- ಬಿಜೆಪಿಗೆ ಮತ ಹಾಕುವುದಿಲ್ಲ ಎಂದ ಮಾಲೂರು ಗ್ರಾಮಸ್ಥರು
- ಮಾಲೂರು ಕ್ಷೆತ್ರದಲ್ಲಿ ಪ್ರಬಲ ಪೈಪೋಟಿಗೆ ತಯಾರಾಗಿರುವ ವಿಜಯ ಕುಮಾರ
ಕರ್ನಾಟಕ ವಿಧಾನಸಭಾ ಚುನಾವಣೆ 2023 ಹತ್ತಿರ ಬರುತಿದ್ದಂತೆ ಎಲ್ಲ ಪಕ್ಷಗಳಿಂದ ಭರಾಟೆ ಪ್ರಚಾರ ನಡೆಯುತ್ತಿದೆ. ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಪರವಾಗಿಕೋಲಾರ ಸಂಸದ ಮುನಿಸ್ವಾಮಿ ಗುರುವಾರ ರಾತ್ರಿ ಮತಯಾಚನೆ ನಡೆಸಿದ್ದಾರೆ. ಈ ವೇಳೆ, ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಅಸಂಡಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಸಂಸದ ಮುನಿಸ್ವಾಮಿ ಮತಯಾಚನೆಗೆ ತೆರಳಿದ್ದರು. ಗ್ರಾಮದ ತಿಗಳ ಸಮುದಾಯದ ಯುವಕರು ಮತ್ತು ಗ್ರಾಮಸ್ಥರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಹೂಡಿ ವಿಜಯ ಕುಮಾರ್ ಮೊದಲಿಂದಲೂ ಬಿಜೆಪಿ ಸಂಘಟನೆ ಮಾಡಿಕೊಂಡು ಬಂದಿದ್ದು, ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದರು. ಅಂಥವರಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್ನಿಂದ ಬಿಜೆಪಿಗೆ ಬಂದವರಿಗೆ ಟಿಕೆಟ್ ಕೊಡಿಸಿದ್ದೀರಿ. ವಿಜಯ್ಗೆ ಟಿಕೆಟ್ ಕೈ ತಪ್ಪಲು ಮುಖ್ಯವಾಗಿ ನೀವೆ ಕಾರಣ. ಹಾಗಾಗಿ, ನೀವು ಇಲ್ಲಿ ಮತ ಕೇಳಲು ಬರಬೇಡಿ. ಬಿಜೆಪಿಗೆ ಮತ ಹಾಕುವುದಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತಿಗಳ ಸಮುದಾಯದ ಮತ್ತು ಬಿಬಿಎಂಪಿ ಮಾಜಿ ಸದಸ್ಯರೂ ಆಗಿರುವ ಹೂಡಿ ವಿಜಯ್ ಕುಮಾರ್ ಅವರು ಬಿಜೆಪಿಯ ಪ್ರಬಲ ಅಕಾಂಕ್ಷಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಸಾರ್ವಜನಿಕ ಕೆಲಸದಲ್ಲಿ ತೊಡಗಿದ್ದು, ಅಪಾರ ಜನಪರ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ಅಪಾರವಾದ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ ಅವರನ್ನು ಪರಿಗಣಿಸದೇ ಬಿಜೆಪಿ ಹೈಕಮಾಂಡ್ ಕೆ.ಎಸ್ ಮಂಜುನಾಥಗೌಡ ಅವರಿಗೆ ಟಿಕೆಟ್ ನೀಡಿದೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಅರಕಲಗೂಡು | ಎ ಮಂಜು ಪರ ರೇವಣ್ಣ ಮತಯಾಚನೆ
ಪಕ್ಷೇತರವಾಗಿ ವಿಜಯ್ ಕುಮಾರ್ ಸ್ಪರ್ಧೆ
ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ವಿಜಯ್ ಕುಮಾರ್ ಅವರು ಕ್ಷೇತ್ರದಲ್ಲಿ ಸಾವಿರಾರು ಅಭಿಮಾಗಳನ್ನು ಸೇರಿಸಿ ಸಭೆ ಮಾಡುವ ಮೂಲಕ ಪಕ್ಷೇತರವಾಗಿ ಸ್ಫರ್ಧಿಸಲು ತೀರ್ಮಾನಿಸಿದ್ದಾರೆ. ಇಪ್ಪತೈದು ಸಾವಿರ ಜನರೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹೂಡಿ ವಿಜಯ್ ಕುಮಾರ್ ಅವರು ಈಗ ಮಾಲೂರು ಕ್ಷೆತ್ರದಲ್ಲಿ ಪ್ರಬಲ ಪೈಪೋಟಿ ಕೊಡಲು ತಯಾರಾಗಿದ್ದಾರೆ. ಕಾಂಗ್ರೆಸ್ ವರ್ಸಸ್ ಪಕ್ಷೇತರ ಎನ್ನುವಂತೆ ಕ್ಷೇತ್ರದಲ್ಲಿ ಸದ್ದು ಮಾಡುತಿದ್ದಾರೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್-ಪಕ್ಷೇತರಗಳ ನಡುವೆ ಪೈಪೋಟಿ ಇದ್ದರೂ ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊದಲಿಗೆ ನಿಂತು ಪಕ್ಷೇತರ ಅಭ್ಯರ್ಥಿ ಎರಡನೆಯ ಸ್ಥಾನದಲ್ಲಿ ನಿಲ್ಲುವಷ್ಟು ಪ್ರಬಲವಾಗಿದ್ದಾರೆ ಎನ್ನಲಾಗಿದೆ.