ಇಂಗ್ಲೆಂಡ್ ಚುನಾವಣೆ | ನಮ್ಮ ಜನ ರಾಜಕಾರಣಕ್ಕೆ ಪಾಠವಾಗಬಲ್ಲ ಕಾರ್ಬಿನ್ ಗೆಲುವು

Date:

Advertisements
ಫ್ರೆಂಚ್ ಲೇಖಕ André Gideನ ‘ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಆಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ’ ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ ಐವತ್ತು ವರ್ಷಗಳಿಂದ ತನ್ನ ದುಡಿಯುವ ವರ್ಗದ ಪರ ಚಿಂತನೆಗಳನ್ನು ಹೇಳುತ್ತಲೇ ಬಂದಿರುವ ಕಾರ್ಬಿನ್ ಎಪ್ಪತ್ತರ ವಯಸ್ಸಿನಲ್ಲಿಯೂ ಆಶಾವಾದ ಕಳೆದುಕೊಂಡಿಲ್ಲ.

ಮಾಜಿ ಲೇಬರ್ ಪಕ್ಷದ ಮುಖಂಡ, ಸಮಾಜವಾದಿ, ರಾಜಕೀಯವಾಗಿ ಎಡಪಂಥೀಯ, ಪ್ಯಾಲೆಸ್ತೀನ್ ಬೆಂಬಲಿಗ ಜೆರ್ಮಿ ಕಾರ್ಬಿನ್ ಈ ಬಾರಿ ಭಾರತೀಯ ಮೂಲದ, ಲೇಬರ್ ಪಕ್ಷದ ಬಲಪಂಥೀಯ ಬೆಂಬಲಿಗ ಪ್ರಫುಲ್ ನರಗುಂದ ಅವರನ್ನು ಸೋಲಿಸಿದ್ದಾರೆ.

1960ರ ದಶಕದಲ್ಲಿ ದ. ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಟದಿಂದ ಶುರುವಾಗಿ ಇತ್ತೀಚಿನ ಇಸ್ರೇಲ್‌ನ ನರಮೇಧದ ವಿರುದ್ಧ ಹೋರಾಡುತ್ತಿರವ ಕಾರ್ಬಿನ್ ಪ್ರಸ್ತುತ ಸಂದರ್ಭದಲ್ಲಿ ತನ್ನ ಸಮಾಜವಾದಿ ನಿಲುವಿಗಾಗಿ ಕಟುವಾಗಿ ಟೀಕೆಗೆ ಒಳಗಾದ ರಾಜಕಾರಣಿ. ಆದರೆ ‘ಗಾಜಾ ಪ್ರದೇಶದಲ್ಲಿನ ಹೆಣಗಳನ್ನು ಕಂಡು ಹೇಗೆ ನಿದ್ರಿಸಬಲ್ಲೆ’ ಎಂದು ವಿಷಾದ ವ್ಯಕ್ತಪಡಿಸಿದ ಕಾರ್ಬಿನ್ ಪರ ಬ್ರಿಟನ್‌ನ ಸಾವಿರಾರು ಪ್ಯಾಲೆಸ್ತೀನ್ ಬೆಂಬಲಿಗರು ನಿಂತರು.

ಇದು ವೈರುಧ್ಯಗಳ ಜಗತ್ತಲ್ಲವೇ?

Advertisements

ಫ್ರೆಂಚ್ ಲೇಖಕ André Gideನ ‘ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಆಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ’ ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ ಐವತ್ತು ವರ್ಷಗಳಿಂದ ತನ್ನ ದುಡಿಯುವ ವರ್ಗದ ಪರ ಚಿಂತನೆಗಳನ್ನು ಹೇಳುತ್ತಲೇ ಬಂದಿರುವ ಕಾರ್ಬಿನ್ ಎಪ್ಪತ್ತರ ವಯಸ್ಸಿನಲ್ಲಿಯೂ ಆಶಾವಾದ ಕಳೆದುಕೊಂಡಿಲ್ಲ.

ನವ ಉದಾರೀಕರಣದ ವಿರುದ್ಧದ ‘ಕಾರ್ಬಿನಿಸಂ’ ನೀತಿಗಳನ್ನು ಲೇಬರ್ ಪಕ್ಷದ ಪ್ರಣಾಳಿಕೆಯಾಗಿ ಪರಿವರ್ತನೆಯಾಗಲಿಲ್ಲ. ಈ ಕಾರಣದಿಂದ ಕಾರ್ಬಿನ್ ನಾಲ್ಕು ದಶಕಗಳಿಂದ ಗೆಲುವು ಸಾಧಿಸಿದರೂ ಸಹ ಆತನ ನೇತೃತ್ವದಲ್ಲಿ 2019ರ ಚುನಾವಣೆಯಲ್ಲಿ ದಯನೀಯವಾಗಿ ಸೋತರು.

ಇದನ್ನು ಓದಿದ್ದೀರಾ?: ಯುಕೆ ಚುನಾವಣೆ | ಕೀರ್ ಸ್ಟಾರ್ಮರ್‌ ಆಡಳಿತದಲ್ಲಿ ಬದಲಾಗುವುದೇ ಬ್ರಿಟನ್?

ಸಮಾನತೆ, ಪ್ರಜಾಪ್ರಭುತ್ವ, ಶಾಂತಿ ಕುರಿತು ಮಾತನಾಡುವ ಕಾರ್ಬಿನ್ ಅವರ ಸಮತಾವಾದವನ್ನು ತೀವ್ರ ಎಡಪಂಥೀಯ ಎಂದು ಟೀಕಿಸಿದ ಲೇಬರ್ ಪಕ್ಷದ ಸ್ಟಾರ್ಮರ್ 2020ರಲ್ಲಿ ಕಾರ್ಬಿನ್‌ರನ್ನು ಪಕ್ಷದಿಂದ ಅಮಾನತು ಮಾಡಿದರು. 2024ರ ಚುನಾವಣೆಯಲ್ಲಿ ಕಾರ್ಬಿನ್ ಮತ್ತು ಪ್ಯಾಲೆಸ್ತೀನ್ ಪರ ಇತರ ನಾಲ್ವರು ಸ್ವತಂತ್ರವಾಗಿ ಸ್ಪರ್ದಿಸಿದಾಗ ಈ ಐವರನ್ನು ಪಕ್ಷದಿಂದ ಹೊರ ಹಾಕಲಾಯಿತು.

ಆದರೆ ಈ ಬಾರಿ ಬ್ರಿಟನ್ನರ ಕನ್ಸರ್ವೇಟಿವ್ ವಿರೋಧಿ ನಿಲುವು ಎಲ್ಲವನ್ನೂ ಬದಲಾಯಿಸಿದೆ.

ಕಾರ್ಬಿನ್ ಜೊತೆಗೆ ಶೋಕತ್ ಅಡಮ್, ಅಯೂಬ್ ಖಾನ್, ಅದ್ನಾನ್ ಹುಸೇನ್, ಇಕ್ಬಾಲ್ ಮಹಮ್ಮದ್ ಸಹ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇವರ ಜೊತೆ ಗ್ರೀನ್ ಪಕ್ಷದ ನಾಲ್ವರು ಗೆದ್ದಿದ್ದಾರೆ. ಇವರೆಲ್ಲರೂ ಮರಳಿ ಪ್ರಗತಿಪರ, ಬಲಪಂಥೀಯ, ನವ ಉದಾರೀಕರಣ ವಿರೋಧಿ ರಾಜಕಾರಣವನ್ನು ಮರಳಿ ಕಟ್ಟಲು ಈ ಗೆಲುವಿನಲ್ಲಿ ಸೂಕ್ತ ಅವಕಾಶ ದೊರಕಿದೆ.

ಮತ್ತು ಜನ ರಾಜಕಾರಣ ಮಾಡಲು ತಡಬಡಾಯಿಸುವ ನಮಗೆ ಒಂದು ಪಾಠವೂ ಸಹ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X