ಬಂಗಾರಪೇಟೆ | ಸಂಸದ ಮುನಿಸ್ವಾಮಿ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ: ಶಾಸಕ ನಾರಾಯಣಸ್ವಾಮಿ

Date:

Advertisements
  • ʼಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯʼ
  • ʼನಾಲ್ಕು ವರ್ಷಗಳಲ್ಲಿ ಮುನಿಸ್ವಾಮಿ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲʼ

ಡಿಕೆ ರವಿಗೂ ನನಗೂ ಏನ್ರೀ ಸಂಬಂಧ. ಸಂಸದ ಮುನಿಸ್ವಾಮಿ ಅವರ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ ಇಲ್ಲ ಎಂದು ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಡಿ.ಕೆ ರವಿಯನ್ನು ಕೊಲೆ ಮಾಡಿದ್ದು ಶಾಸಕ ಎಸ್.ಎನ್ ನಾರಾಯಣಸ್ವಾಮಿ’ ಎಂದು ಸಂಸದ ಮುನಿಸ್ವಾಮಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಾಯರಾಯಣಸ್ವಾಮಿ, “ಬಿಜೆಪಿ ಸಂಸದ ಮುನಿಸ್ವಾಮಿ ಅವರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್‌ ಇಲ್ಲ” ಎಂದು ಕಿಡಿಕಾರಿದ್ದಾರೆ.

“ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ನನ್ನ ಪಕ್ಕಾ ಶಿಷ್ಯ. ನಾನು ಪ್ರೀತಿಯಿಂದ ಇಲ್ಲಿಗೆ ಹಾಕಿಸ್ಕೊಂಡು ಬಂದೋನು. ಅವನನ್ನು ಯಾರು ಹತ್ಯೆ ಮಾಡಿದ್ರು ಅಂತಾ ನಿನಗೆ ಗೊತ್ತು. ಅವನು ಜೈಲಿಗೆ ಹೋಗಿದ್ದೂ ನಿನಗೆ ಗೊತ್ತುʼʼ  ಎಂದು ಮುನಿಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Advertisements

“ಮುನಿಸ್ವಾಮಿ ನೀನು ನಿಮ್ಮಪ್ಪನಿಗೆ ಹುಟ್ಟಿದ್ದರೆ ನಾನೇ ಕೊಲೆ ಮಾಡಿದೀನಿ ಅಂತ ಸಾಬೀತು ಮಾಡು. ಆಗ ಸಾರ್ವಜನಿಕವಾಗಿ ಬಜಾರಿನಲ್ಲಿ ನೇಣು ಬಿಗಿದುಕೊಳ್ಳುತ್ತೇನೆ. ನೀನು ಸಂಸದನಾಗಿದ್ದೀಯ, ಇಂಥ ಮಾತೆಲ್ಲ ಆಡಬಾರದು. ಏನು ಮಾತಾಡಬೇಕು ಅಂತ ಅರಿತುಕೊಂಡು ಮಾತಾಡು. ನೀನು ಗಾಳಿಯಲ್ಲಿ ತೂರಿಕೊಂಡು ಬಂದವನು. ನೀನೊಬ್ಬ ರೌಡಿಶೀಟರ್‌, ಬ್ಲಾಕ್ ಮೇಲರ್‌, ನಾಲ್ಕು ವರ್ಷಗಳಲ್ಲಿ ನಿನ್ನ ಅಭಿವೃದ್ಧಿ ಶೂನ್ಯವೇ ಹೊರತು ಬೇರೇನಿಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಾಲೂರು | ಬಿಜೆಪಿ ಅಭ್ಯರ್ಥಿ ಪರ ಮುನಿಸ್ವಾಮಿ ಮತಯಾಚನೆ; ‌ಸ್ಥಳೀಯರಿಂದ ತರಾಟೆ

ಎಸ್.ಎನ್.ಲೇಔಟ್‌ ಬಗೆಗಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್.ಎನ್.‌ ನಾರಾಯಣಸ್ವಾಮಿ, “ನಾನೇನಾದ್ರು ಕೆರೆಗಳು ಮುಚ್ಚಿ ಲೇಔಟ್ ಮಾಡಿದ್ದೀನಾ? ಒಂದು ವೇಳೆ ನೀವು ಹೇಳಿದ ಪ್ರಕಾರ ನಾನು ಕೆರೆಗಳ ಒಂದಿಂಚು ಜಾಗ ತೆಗೆದುಕೊಂಡು ಲೇಔಟ್‌ ಮಾಡಿದ್ದನ್ನು ಎಮ್. ನಾರಾಯಣಸ್ವಾಮಿ ಆಗಲಿ ಮುನಿಸ್ವಾಮಿಯಾಗಲಿ ಯಾರಾದರೂ ರುಜುವಾತು ಮಾಡಿದ್ರೆ ಎಂಎಲ್ಎ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಾನು ಈ ಕ್ಷಣದಿಂದಲೇ ರಾಜಕೀಯ ನಿವೃತ್ತಿ ಪಡೆದು ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇನೆ. ನಾನು ಸಾಯುವ ತನಕ ಅವರ ಮನೆಯಲ್ಲಿ ಜೀತದಾಳಾಗಿ ಇರುತ್ತೇನೆ” ಎಂದು ನೇರ ಸವಾಲು ಹಾಕಿದರು.

“ಎಮ್ ನಾರಾಯಣಸ್ವಾಮಿ  ಮತ್ತು ಮುನಿಸ್ವಾಮಿ ತರ ಕಾಂಗ್ರೆಸ್‌ ಪಕ್ಷದಿಂದ ಗೆದ್ದು 35 ಕೋಟಿ ತೆಗೆದುಕೊಂಡು ಪಕ್ಷಾಂತರ ಮಾಡಿಲ್ಲ. ಪಕ್ಷಾಂತರ ಹಣದಿಂದ ದಾವಣಗೆರೆಯಲ್ಲಿ, ಯಲ್ಲಹಂಕದಲ್ಲಿ ಆಸ್ತಿಗಳನ್ನು ಮಾಡಿ ಕೋಳಿಫಾರ್ಮ್ ಮಾಡಿ ಹಣ ಮಾಡಿರೋನು ನೀನು. ಆದರೆ ನಾರಾಯಣಸ್ವಾಮಿಗೆ ರಾಜಕೀಯಕ್ಕೆ ಬರೋದಕ್ಕಿಂತ ಮುಂಚೆಯೇ ರೆಸಾರ್ಟ್‌ ಇತ್ತು. ಬೆಂಗಳೂರು, ಹೊಸಕೋಟೆ, ಮಾಲೂರುಗಳಲ್ಲಿ ಆಸ್ತಿ ಇತ್ತು. ಗಾಲ್ಫ್, ಕ್ರೂಜರ್‌, ಆಸ್ಪತ್ರೆ ಎಲ್ಲವೂ ಇದ್ದವು. ಇವೆಲ್ಲವನ್ನೂ ಮಾರಿಕೊಂಡು ರಾಜಕೀಯಕ್ಕೆ ಬಂದವನು ನಾನು. ಈ ನಾರಾಯಣಸ್ವಾಮಿ ನಿನ್ನಂತೆ ರೌಡಿಸಂ ಮಾಡಿಕೊಂಡು ರಾಜಕೀಯಕ್ಕೆ ಬಂದವನಲ್ಲ” ಎಂದು ತಿರುಗೇಟು ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X