ಮುಂಗಾರು ಮಳೆ ಆರ್ಭಟ ಜೋರು; 14 ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ

Date:

Advertisements

ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ, ಕಾವೇರಿ ನದಿ ಜಲಾಶಯಗಳು ಶೇ.66 ರಷ್ಟು ತುಂಬಿದ್ದು, ಕೃಷ್ಣಾ ನದಿಯ ಜಲಾಶಯಗಳು ಶೇ. 51ರಷ್ಟು ಭರ್ತಿಯಾಗಿವೆ.

ನೀರು ಹೆಚ್ಚು ಸಂಗ್ರಹವಿರುವ ಜಲಾಶಯಗಳ ಪೈಕಿ ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳೇ ಮುಂಚೂಣಿಯಲ್ಲಿದ್ದು, ನೀರಿನ ಮಟ್ಟ ಚೆನ್ನಾಗಿದೆ.

Advertisements

ಕೃಷ್ಣಾ ಜಲಾನಯನ ಪ್ರದೇಶದ ಡ್ಯಾಂಗಳು ಅರ್ಧದಷ್ಟು ಭರ್ತಿಯಾಗಿವೆ. ಮಲೆನಾಡಿನ ಡ್ಯಾಂಗಳು ಶೇ. 35 ರಷ್ಟು ಮಾತ್ರ ಭರ್ತಿಯಾಗಿವೆ.

ದುಪ್ಪಟ್ಟು ನೀರು ಸಂಗ್ರಹ

2023 ಜುಲೈ 15 ಕ್ಕೆ ಹೋಲಿಸಿದರೆ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟವು ಈ ವರ್ಷ ದುಪ್ಪಟ್ಟು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 14 ಜಲಾಶಯಗಳಲ್ಲಿ ಒಟ್ಟು 220 ಟಿಎಂಸಿ ನೀರಿತ್ತು. ಈ ವರ್ಷ 421 ಟಿಎಂಸಿ ನೀರು ಸಂಗ್ರಹವಿದೆ.

ಇನ್ನೂ ಎರಡೂವರೆ ತಿಂಗಳು ಮಳೆ

ರಾಜ್ಯಕ್ಕೆ ಮುಂಗಾರು ಆಗಮಿಸಿ ಒಂದೂವರೆ ತಿಂಗಳಾಗಿದ್ದು, ಮುಂದಿನ ಎರಡೂವರೆ ತಿಂಗಳು ಮಳೆಯಾಗಲಿದ್ದು, ಜಲಾಶಯಗಳೆಲ್ಲಾ ಪೂರ್ತಿಯಾಗಿ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳು ನೀರಿನ ಮಟ್ಟ

ಭದ್ರಾ – ಶೇ.39 ಭರ್ತಿ
ತುಂಗಭದ್ರಾ – ಶೇ.31 ಭರ್ತಿ
ಘಟಪ್ರಭಾ – ಶೇ.52 ಭರ್ತಿ
ಮಲಪ್ರಭಾ – ಶೇ.34 ಭರ್ತಿ
ಆಲಮಟ್ಟಿ – ಶೇ.74 ಭರ್ತಿ
ನಾರಾಯಣಪುರ – ಶೇ. 68 ಭರ್ತಿ

ಕಾವೇರಿ ಜಲಾಶಯಗಳು

ಹಾರಂಗಿ – ಶೇ. 83 ಭರ್ತಿ
ಹೇಮಾವತಿ – ಶೇ.61 ಭರ್ತಿ
ಕೆಆರ್‌ಎಸ್‌ – ಶೇ. 55 ಭರ್ತಿ
ಕಬಿನಿ – ಶೇ.95 ಭರ್ತಿ

ಮಲೆನಾಡಿನ ಜಲಾಶಯಗಳು

ಲಿಂಗನಮಕ್ಕಿ – ಶೇ.34 ಭರ್ತಿ
ಸೂಪ – ಶೇ. 36 ಭರ್ತಿ
ವರಾಹಿ – ಶೇ. ಭರ್ತಿ

 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X