ವಿಕಿಪೀಡಿಯಾ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಎಎನ್ಐ

Date:

Advertisements

ಸುದ್ದಿಸಂಸ್ಥೆ ಎಎನ್‌ಐ ಮೀಡಿಯಾ ಪ್ರೈವೇಟ್‌ ಲಿಮಿಟೆಡ್, ವಿಕಿಪೀಡಿಯಾ ಸಂಸ್ಥೆ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಧ್ಯಂತರ ಪರಿಹಾರಕ್ಕಾಗಿ ಎಎನ್‌ಐ ಪರ ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ನೋಟಿಸ್‌ ಜಾರಿಗೊಳಿಸಿದ್ದು, ಪ್ರಕರಣವನ್ನು ಆಗಸ್ಟ್‌ 20 ರಂದು ವಿಚಾರಣೆ ನಡೆಸಲಾಗುತ್ತದೆ.

ವಿಕಿಪೀಡಿಯಾ ಮಾನಹಾನಿ ಸುದ್ದಿ ಪ್ರಕಟಿಸಿರುವ ಆರೋಪ ಮಾಡಿರುವ ಎಎನ್‌ಐ, ವೆಬ್‌ಸೈಟ್‌ನಿಂದ ಈ ವಿಷಯವನ್ನು ತೆಗೆದುಹಾಕುವಂತೆ ಹೇಳಿದೆ. ಇದರ ಜೊತೆ ಮಾನನಷ್ಟಕ್ಕಾಗಿ 2 ಕೋಟಿ ರೂ. ಪರಿಹಾರವನ್ನು ನೀಡುವಂತೆ ಕೋರಿದೆ.

Advertisements

ಎಎನ್‌ಐ ಬಗ್ಗೆ ವಿಕಿಪೀಡಿಯಾ ಪುಟದಲ್ಲಿ “ಕೇಂದ್ರ ಸರ್ಕಾರದ ಅಧೀನದ ಸುದ್ದಿಸಂಸ್ಥೆಯಾಗಿ ಎಎನ್‌ಐ ಕಾರ್ಯನಿರ್ವಹಿಸುತ್ತಿದ್ದು, ನಕಲಿ ಸುದ್ದಿ ವೆಬ್‌ಸೈಟ್‌ಗಳ ಜಾಲದಿಂದ ವಿಷಯಗಳನ್ನು ಭಿತ್ತರಿಸುವುದು ಹಾಗೂ ತಪ್ಪಾದ ಸುದ್ದಿಗಳನ್ನು ವರದಿ ಮಾಡಲಾಗುತ್ತಿದೆ” ಎಂದು ಹೇಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಎಎನ್‌ಐ ಪರ ವಕೀಲರಾದ ಸಿದ್ಧಾಂತ್‌ ಕುಮಾರ್, ವಿಕಿಪೀಡಿಯಾ ಮಾನನಷ್ಟ ವರದಿಗಳನ್ನು ತನ್ನ ಪುಟದಲ್ಲಿ ವಿವರಿಸಲಾಗಿದೆ. ಸಾರ್ವಜನಿಕ ಉಪಯುಕ್ತತೆಯ ವೇದಿಕೆಯಾಗಿದ್ದು, ಖಾಸಗಿ ವಲಯದಂತೆ ವರ್ತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವಿಕಿಪೀಡಿಯಾದ ಎಎನ್‌ಐ ಮಾಹಿತಿ ಪುಟದಲ್ಲಿ ತನ್ನ ಸ್ವಂತ ತಿದ್ದುಪಡಿ ಸಂಪಾದಕರನ್ನು ಹೊರತುಪಡಿಸಿ ಬಾಹ್ಯ ತಿದ್ದುಪಡಿ ಮಾಡುವವರಿಗೆ ಅನುಮತಿಯನ್ನು ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ನವಿನ್ ಚಾವ್ಲಾ, ವಿಕಿಪೀಡಿಯಾ ತನ್ನ ಅಭಿಪ್ರಾಯಗಳಿಗೆ ಬದ್ಧವಾಗಿದೆ ಆದರೆ ನ್ಯಾಯಾಲಯದ ಮುಂದೆ ಈ ಮಾಹಿತಿಯ ಬಗ್ಗೆ ವಿವರಣೆ ನೀಡಬೇಕು ಎಂದು ತಿಳಿಸಿದರು.

ವಿಕಿಪೀಡಿಯಾ ಎಎನ್‌ಐ ಬಗ್ಗೆ ತನ್ನ ಪುಟದಲ್ಲಿ ಪ್ರಕಟಿಸಿರುವ ಮಾಹಿತಿ ಸುಳ್ಳಿನಿಂದ ಕೂಡಿದ್ದು, ಸಂಸ್ಥೆಯ ಘನತೆಗೆ ಧಕ್ಕೆ ತರುವಂತ ಕೆಲಸ ಮಾಡಿದೆ. ಒಳ್ಳೆಯ ಉತ್ತಮ ಸಂಸ್ಥೆಯ ಬಗ್ಗೆ ಅಪಖ್ಯಾತಿ ತರುವ ಗುರಿಯನ್ನು ಹೊಂದಿದೆ ಎಂದು ಎಎನ್‌ಐ ಆರೋಪಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X