ಭಾರತದಲ್ಲಿ ಜನರ ಆಹಾರಕ್ಕಾಗಿನ ವೆಚ್ಚದಲ್ಲಿ ಇಳಿಕೆ; ಹೆಚ್ಚುತ್ತಿದೆಯೇ ದುಡಿಮೆ – ಉಳಿತಾಯ?

Date:

Advertisements

ಭಾರತದಲ್ಲಿ ಜನರು ಆಹಾರಕ್ಕಾಗಿ ವೆಯಿಸುವ ವೆಚ್ಚದಲ್ಲಿ ಇಳಿಮುಖ ಕಂಡುಬಂದಿದೆ. ಭಾರತೀಯರ ಒಟ್ಟು ಮಾಸಿಕ ವೆಚ್ಚದಲ್ಲಿ ಆಹಾರಕ್ಕಾಗಿ ಖರ್ಚು ಮಾಡುವ ಮೊತ್ತವು 50%ಗಿಂತ ಕಡಿಮೆ ಇದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ (ಎನ್​ಎಸ್​ಎಸ್​ಒ) ವರದಿ ಮಾಡಿದೆ.

2022-23ರ ಹಣಕಾಸು ವರ್ಷದಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿರುವ ಎನ್​ಎಸ್​ಎಸ್​ಒ, ಭಾರತದ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನರ ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿದೆ ಎಂದು ಹೇಳಿದೆ. 2011-12ನೇ ಸಾಲಿನಲ್ಲಿ ಆಹಾರಕ್ಕಾಗಿ ವೆಚ್ಚವು ಸರಾಸರಿ 55.7% ಇತ್ತು. ಈ ವೆಚ್ಚದ ಪ್ರಮಾಣವು 2022-23ರಲ್ಲಿ 48.6%ಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಆಹಾರದ ಮೇಲಿನ ವೆಚ್ಚವು ಕಡಿಮೆಯಾಗಿರುವುದು, ಜನರು ಹೆಚ್ಚು ಆದಾಯ ಗಳಿಸುತ್ತಿರುವುದರ ಸಂಕೇತವೆಂದು ಹೇಳಲಾಗುತ್ತಿದ್ದರೂ, ಪೌಷ್ಟಿಕತೆಯ ಅಂಕಿಅಂಶಗಳು ಜನರು ಬೆಲೆಏರಿಕೆ ಮತ್ತು ಇತರ ಮೂಲ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದು, ಉತ್ತರ ಆಹಾರ ಖರೀದಿಯನ್ನು ಕಡಿಮೆ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.

Advertisements

ಎನ್​ಎಸ್​ಎಸ್​ಒ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ದತ್ತಾಂಶ ಕಲೆಹಾಕಿದೆ. ಎರಡೂ ಪ್ರದೇಶಗಳಲ್ಲಿ ಕಳೆದ 10 ವರ್ಷದಲ್ಲಿ ವೆಚ್ಚದಲ್ಲಿ ಆಹಾರದ ಪಾಲು ಕಡಿಮೆ ಆಗಿರುವುದು ವೇದ್ಯವಾಗಿದೆ. 2022-23ರ ಹಣಕಾಸು ವರ್ಷದ ದತ್ತಾಂಶವನ್ನು ಎನ್​ಎಸ್​ಎಸ್​ಒ ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಆಹಾರಕ್ಕಾಗಿ ವೆಚ್ಚವು 2011ರಲ್ಲಿ54.2% ಇತ್ತು. ಈಗ, 46.5% ಇದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 41.6% ಇದ್ದರೆ, ಚಂಡೀಗಡ ಮತ್ತು ಕೇರಳದಲ್ಲಿ ಕ್ರಮವಾಗಿ 41.2% ಮತ್ತು 42.5% ಇದೆ. ಆಹಾರಕ್ಕಾಗಿ ಜನರು ಅತೀ ಕಡಿಮೆ ವೆಚ್ಚ ಮಾಡುತ್ತಿರುವ ರಾಜ್ಯ ಚಂಡೀಗಡ ಎಂದು ಗುರುತಿಸಲಾಗಿದೆ.

ಅದಾಗ್ಯೂ, ದೇಶಕ್ಕೆ ಮಾದರಿ (ಗುಜರಾತ್ ಮಾದರಿ) ನೀಡುತ್ತೇವೆಂದು ಪ್ರಧಾನಿ ಮೋದಿ ಅವರು ಘೋಷಿಸುತ್ತಿದ್ದ ಗುಜರಾತ್‌ನಲ್ಲಿ ಜನರು ತಮ್ಮ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವ್ಯಯಿಸುವ ಮೊತ್ತವು 50%ಕ್ಕಿಂತ ಹೆಚ್ಚಾಗಿದೆ ಎಂದೂ ಸಮೀಕ್ಷೆ ಗಮನ ಸೆಳೆದಿದೆ. ಗುಜರಾತ್ ಮಾತ್ರವಲ್ಲದೆ, ಜಮ್ಮು ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ತ್ರಿಪುರದಲ್ಲಿಯೂ ಆಹಾರಕ್ಕಾಗಿ ವೆಚ್ಚವು 50%ಕ್ಕಿಂತ ಹೆಚ್ಚಿದೆ. ಗಮನಾರ್ಹವಾಗಿ ಬಿಜೆಪಿಯೇ ಆಡಳಿತದಲ್ಲಿರುವ ಅಸ್ಸಾಂ ಮತ್ತು ಬಿಹಾರದಲ್ಲಿ ಆಹಾರಕ್ಕಾಗಿನ ವೆಚ್ಚ 54%ಕ್ಕಿಂತ ಹೆಚ್ಚಾಗಿದೆ.

ದೇಶದ ನಗರ ಭಾಗಗಳಲ್ಲಿ ಜನರು ಆಹಾರಕ್ಕೆ ವ್ಯಯಿಸುವ ವೆಚ್ಚವು ಗ್ರಾಮೀಣ ಭಾಗಕ್ಕಿಂತ ಕಡಿಮೆ ಇದೆ. ಭಾರತದ ನಗರ ಭಾಗಗಳ ಜನರು ತಮ್ಮ ಒಟ್ಟು ವೆಚ್ಚದಲ್ಲಿ 2011-12ರಲ್ಲಿ ಸರಾಸರಿ 48%ಅನ್ನು ಆಹಾರಕ್ಕಾಗಿ ವೆಚ್ಚ ಮಾಡುತ್ತಿದ್ದರು. ಅದು, ಈಗ 41.9%ಗೆ ಇಳಿಕೆಯಾಗಿದೆ. ಅದರಲ್ಲೂ, ಉತ್ತರಾಖಂಡ, ಚಂಡೀಗಡ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಮತ್ತು ಕೇರಳದ ನಗರ ಭಾಗಗಳಲ್ಲಿ ಆಹಾರಕ್ಕಾಗಿ ವೆಚ್ಚವು 40%ಗಿಂತ ಕಡಿಮೆ ಇದೆ. ಅದಾಗ್ಯೂ, ಲಕ್ಷದ್ವೀಪದಲ್ಲಿ ಮಾತ್ರ ನಗರ ಭಾಗದ ಜನರು ಆಹಾರಕ್ಕಾಗಿ ವ್ಯಯಿಸುವ ವೆಚ್ಚವು 50%ಗಿಂತ ಹೆಚ್ಚಿದೆ.

ಭಾರತೀಯರ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿರುವುದು ಪ್ರಗತಿಯ ಸಂಕೇತವಾಗಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಜನರ ದುಡಿಮೆ ಮತ್ತು ಉಳಿತಾಯ ಹೆಚ್ಚಾಗುತ್ತಿದೆ ಎಂದು ಹಲವರು ಬಣ್ಣಿಸುತ್ತಿದ್ದಾರೆ. ಅದಾಗ್ಯೂ, ದೇಶದಲ್ಲಿ ಆಹಾರಕ್ಕಾಗಿನ ವೆಚ್ಚವು ಕಡಿಮೆಯಾಗಿದ್ದರೂ, ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗಿಲ್ಲ. ಇದು, ಜನರು ಉತ್ತಮ ಮತ್ತು ಪೌಷ್ಠಿಕ ಆಹಾರವನ್ನು ಖರೀದಿ ಮಾಡುವ ಪ್ರಮಾಣ ಮಾಡಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ.

ರಕ್ತಹೀನತೆ ಮತ್ತು ಅಪೌಷ್ಟಿಕತೆ ಹಾಗೂ ಹಸಿವಿನ ಸೂಚ್ಯಂಕದಲ್ಲಿ ಭಾರತವು ವಿಶ್ವದ 125 ರಾಷ್ಟ್ರಗಳ ಪೈಕಿ 111ನೇ ಸ್ಥಾನ ಪಡೆದುಕೊಂಡಿದೆ ಎಂದು ಇತ್ತೀಚೆಗೆ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಹೇಳಿದೆ. ಅಲ್ಲದೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌)–5 ವರದಿಯ ಪ್ರಕಾರ, 0-5 ವರ್ಷ ವಯಸ್ಸಿನ ಸುಮಾರು 17% ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಅಲ್ಲದೆ, ಅದೇ ವಯಸ್ಸಿನ ಮಕ್ಕಳಲ್ಲಿ 36%ರಷ್ಟು ಮಕ್ಕಳ ಬೆಳವಣಿಗೆಯು ಕುಂಠಿತವಾಗಿದೆ ಎಂದು ಹೇಳಿದೆ. ಜೊತೆಗೆ, 15ರಿಂದ 49 ವರ್ಷದೊಳಗಿನ 62% ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.ಇದು, ಗರ್ಭಿಣಿಯರು ಮತ್ತು ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸುವಲ್ಲಿ ಕುಟುಂಬಗಳು ವಿಫಲವಾಗುತ್ತಿವೆ ಎಂಬುದನ್ನು ಸೂಚಿಸುತ್ತದೆ.

ಅಂದಮೇಲೆ, ಬೆಲೆ ಏರಿಕೆಯ ಸಂಕಷ್ಟವನ್ನು ಎದುರಿಸುತ್ತಿರುವ ಭಾರತದಲ್ಲಿ ಜನರ ಇತರ ಖರ್ಚುಗಳು ಹೆಚ್ಚುತ್ತಿರುವ ಪರಿಣಾಮ, ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿದೆಯೇ ಹೊರತು, ಜನರಿಗೆ ಉತ್ತಮ ಆಹಾರ ದೊರೆಯುತ್ತಿದೆ ಅಥವಾ ದುಡಿಮೆ ಹೆಚ್ಚುತ್ತಿದೆ ಎಂದರ್ಥವಲ್ಲ ಎಂಬುದು ಖಚಿತ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X