ಗಂಡ ಮದ್ಯಪಾನ ಬಿಡಬೇಕಾದರೆ ಮನೆಯಲ್ಲೆ ಕುಡಿಯಲು ಹೇಳಿ ಎಂದ ಮಧ್ಯಪ್ರದೇಶ ಸಚಿವ!

Date:

Advertisements

ನಿಮ್ಮ ಗಂಡ ಮದ್ಯಪಾನ ಮಾಡುವುದನ್ನು ನಿಲ್ಲಿಸಬೇಕು ಎಂದು ನೀವು ಬಯಸಿದರೆ ಗಂಡನಿಗೆ ಮನೆಯಲ್ಲೆ ಕುಡಿಯಲು ಹೇಳಿ ಎಂದು ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶುಕ್ರವಾರ ನಶಾ ಮುಕ್ತಿ (ವ್ಯಸನದಿಂದ ಮುಕ್ತಿ) ಅಭಿಯಾನದ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ನಾರಾಯಣ್ ಸಿಂಗ್ ಕುಶ್ವಾಹ್, “ಕುಟುಂಬಗಳ ಮಹಿಳಾ ಸದಸ್ಯರು ಈ ಅಭಿಯಾನದ ಯಶಸ್ಸಿನ ಕೀಲಿಯನ್ನು ಹೊಂದಿದ್ದಾರೆ” ಎಂದಿದ್ದಾರೆ.

“ಮಹಿಳೆಯರು ತಮ್ಮ ಗಂಡಂದಿರ ಬಳಿ ಹೊರಗೆ ಕುಡಿಯದಂತೆ ಮನೆಯಲ್ಲಿಯೆ ಮದ್ಯಪಾನ ಮಾಡಲು, ತಿನ್ನಲು ಹೇಳಬೇಕು. ಮಕ್ಕಳು ಮತ್ತು ಪತ್ನಿಯ ಎದುರು ಕುಡಿಯಲು ನಾಚಿಕೆಯಾಗುವ ಕಾರಣದಿಂದಾಗಿ ಕ್ರಮೇಣ ಮದ್ಯಪಾನ ಮಾಡುವುದು ಕಡಿಮೆಯಾಗುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.

Advertisements

ಇದನ್ನು ಓದಿದ್ದೀರಾ?  ಉಡುಪಿ | ಯಾವುದೇ ಚಟುವಟಿಕೆಯಿಲ್ಲದೆ ಮದ್ಯಪಾನಿಗಳ ತಾಣವಾದ ಗಾಂಧಿ ಭವನ

“ನಿಮ್ಮ ಕುಡಿತದ ಚಟ ಮಕ್ಕಳ ಮೇಲೂ ಅದೇ ಪರಿಣಾಮ ಬೀರುತ್ತದೆ ಎಂದು ನಿಮ್ಮ ಗಂಡಂದಿರಿಗೆ ಹೇಳಿ. ಗಂಡಸರಿಗೆ ಕುಟುಂಬದ ಎದುರು ಆಗುವ ಮುಜುಗರದಿಂದಾಗಿ ಅವರು ಕ್ರಮೇಣ ಕುಡಿಯುವ ಅಭ್ಯಾಸವನ್ನು ತೊರೆಯುತ್ತಾರೆ” ಎಂದು ಹೇಳಿದರು.

“ಪುರುಷರು ಮನೆಗೆ ಕುಡಿದು ಬಂದರೆ ಊಟ ನೀಡಬೇಡಿ. ಬದಲಿಗೆ ಲಟ್ಟಣಿಗೆ ತೋರಿಸಿ. ಮಹಿಳೆಯರು ಬಲವಾದ ಲಟ್ಟಣಿಗೆ ಗ್ಯಾಂಗ್ ಅನ್ನು ರಚಿಸಬೇಕು. ಇದು ಪುರುಷರಿಗೆ ಲಟ್ಟಣಿಗೆ ತೋರಿಸಿ ಕುಡಿತ ತೊರೆಯುವಂತೆ ಮಾಡುತ್ತದೆ” ಎಂದರು.

ಕುಶ್ವಾ ಅವರು ಗ್ವಾಲಿಯರ್ ಜಿಲ್ಲೆಯ ಗ್ವಾಲಿಯರ್ ದಕ್ಷಿಣ ಕ್ಷೇತ್ರದಿಂದ ಮೂರನೇ ಬಾರಿ ಬಿಜೆಪಿ ಶಾಸಕರಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X