ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

Date:

Advertisements

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಏಳು ಬಾರಿಯ ಚಾಂಪಿಯನ್‌ ನೊವಾಕ್ ಜೊಕೊವಿಚ್‌ ಅವರನ್ನು ಸೋಲಿಸಿ ಟೆನಿಸ್‌ ಸಿಂಗಲ್ಸ್‌ ಪ್ರಶಸ್ತಿ ಉಳಿಸಿಕೊಂಡರು.

ಶಕ್ತಿಶಾಲಿ ಹೊಡೆತಗಳ ಜೊತೆಗೆ ನವಿರಾದ ‘ಡ್ರಾಪ್‌’ಗಳ ಜೊತೆ ಆಡಿದ ಮೂರನೇ ಶ್ರೇಯಾಂಕದ ಅಲ್ಕರಾಜ್‌ 6–2, 6–2, 7–6 (7–4)ರಿಂದ ಜಯಗಳಿಸಿದರು. ಇದು ಸ್ಪೇನ್‌ ಆಟಗಾರನಿಗೆ ವೃತ್ತಿ ಜೀವನದ ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ.

1968ರಲ್ಲಿ ಟೆನಿಸ್‌ನಲ್ಲಿ ಓಪನ್ ಯುಗ ಆರಂಭವಾದ ಮೇಲೆ 21 ವರ್ಷ ವಯಸ್ಸಿನೊಳಗೇ ಅತಿ ಹೆಚ್ಚು (ತಲಾ ನಾಲ್ಕು) ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಮೂವರು ಮಹಾನ್ ಆಟಗಾರರ ಸಾಲಿಗೆ ಈಗ ಅಲ್ಕರಾಜ್ ಸೇರ್ಪಡೆಯಾದರು. ಜರ್ಮನಿಯ ಬೋರಿಸ್‌ ಬೆಕರ್‌, ಸ್ವೀಡನ್‌ನ ಬ್ಯೋನ್‌ ಬೋರ್ಗ್ ಮತ್ತು ಮ್ಯಾಟ್ಸ್‌ ವಿಲಾಂಡರ್‌ ಇತರ ಮೂವರು.

Advertisements

ಕೆಲವೇ ವಾರಗಳ ಹಿಂದೆ ಮೊಣಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ಜೊಕೊವಿಚ್‌ ಅವರು 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲುವಿನ ಯತ್ನದಲ್ಲಿದ್ದರು. ಸರ್ಬಿಯಾದ ಆಟಗಾರ ಅದನ್ನು ಸಾಧಿಸಿದಲ್ಲಿ ಪುರುಷರ ಅಥವಾ ಮಹಿಳೆಯರ ಟೆನಿಸ್‌ನಲ್ಲಿ ದಾಖಲೆಯಾಗುತಿತ್ತು.

ಈ ಸುದ್ದಿ ಓದಿದ್ದೀರಾ? ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ಮೊದಲ ಗೇಮ್‌ನಿಂದಲೇ ಸ್ಪೇನ ಆಟಗಾರ ಹಿಡಿತ ಸಾಧಿಸಿದರು. ಐದನೇ ಗೇಮ್‌ಅನ್ನು ಜೊಕೊವಿಚ್‌ ಡಬಲ್‌ಫಾಲ್ಟ್‌ ಮೂಲಕ ಕಳೆದುಕೊಂಡಾಗ ಅಲ್ಕರಾಜ್ 4–1 ಮುನ್ನಡೆ ಪಡೆದರು. ಹತ್ತನೇ ಬಾರಿ ಇಲ್ಲಿ ಫೈನಲ್ ಆಡುತ್ತಿರುವ ಜೊಕೊವಿಚ್‌ ತಮ್ಮ ಮುಂದಿನ ಸರ್ವ್‌ ವೇಳೆ ಒಂದೂ ಪಾಯಿಂಟ್‌ ಬಿಟ್ಟುಕೊಡದೇ ಹಿನ್ನಡೆಯನ್ನು 5–2ಕ್ಕೆ ಇಳಿಸಿದರು. ಆದರೆ ಅಲ್ಕರಾಜ್ ತಮ್ಮ ಗೇಮ್ ಉಳಿಸಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಅಲ್ಕರಾಜ್‌ ಹಿಡಿತ ಮುಂದುವರಿಯಿತು. ಮೂರನೇ ಸೆಟ್‌ನಲ್ಲಿ ಜೊಕೊವಿಚ್‌ ಹೋರಾಟ ತೋರಿ ಟೈಬ್ರೇಕರ್‌ವರೆಗೆ ಮುಂದುವರೆಸುವಲ್ಲಿ ಯಶಸ್ವಿಯಾದರು.

ಒಳ್ಳೆಯ ಹಣಾಹಣಿಯ ನಿರೀಕ್ಷೆಯೊಡನೆ ಬಂದಿದ್ದ ಪ್ರೇಕ್ಷಕರಲ್ಲಿ ವೇಲ್ಸ್‌ನ ರಾಜಕುಮಾರಿ ಕ್ಯಾಥರಿನ್‌ ಅವರೂ ಒಳಗೊಂಡಿದ್ದರು. ಆದರೆ ಅವರಿಗೆ ಏಕಪಕ್ಷೀಯ ಪಂದ್ಯ ನಡೆದಿದ್ದು ನಂಬಲಾಗಲಿಲ್ಲ. ಜೊಕೊವಿಚ್ ಈ ವರ್ಷ ಒಂದೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲಾಗಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X