ಕೇಂದ್ರ ಬಜೆಟ್‌ | ನಿಜವಾದ ‘ಚಾರ್‌ ಸೋ ಪಾರ್’ ಮಾಡಲು ಪ್ರಧಾನಿಗೆ ಅವಕಾಶ ಎಂದ ಕಾಂಗ್ರೆಸ್!

Date:

Advertisements

ಕೇಂದ್ರ ಬಜೆಟ್ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶಾದಾದ್ಯಂತ ‘ಚಾರ್‌ ಸೋ ಪಾರ್’ (400ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು) ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ರಾಷ್ಟ್ರವ್ಯಾಪಿ ಕನಿಷ್ಠ ವೇತನ 400 ರೂಪಾಯಿಗೂ ಅಧಿಕ ಮಾಡಬಹುದು ಎಂದು ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಕನಿಷ್ಠ ವೇತನವೊಂದರ ಡೇಟಾವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ‘ಚಾರ್‌ ಸೋ ಪಾರ್’ ಮಾಡುವ ಅವಕಾಶದ ಬಗ್ಗೆ ವಿವರಿಸಿದ್ದಾರೆ.

‘ನೈಜ ವೇತನ ಕುಸಿತ’ದ ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್, “ಲೋಕಸಭೆಯಲ್ಲಿ ಚಾರ್ ಸೋ ಪಾರ್ ಅನ್ನು ತಲುಪುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತದಾರರು ಛೀಮಾರಿ ಹಾಕಿದ್ದಾರೆ. ಆದರೆ ಬಜೆಟ್ ಅವರಿಗೆ ಅವಕಾಶ ನೀಡುತ್ತದೆ. ದಿನಕ್ಕೆ 400 ರೂಪಾಯಿಗಳ ರಾಷ್ಟ್ರವ್ಯಾಪಿ ಕನಿಷ್ಠ ವೇತನದ ಅಸಲಿ ಚಾರ್‌ ಸೋ ಪಾರ್‌ ಅನ್ನು ಸಾಧಿಸುವ ಅವಕಾಶವಿದೆ” ಎಂದು ಹೇಳಿದೆ.

Advertisements

ಇದನ್ನು ಓದಿದ್ದೀರಾ?  ಮಹಾರಾಷ್ಟ್ರ| ಅಜಿತ್ ಅಲ್ಲ ಬಿಜೆಪಿಯ ‘ಚಾರ್‌ ಸೌ ಪಾರ್’ ಚುನಾವಣೆ ಸೋಲಿಗೆ ಕಾರಣ: ಮಿತ್ರ ಪಕ್ಷದ ಸಚಿವ

“10 ವರ್ಷಗಳ ಹಿಂದೆ ಕಾರ್ಮಿಕರು ಎಷ್ಟು ಆಹಾರ, ವಸ್ತು ಸಾಮಾಗ್ರಿಗಳ ಖರೀದಿಸುವ ಆರ್ಥಿಕ ಬಲವನ್ನು ಹೊಂದಿದ್ದರೋ ಅದಕ್ಕಿಂತ ಅತೀ ಕಡಿಮೆ ಸಾಮರ್ಥ್ಯವನ್ನು ಪ್ರಸ್ತುತ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ಸೇರಿದಂತೆ ಅನೇಕ ಡೇಟಾ ಮೂಲಗಳು ತೋರಿಸುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಇನ್ನು ಲೇಬರ್ ಬ್ಯೂರೋದ ವೇತನ ದರ ಸೂಚ್ಯಂಕದ ಸರ್ಕಾರಿ ದತ್ತಾಂಶವನ್ನು ಉಲ್ಲೇಖಿಸಿದ ರಮೇಶ್, “ಕಾರ್ಮಿಕರ ನೈಜ ವೇತನವು 2014 ಮತ್ತು 2023ರ ನಡುವೆ ಸ್ಥಿರವಾಗಿದೆ. ವಾಸ್ತವವಾಗಿ 2019 ಮತ್ತು 2024 ರ ನಡುವೆ ಕುಸಿದಿದೆ” ಎಂದು ಹೇಳಿದರು.

ಕೃಷಿ ಸಚಿವಾಲಯದ ಕೃಷಿ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, ಮನಮೋಹನ್ ಸಿಂಗ್ ಸರ್ಕಾರದಡಿಯಲ್ಲಿ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ ಶೇಕಡ 6.8ರಷ್ಟು ಏರಿಕೆಯಾಗಿದೆ. ಆದರೆ ಮೋದಿ ಸರ್ಕಾರದಡಿಯಲ್ಲಿ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ ಋಣಾತ್ಮಕ ಶೇಕಡ 1.3ರಷ್ಟು (-1.3 %) ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X