ಧಾರವಾಡ | ಕಲ್ಲು ನಾಗರಕ್ಕೆ ಹಾಲೆರೆಯುವುದು ವ್ಯರ್ಥ : ಜಯಮೃತ್ಯುಂಜಯ ಸ್ವಾಮೀಜಿ

Date:

Advertisements

ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನು ಎರೆಯುವುದು ವ್ಯರ್ಥ. ಅದು ಮಣ್ಣು, ಕಲ್ಲು ಪಾಲಾಗುತ್ತದೆ, ಬದಲಿಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಮತ್ತು ಅಗತ್ಯವಿದ್ದರಿಗೆ ಹಾಲು ವಿತರಿಸಬೇಕು ಎಂದು ಕೂಡಲ ಸಂಗಮ ಪಂಚಮ  ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.

ಪಂಚಸೇನಾ ರಾಜ್ಯ ಸೇನಾನಿಗಳ ಸಹಯೋಗದಲ್ಲಿ ಧಾರವಾಡದ ಕಿವುಡ ಹಾಗೂ ಮೂಕರ ಹೊನ್ನಮ್ಮ ವಸತಿ ಶಾಲೆಯಲ್ಲಿ ನಾಗ ಪಂಚಮಿಯ ಹಬ್ಬವನ್ನು ಕಿವುಡ ಮತ್ತು ಮಂದ ಮಕ್ಕಳಿಗೆ ಹಾಲು ವಿತರಿಸಿದರು.

ಬಸವ ಪಂಚಮಿ 27ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಹಾಲು ಕುಡಿಯುವ ಮತ್ತು ಕುಡಿಸುವ ಹಬ್ಬದ ಸಪ್ತಾಹ ಕಾರ್ಯಕ್ರಮ‌ ಕಿವುಡು ಮತ್ತು ಮೂಕರ ಮಕ್ಕಳ ಹೊನ್ನಮ್ಮ ಶಿಕ್ಷಣ ಸಂಸ್ಥೆ ಸರಸ್ವತಪುರ, ಟೋಲನಾಕಾ ಸೇರಿ ನಗರದ ವಿವಿಧೆಡೆ ನಡೆಯಿತು.

Advertisements

ʼಕಲ್ಲು ನಾಗರ ಹಾವಿಗೆ ಎರೆಯುವ ಹಾಲು, ಬಡ ಮಕ್ಕಳ ಪಾಲು ಎಂಬ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಎರೆಯುವುದು ತಪ್ಪು. ಇದೊಂದು ಮೂಢನಂಬಿಕೆ. ಪೌಷ್ಠಿಕ ಹಾಲು ವ್ಯರ್ಥ ಮಾಡಬಾರದು. ಮೊಟ್ಟೆಯಿಂದ ಜೀವ ಪಡೆದ ಯಾವುದೇ ಪಕ್ಷಿ, ಪ್ರಾಣಿಯೂ ಹಾಲು ಕುಡಿಯುವುದಿಲ್ಲ. ಅಂತಹ ಪಕ್ಷಿ, ಪ್ರಾಣಿಗಳಿಗೆ ಹಾಲು ಹಾಕಿದರೆ ವ್ಯರ್ಥವಾಗುತ್ತದೆ. ಪೌಷ್ಠಿಕವುಳ್ಳ ಸದ್ಬಳಕೆಯಾಗಲಿʼ ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಾಜಿ ಸಿಎಂ ಕುಮಾರಸ್ವಾಮಿ ಅನುಮೋದಿಸಿದ್ದ ಬೋಗಸ್ ಕಂಪನಿಯ ಇತಿಹಾಸ

ಕಾರ್ಯಕ್ರಮದಲ್ಲಿ ಪಂಚಸೇನಾ ರಾಜ್ಯ ಪದಾಧಿಕಾರಿ ರುದ್ರಗೌಡ ಸೋಲಬಗೌಡ್ರ, ಕಾರ್ಯದರ್ಶಿ ಸಂಗನಗೌಡ ಹೂವನ್ನವರ, ನಿಂಗಣ್ಣ ಕರೀಕಟ್ಟಿ, ನಾಗಪ್ಪ ಮುಮ್ಮಿಗಟ್ಟಿ, ವಿದ್ಯಾ ಪಾಟೀಲ, ಪೂಜಾ ಸವದತ್ತಿ, ಅಡಿವೆಪ್ಪ ಸಲಕಿ, ರಾಘವೇಂದ್ರ ಘಟ್ಟದ, ಮೈಲಾರ ಪಂಚನ್ನವರ, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ತಾಯಂದಿರು ಹಿರಿಯರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

Download Eedina App Android / iOS

X