ಮುಂದಿನ ಪೀಳಿಗೆಗೆ ನಾವು ಕೊಡುಗೆ ನೀಡುವುದಾದರೆ ಪರಿಸರ ಉಳಿಸಬೇಕು. ಹಾಗಾಗಿ ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳುವೆ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಹಮ್ಮಿಲಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಮಾದರಿಯ ಗಿಡಗಳು ಹಾಗೂ ಹಣ್ಣಿನ ಗಿಡಗಳನ್ನು ನೀಡಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಉತ್ತಮ ಪರಿಸರವನ್ನು ಉಳಿಸಿಕೊಳ್ಳಲು ಮಕ್ಕಳು ಶೈಕ್ಷಣಿಕ ಹಂತದಲ್ಲಿ ಅದರ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಮುಂದಿನ ಪೀಳಿಗೆಗೆ ಮತ್ತು ನಮ್ಮ ರಕ್ಷಣೆಗೆ ಪರಿಸರ ಅಗತ್ಯ” ಎಂದು ತಿಳಿಸಿದರು.
ವಲಯ ತರಬೇತಿದಾರ ಕೆಪಿಎಸ್ ಸ್ವಾಮಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಪರಿಸರವು ಹೇಗೆ ಕುಲಷಿತವಾಗುತ್ತಿದೆ ಎಂದು ನಾವು ತಿಳಿಯಲ್ಪಟ್ಟಿದ್ದೇವೆ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಅವಘಡಗಳು ಸಂಭವಿಸದಂತೆ ಮಣ್ಣಿನ ರಕ್ಷಣೆಯನ್ನು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು” ಎಂದು ತಿಳಿಸಿದರು.

ಪೂರ್ವಾಧ್ಯಕ್ಷ ನಾಗರಾಜ್ ಮಾತನಾಡಿ, “ಶಾಲಾ ಮಕ್ಕಳು ಒಂದು ಗಿಡದ ಜವಾಬ್ದಾರಿಯನ್ನು ತೆಗೆದುಕೊಂಡು ಸಂರಕ್ಷಿಸಿದರೆ ಅವರಿಗೆ ಮುಂದಿನ ಆರು ತಿಂಗಳಲ್ಲಿ ಬಹುಮಾನ ನೀಡುತ್ತೇವೆ” ಎಂದು ಮಕ್ಕಳಿಗೆ ಉತ್ತೇಜನ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನನ್ನನ್ನು ಕೊಲ್ಲಲು ಮುಸ್ಲಿಂ ಯುವಕರಿಗೆ ಸುಪಾರಿ ನೀಡಲಾಗಿದೆ: ಅಂಜುಮನ್ ಮುಖಂಡ ಇಸ್ಮಾಯೀಲ್ ತಮಟಗಾರ
ನಿಕಟಪೂರ್ವ ಅಧ್ಯಕ್ಷ ಭರತ್ ಕುಮಾರ್, ಅಂಬಳಿಕೆ ಗಿರೀಶ್, ಮನೋಜ್ ಕುಮಾರ್, ಪಿ ವಿ ಭರತ್ ಕುಮಾರ್, ವಾಣಿ ಗಣೇ, ಇನ್ನರ್ವೀಲ್ ಕ್ಲಬ್ ತೀರ್ಥಹಳ್ಳಿ ರೊ. ನಯನ ಜಯಪ್ರಕಾಶ್ ಶೆಟ್ಟಿ, ಜ್ಯೋತಿ, ಪ್ರತಿಮಾ, ವಿಶ್ವನಾಥ ಶೆಟ್ಟಿ ಸೇರಿದಂತೆ ಶಿಕ್ಷಕರು ಊರಿನ ಗ್ರಾಮಸ್ಥರು ಇದ್ದರು.
ವರದಿ: ರಶ್ಮಿ ಶ್ರೀಕಾಂತ್ ನಾಯಕ್, ತೀರ್ಥಹಳ್ಳಿ