ಮೆಕ್ಕಾಗೆ ಹಜ್ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ಬಿಸಿಲಾಘಾತದಿಂದ ಸಾವು

Date:

Advertisements

ಮೆಕ್ಕಾಗೆ ಈ ವರ್ಷ ಹಜ್‌ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ತೀವ್ರ ಬಿಸಿಲಾಘಾತದಿಂದ ಮೃತಪಟ್ಟಿದ್ದಾರೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ 323 ಮಂದಿ ಈಜಿಫ್ಟ್‌ನವರಾಗಿದ್ದು, ಇಬ್ಬರು ಅರಬ್‌ ರಾಯಭಾರಿ ಕಚೇರಿಯ ಅಧಿಕಾರಿಗಳು ಮೃತಪಟ್ಟ ಆಯಾ ದೇಶದ ಸಂತ್ರಸ್ತರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.

“ಈಜಿಫ್ಟ್‌ ಪ್ರಜೆಗಳು ಬಿಸಿಲಿನ ಆಘಾತದಿಂದ ಮೃತಪಟ್ಟಿದ್ದು, ಜನಸಂದಣಿಯಿಂದ ಗಾಯಗೊಂಡ ಒಬ್ಬರು ಚೇತರಿಕೊಂಡಿದ್ದಾರೆ. ಮೃತಪಟ್ಟವರ ಬಗೆಗಿನ ಒಟ್ಟಾರೆ ವಿವರಗಳು ಮೆಕ್ಕಾ ಆಸ್ಪತ್ರೆಯಿಂದ ಪಡೆದುಕೊಳ್ಳಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

60 ಮಂದಿ ಜೋರ್ಡಾನ್‌ ದೇಶದ ಪ್ರಜೆಗಳು ಬಿಸಿಲ ಝಳದಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?

ಮೆಕ್ಕಾದಲ್ಲಿ ಕಳೆದ ಒಂದು ದಶಕದಿಂದ ಉಂಟಾಗುತ್ತಿರುವ ತಾಪಮಾನ ಬದಲಾವಣೆಯು ಯಾತ್ರಿಕರ ಮೇಲೂ ಪರಿಣಾಮ ಬೀರುತ್ತಿದ್ದು,ಮಂಗಳವಾರ ತಾಪಮಾನ 51.8 ಡಿಗ್ರಿ ಸೆಲ್ಷಿಯಸ್‌ ಇತ್ತು ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಬಿಸಿಲ ಶಾಖದಿಂದ ಕಳೆದ ವರ್ಷ 240 ಯಾತ್ರಿಕರು ಮೃತಪಟ್ಟಿದ್ದು, ಇದರಲ್ಲಿ ಬಹುತೇಕರು ಇಂಡೋನೇಷ್ಯಾದವರಾಗಿದ್ದರು.

ಮೆಕ್ಕಾಗೆ ಬರುವ ಯಾತ್ರಿಕರಿಗೆ ಕೊಡೆಗಳು ಬಳಕೆ, ಅತ್ಯಂತ ಹೆಚ್ಚು ನೀರು ಸೇವಿಸುವುದರ ಜೊತೆ ಬಿಸಿಲಿನ ಅವಧಿಯಲ್ಲಿ ದೂರವಿರುವಂತೆ ಸೌದಿ ಅಧಿಕಾರಿಗಳು ಸಲಹೆಗಳನ್ನು ನೀಡುತ್ತಿದ್ದಾರೆ.

ಮುಸ್ಲಿಂ ಸಮುದಾಯದ ಪ್ರವಿತ್ರ ಧಾರ್ಮಿಕ ಸ್ಥಳವಾದ ಮೆಕ್ಕಾಕ್ಕೆ ಈ ವರ್ಷ 18 ಲಕ್ಷ ಯಾರ್ತಾರ್ಥಿಗಳು ಭೇಟಿ ಕೊಟ್ಟಿದ್ದು, ಇದರಲ್ಲಿ 16 ಲಕ್ಷ ವಿದೇಶದವರು ಎಂದು ಸೌದಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X