ಬುದ್ಧನ ಜೀವನ ತತ್ವಗಳು ಎಲ್ಲ ಕಾಲಕ್ಕೂ ಬೆಲೆಯುಳ್ಳವುಗಳು ಆಗಿವೆ. ನೆಮ್ಮದಿಯ ಬದುಕಿಗೆ ಸರಳ ಜೀವನ ಮುಖ್ಯವಾಗಿದೆ. ಗೌತಮ ಬುದ್ಧರು ಜೀವನದ ಅರ್ಥವನ್ನು ಕಂಡುಕೊಂಡು ವಿಶ್ವದಲ್ಲಿ ಶಾಂತಿ, ನೆಮ್ಮದಿಯ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರ ಜೀವನ ಆದರ್ಶಗಳನ್ನು ಪಾಲಿಸುವಂತಾಗಲಿ ಎಂದು ದಸಂಸ(ಭೀಮ ಘರ್ಜನೆ)ದ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಹೇಳಿದರು.
ಹಾವೇರಿ ನಗರದ ಕಾಗಿನೆಲೆ ಮುರುಘರಾಜೇಂದ್ರ ಮಠದಲ್ಲಿ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ)ಯಿಂದ ತಿರಕಪ್ಪ ಚಿಕ್ಕೇರಿ ಅವರ ಘನ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಗೌತಮ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, “ಗೌತಮ ಬುದ್ಧರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿಗೆ ಸಾಕ್ಷಿಯಾಗೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೃಷಿ ನಿರ್ದೇಶಕರಿಂದ ಅಧಿಕಾರ ದುರ್ಬಳಕೆ ಆರೋಪ; ಕ್ರಮಕ್ಕೆ ಆಗ್ರಹ
ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಎನ್ ಮಾಸೂರ, ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಹಾನಗಲ್ ತಾಲೂಕಿನ ಸಂಚಾಲಕ ಜಗದೀಶ ಹರಿಜನ, ಮಹೇಶಪ್ಪ ಹರಿಜನ, ಹನುಮಂತಪ್ಪ ಸಿ ಡಿ, ಮಂಜುನಾಥ ಹಾವನೂರ ಹಾಗೂ ಡಿಎಸ್ಎಸ್ ಭೀಮ ಘರ್ಜನೆ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ಎಂ ದೊಡ್ಡಮನಿ, ಸಂತೋಷ ಕನ್ನಮ್ಮನವರ, ನಿಂಗಪ್ಪ ಹಿತ್ತಲಮನಿ, ಮಲ್ಲೇಶಪ್ಪ ಹಿರೇಕ್ಕನವರ, ಪರಮೇಶ ಮಾದರ, ಚಂದ್ರಪ್ಪ ಮಾದರ, ನೀಲಪ್ಪ ಮಾದರ, ಗಣೇಶ ಹರಿಜನ, ಬಿದ್ದಾಡೆಪ್ಪ ಹಂಸಬಾವಿ, ನಾಗರಾಜ ಹರಿಜನ, ದಯಾನಂದ ಹರಿಜನ, ಹನುಮಂತ ಹೊಳೆಮ್ಮನವರ, ಶಿವಾನಂದ ಹಿತ್ತಲಮನಿ, ಮಲ್ಲೇಶಪ್ಪ ಹರಿಜನ ಇನ್ನೂ ಅನೇಕ ಪದಾಧಿಕಾರಿಗಳು ಇದ್ದರು.
