ಚುನಾವಣಾ ಆಯೋಗ; 5ನೇ ಹಂತದಲ್ಲಿ ಅಂದಾಜು 60.09% ಮತದಾನ

Date:

Advertisements

ಸೋಮವಾರ 5ನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಆದರೆ, ಮತದಾನ ನಿಖರ ಅಂಕಿಅಂಶಗಳನ್ನು ಚುನಾವಣಾ ಆಯೋಗ ಇನ್ನೂ ನೀಡಿಲ್ಲ. 60.09% ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ದಿನಗಳ ಬಳಿಕ ನಿಖರ ಅಂಕಿಅಂಶ ನೀಡುವುದಾಗಿ ಆಯೋಗ ಹೇಳಿದೆ.

ಈ ಹಿಂದೆ ನಡೆದ ನಾಲ್ಕು ಹಂತಗಳ ಮತದಾನದಲ್ಲಿಯೂ ಸ್ಪಷ್ಟವಾದ ಅಂಕಿಅಂಶ ಪ್ರಕಟಿಸುವಲ್ಲಿ ಆಯೋಗ ವಿಳಂಬ ಮಾಡಿತ್ತು. ಇದೀಗ, 5ನೇ ಹಂತದಲ್ಲಿಯೂ ಅದೇ ಮುಂದುವರೆದಿದೆ.

ಸೋಮವಾರ 60.09% ಮತದಾನ ಆಗಿರುವುದಾಗಿ ರಾತ್ರಿ 11:30ರ ವೇಳೆಗೆ ಅಂದಾಜಿಸಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಂದ ಅಂಕಿಅಂಶಗಳ ನವೀಕರಣವನ್ನು ಮುಂದುವರಿಸಲಾಗುತ್ತಿದೆ” ಎಂದು ಆಯೋಗ ಹೇಳಿದೆ.

Advertisements

ನಿಖರ ಮಾಹಿತಿಯನ್ನು ಇನ್ನೂ ನೀಡದ ಚುನಾವಣಾ ಆಯೋಗ, “ನವೀಕರಿಸಿದ ಮತದಾನದ ಪ್ರಮಾಣವನ್ನು ಮೇ 24ರೊಳಗೆ ಲಿಂಗವಾರು ವರ್ಗೀಕರಣದೊಂಧಿಗೆ ಪ್ರಕಟಿಸುವುದಾಗಿ” ಹೇಳಿಕೊಂಡಿದೆ. ಈ ಹಿಂದೆ, ನಾಲ್ಕನೇ ಹಂತದ ಮತದಾನವಾದಾಗ, ಮಾಹಿತಿ ನೀಡಲು 11 ದಿನಗಳನ್ನು ತೆಗೆದುಕೊಂಡಿದ್ದು ಆಯೋಗ ಇದೀಗ ನಾಲ್ಕು ದಿನಗಳ ನಂತರ ಮಾಹಿತಿ ನೀಡುವುದಾಗಿ ಹೇಳುತ್ತಿದೆ.

ಅಂದಾಜಿತ ಅಂಕಿಅಂಶಗಳ ಪ್ರಕಾರ, ಮೇ 20ರ ಸಂಜೆ 7.45 ಗಂಟೆಯ ವೇಳೆಗೆ ಎಲ್ಲ 49 ಕ್ಷೇತ್ರಗಳಲ್ಲಿ ಒಟ್ಟು 57.47% ಮತದಾನವಾಗಿದೆ ಎಂದು ಅಂದಾಜಿಸಲಾಗಿತ್ತು.

5ನೇ ಹಂತದ ಮತದಾನ
5ನೇ ಹಂತದ ಮತದಾನದ ಅಂದಾಜು ಅಂಕಿಅಂಶ

ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು74.65%ರಷ್ಟು ಮತದಾನವಾಗಿದೆ. 1970ರ ದಶಕದಿಂದಲೂ ಈ ರಾಜ್ಯವು ಭಾರತದ ಇತರ ಭಾಗಗಳಿಗಿಂತ ಹೆಚ್ಚಿನ ಶೇಕಡಾವಾರು ಮತದಾನವನ್ನು ದಾಖಲಿಸುತ್ತಿದೆ. ಮಹಾರಾಷ್ಟ್ರದಲ್ಲಿ 54.29% ಮತದಾನವಾಗಿ, 5ನೇ ಹಂತದಲ್ಲಿ ಅತೀ ಕಡಿಮೆ ಮತದಾನವಾದ ರಾಜ್ಯವಾಘಿದೆ. ಅಲ್ಲಿನ 13 ಸ್ಥಾನಗಳಲ್ಲಿ ಮತದಾನ ನಡೆದಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು 56.73% ಮತದಾನವಾಗಿದೆ. ಆರ್ಟಿಕಲ್ 370 ರದ್ದತಿಯಿಂದ ಸಿಟ್ಟಾಗಿರುವ ಜನರು ಕೇಂದ್ರದ ವಿರುದ್ಧ ಮತ ಚಲಾಯಿಸಲು ಮತಗಟ್ಟೆ ಎಡೆಗೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ.

5th phase

5ನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟು 695 ಅಭ್ಯರ್ಥಿಗಳು ಚುನಾವಣೆ ಎದುರಿದ್ದಾರೆ.

ಒಟ್ಟಾರೆಯಾಗಿ ಕಳೆದ 5 ಹಂತಗಳಲ್ಲಿ 25 ರಾಜ್ಯಗಳ 428 ಸ್ಥಾನಗಳಿಗೆ ಮತದಾನ ಮುಗಿದಿದೆ. ಇನ್ನು, 115 ಸ್ಥಾನಗಳಿಗೆ ಮತದಾನ ಬಾಕಿ ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X