ಆಸ್ಟ್ರೇಲಿಯಾ ತಂಡದ ವಿರುದ್ಧದ ಸರಣಿಗಾಗಿ ಭಾರತ ಅಂಡರ್ 19 ತಂಡವನ್ನು ಪ್ರಕಟಿಸಿದ್ದು ಈ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಸಮಿತ್ ದ್ರಾವಿಡ್ ಮಾತ್ರವಲ್ಲದೆ ಭಾರತ ಅಂಡರ್ 19 ತಂಡಕ್ಕೆ ಕರ್ನಾಟಕದ ಹಾರ್ದಿಕ್ ರಾಜ್, ಕಾರ್ತಿಕೇಯ ಕೆಪಿ ಮತ್ತು ಸಮರ್ಥ್ ಎನ್ ಕೂಡಾ ಆಯ್ಕೆಯಾಗಿದ್ದಾರೆ.
18 ವರ್ಷದ ಬಲಗೈ ಬ್ಯಾಟರ್ ಸಮಿತ್ ದ್ರಾವಿಡ್ ಅವರು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮಹಾರಾಜ ಟಿ 20 ಟ್ರೋಫಿಯಲ್ಲಿಯೂ ಆಡಿದ್ದರು. ಈ ಪಂದ್ಯದಲ್ಲಿ ಏಳು ಇನ್ನಿಂಗ್ಸ್ಗಳಲ್ಲಿ ಕೇವಲ 82 ರನ್ಗಳನ್ನು ಪಡೆದಿದ್ದರು.
ಇದನ್ನು ಓದಿದ್ದೀರಾ? ಮಹಾರಾಜ ಟ್ರೋಫಿ | ಮೈಸೂರು ವಾರಿಯರ್ಸ್ ತಂಡಕ್ಕೆ ಹರಾಜಾದ ರಾಹುಲ್ ದ್ರಾವಿಡ್ ಪುತ್ರ
ಸೆಪ್ಟೆಂಬರ್ 21, 23 ಮತ್ತು 26ರಂದು ಪುದುಚೇರಿಯಲ್ಲಿ ಮೂರು 50 ಓವರ್ ಪಂದ್ಯಗಳಲ್ಲಿ ಭಾರತದ ಅಂಡರ್ 19 ತಂಡವು ಆಸ್ಟ್ರೇಲಿಯಾದ ಅಂಡರ್ 19 ತಂಡದ ಎದುರು ಆಡಲಿದೆ. ಅದಾದ ಬಳಿಕ ಸೆಪ್ಟೆಂಬರ್ 30ರಿಂದ ಚೆನ್ನೈನಲ್ಲಿ ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.
ಭಾರತ ಅಂಡರ್ 19 ಏಕದಿನ ತಂಡ:
ರುದ್ರ ಪಟೇಲ್ (ಗುಜರಾತ್), ಸಾಹಿಲ್ ಪರಾಖ್ (ಮಹಾರಾಷ್ಟ್ರ), ಕಾರ್ತಿಕೇಯ ಕೆಪಿ (ಕರ್ನಾಟಕ), ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ), ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ ವಿಕೆಟ್ ಕೀಪರ್ (ಸೌರಾಷ್ಟ್ರ), ಸಮಿತ್ ದ್ರಾವಿಡ್ (ಕರ್ನಾಟಕ), ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ), ಸಮರ್ಥ ಎನ್ (ಕರ್ನಾಟಕ), ನಿಖಿಲ್ ಕುಮಾರ್ (ಚಂಡೀಗಢ), ಚೇತನ್ ಶರ್ಮಾ (ರಾಜಸ್ಥಾನ್), ಹಾರ್ದಿಕ್ ರಾಜ್ (ಕರ್ನಾಟಕ), ರೋಹಿತ್ ರಾಜಾವತ್ (ಮಧ್ಯ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ)
ಭಾರತ ಅಂಡರ್ 19 ನಾಲ್ಕು ದಿನಗಳ ಸರಣಿ:
ವೈಭವ್ ಸೂರ್ಯವಂಶಿ (ಬಿಹಾರ), ನಿತ್ಯ ಪಾಂಡ್ಯ (ಬಿಹಾರ), ವಿಹಾನ್ ಮಲ್ಹೋತ್ರಾ (ಪಂಜಾಬ್), ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ), ಕಾರ್ತಿಕೇಯ ಕೆಪಿ (ಕರ್ನಾಟಕ), ಸಮಿತ್ ದ್ರಾವಿಡ್ (ಕರ್ನಾಟಕ), ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಚೇತನ್ ಶರ್ಮಾ (ರಾಜಸ್ಥಾನ್), ಸಮರ್ಥ್ ಎನ್ (ಕರ್ನಾಟಕ), ಆದಿತ್ಯ ರಾವತ್ (ಉತ್ತರಾಖಂಡ್), ನಿಖಿಲ್ ಕುಮಾರ್ (ಚಂಡೀಗಢ್), ಅನ್ಮೋಲ್ಜೀತ್ ಸಿಂಗ್ (ಪಂಜಾಬ್), ಆದಿತ್ಯ ಸಿಂಗ್ (ಉತ್ತರ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ)
