ಅಪಘಾತದ ನಂತರ ಗೆಳತಿಗೆ 40 ಬಾರಿ ಕರೆ ಮಾಡಿದ್ದ ಮುಂಬೈ ಹಿಟ್ ಆ್ಯಂಡ್ ರನ್ ಪ್ರಕರಣದ ಆರೋಪಿ

Date:

Advertisements

ಬಿಎಂಡಬ್ಲ್ಯು ಕಾರಿನ ಮೂಲಕ 45 ವರ್ಷದ ಮಹಿಳೆಯೊಬ್ಬರ ಸಾವಿಗೆ ಕಾರಣನಾಗಿದ್ದ ಮುಂಬೈ ಹಿಟ್ ಆ್ಯಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಜುಲೈ 7 ರಂದು ಅಪಘಾತ ನಡೆಸಿದ ನಂತರ ತನ್ನ ಗೆಳತಿಗೆ 40 ಬಾರಿ ಕರೆ ಮಾಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಪಘಾತ ನಡೆಸಿದ ನಂತರ ಬಂಧನವಾಗುವುದಕ್ಕೂ ಮುನ್ನ ಮಿಹಿರ್‌ ಶಾ ಮಹಾರಾಷ್ಟ್ರದ ಹಲವು ಕಡೆ ಸಂಚರಿಸಿ ರೆಸಾರ್ಟ್‌ಗಳಲ್ಲಿ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ತಿಳಿದ ನಂತರ ಮಿಹಿರ್‌ ಶಾ ಗೆಳತಿ ಆರೋಪಿಯ ಸಹೋದರಿಗೆ ಕರೆ ಮಾಡಿದ್ದಾರೆ. ನಂತರ ಮಿಹಿರ್‌ನನ್ನು ಸಹೋದರಿ ಗೊರೆಗಾವ್‌ನಿಂದ ಬೊರಿವಾಲಿಯ ಮನೆಗೆ ಕರೆದೊಯ್ದಿದ್ದಾರೆ.

Advertisements

ಮನೆಗೆ ಬಂದ ನಂತರ ಮಿಹಿರ್‌ ಶಾ ತನ್ನ ಸ್ನೇಹಿತನೊಂದಿಗೆ ಥಾಣೆಯ ರೆಸಾರ್ಟ್‌ಗೆ ತೆರಳಿದ. ಕೆಲವು ಗಂಟೆಗಳ ನಂತರ ಮುರ್ಬಾದ್‌ನ ಮತ್ತೊಂದು ರೆಸಾರ್ಟ್‌ಗೆ ಹೋಗಿದ್ದಾನೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

ಒಂದು ದಿನದ ನಂತರ ಆರೋಪಿ ಮತ್ತು ಆತನ ಸ್ನೇಹಿತ ಶಹಾಪುರ್‌ನ ಬೇರೊಂದು ರೆಸಾರ್ಟ್‌ಗೆ ತೆರಳಿದರು. ಅಂತಿಮವಾಗಿ 72 ಗಂಟೆಯ ನಂತರ ಮಿಹಿರ್ ಶಾನನ್ನು ಬಂಧಿಸಲಾಯಿತು. ಬಂಧನಕ್ಕೂ 15 ನಿಮಿಷ ಮುನ್ನ ಆರೋಪಿಯ ಫೋನ್‌ ಸ್ವಿಚ್‌ ಆಫ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ವಾರ್ಲೆ ಪ್ರದೇಶದಲ್ಲಿ ಜುಲೈ 7ರಂದು ಮೀನು ಮಾರಾಟಗಾರರಾದ ದಂಪತಿ ಪ್ರದೀಪ್‌ ನಖ್ವಾ ಹಾಗೂ ಕಾವೇರಿ ನಖ್ವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಮಿಹಿರ್ ಶಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದೆ. ಸ್ಕೂಟರ್‌ನಿಂದ ಪ್ರದೀಪ್‌ ನಕ್ವಾ ಅವರು ಕೆಳಗೆ ಬಿದ್ದ ನಂತರ ಕಾವೇರಿ ನಖ್ವಾ ಅವರು ಕಾರಿನಡಿ ಸಿಲುಕಿದ್ದಾರೆ. ಕಾವೇರಿ ಅವರನ್ನು 100 ಮೀಟರ್‌ವರೆಗೂ ಕಾರು ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಬಿಎಂಡಬ್ಲ್ಯು ಕಾರು ಆರೋಪಿ ತಂದೆ ಏಕ್‌ನಾಥ್ ಶಿಂಧೆ ಬಣದ ನಾಯಕ ರಾಜೇಶ್ ಶಾ ಹೆಸರಿನಲ್ಲಿ ನೋಂದಣಿಯಾಗಿದ್ದು, ಪೊಲೀಸರು ಮೊದಲು ರಾಜೇಶ್ ಶಾ ಹಾಗೂ ಚಾಲಕನನ್ನು ಬಂಧಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X