ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಮೇರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೆಂಟರ್ನ ತರಬೇತುದಾರ ಹರೀಶ್ ಕೆಂಚಣ್ಣನವರು ಅಭಿಪ್ರಾಯಪಟ್ಟರು.
ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಧಾರವಾಡದಲ್ಲಿ ವಿಶ್ವ ಪರಿಸರ ದಿನವನ್ನು ಉದ್ದೇಶಿಸಿ ಮಾತನಾಡಿದರು.
“ಮೊಟ್ಟಮೊದಲ ಬಾರಿಗೆ 1972 ಜೂನ್ 5ರಂದು ನಡೆದ ಯುನೈಟೆಡ್ ನೇಷನ್ ಕಾನ್ಫರೆನ್ಸ್ ಎನ್ವಿರಾನ್ವೆಂಟ್ ಸಭೆಯ ನಿಮಿತ್ತ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರತಿ ವರ್ಷವೂ ಪರಿಸರ ದಿನಾಚರಣೆಯನ್ನು ಅದರ ಧ್ಯೇಯ ವಾಕ್ಯದೊಂದಿಗೆ ಆಚರಿಸುತ್ತಾ ಬರುವುದು, “Land Restoration, Desertification, and Drought Resilience.” ಪರಿಸರ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ವಿಲಿಯಂ ಕಾರ್ಲೈಲ್ ಎಂಬ ವಿಜ್ಞಾನಿ ಬಳಸಿದನು” ಎಂದು ತಿಳಿಸಿದರು.
“ಮನೆಗೆ ಮಗಳು ನೆರಳಾದರೆ, ಧರೆಗೆ ಮರಗಳು ನೆರಳಾಗುತ್ತವೆ ಎಂಬ ವ್ಯಾಕರಣ ಮನದಲ್ಲಿಟ್ಟುಕೊಂಡು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. 2015ರ ಪ್ಯಾರಿಸ್ ಒಪ್ಪಂದವನ್ನು ನಾವು ಬದ್ಧವಾಗಿ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಪರಿಸರದ ಜಾಗೃತಿಯ ಬಗ್ಗೆ ಯುವಜನರಲ್ಲಿ ಶಿಕ್ಷಣ ಮೂಡಿಸಬೇಕು” ಎಂದರು.
“ರಾಷ್ಟ್ರೀಯ ಪರಿಸರ ನೀತಿ, ಪರಿಸರ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ರಾಷ್ಟ್ರೀಯ ಅರಣ್ಯ ನೀತಿ ಮುಂತಾದ ಪರಿಸರ ಸಂಬಂಧಿತ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಅಲಂಕರಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಮ್ ಮಕಾಂದಾರ ಮಾತನಾಡಿ, “ಪ್ರತಿಯೊಬ್ಬರ ಜೀವನ ಎಷ್ಟು ಮುಖ್ಯವೋ ಪರಿಸರವೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರತಿ ವರ್ಷ ಒಂದೊಂದು ಸಸಿ ನೆಟ್ಟರೆ ಬಹುಶಃ ಪರಿಸರ ದಿನಾಚರಣೆ ಆಚರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕಾಮುಕ ಪ್ರೇಮಿಯಿಂದ ಪ್ರೇಯಸಿ ಮೇಲೆ ನಿರಂತರ ಅತ್ಯಾಚಾರ
ಈ ಕಾರ್ಯಕ್ರಮದಲ್ಲಿ ಡಾ. ಐ ಎ ಮುಲ್ಲಾ, ಡಾ ಎನ್ ಬಿ ನಾಲತವಾಡ, ಡಾ ರಾಹುತುನಿಸಾ, ಡಾ. ಎ ಎಸ್ ಬೆಳ್ಳಾರಿ ಹಾಗೂ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
