ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ ಅನುಷ್ಠಾನಕ್ಕೆ ತ್ವರಿತ ನಿಯಮಾವಳಿ: ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ

Date:

Advertisements

“ಕರ್ನಾಟಕ ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ-2016ಕ್ಕೆ ತ್ವರಿತವಾಗಿ ನಿಯಮಾವಳಿ ರೂಪಿಸಿ ಜಿಲ್ಲಾ ಮಟ್ಟದಲ್ಲಿ ಸ್ಲಂಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ತಿಳಿಸಿದ್ದಾರೆ.

ಅವರು ಇಂದು(ಸೆ.3) ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಪದಾಧಿಕಾರಿಗಳು ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಬೆಂಗಳೂರು ನಗರ ಸಮಿತಿ ಸದಸ್ಯರೊಂದಿಗೆ ರಾಜ್ಯದ ಸ್ಲಂ ನಿವಾಸಿಗಳ ಕುಂದು-ಕೊರತೆಗಳ ಸಭೆ ನಡೆಸಿದರು. ಸಭೆಯಲ್ಲಿ ಸ್ಲಂ ಬೋರ್ಡ್ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಕೂಡ ಇದ್ದರು.

ಸ್ಲಂ ಜನಾಂದೋಲನ ಕರ್ನಾಟಕದ ವಿಷಯ ಸೂಚಿಗಳ ಮೇಲೆ ಚರ್ಚೆ ಮಾಡಿದ ನಂತರ ಪ್ರತಿಕ್ರಿಯಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷರು ನಿಮ್ಮ ಸಂಘಟನೆ ಹಲವು ಮೌಲ್ಯಯುತ ಅಂಶಗಳನ್ನು ಮಂಡಳಿಗೆ ನೀಡಿದ್ದು, ಇದರಲ್ಲಿ 2024-2025ನೇ ಸಾಲಿನಲ್ಲಿ ಮಂಡಳಿಗೆ ಪ್ರತ್ಯೇಕವಾಗಿ ಸ್ಲಂ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಏಕೆಂದರೆ ನಗರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಸ್ಲಂಗಳಲ್ಲಿ ವಾಸಿಸುತ್ತಿದ್ದು ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಹ ಒಲವಿದ್ದುಲೀ ಬಜೆಟ್‌ನಲ್ಲಿ ಅನುದಾನ ಹೆಚ್ಚನ ಮಟ್ಟದಲ್ಲಿ ಸಿಗುವ ಭರವಸೆ ಇದೆ ಎಂದರು.

Advertisements
slum

ಕಳೆದ ವಿಧಾನಸಭಾ ಅಧಿವೇಶನದಲ್ಲಿ ಜಿಲ್ಲಾಮಟ್ಟದಲ್ಲಿ ಸ್ಲಂ ಜನರ ಮತ್ತು ವಿಶೇಷ ವರ್ಗಗಳ ಪುನರ್ ವಸತಿಗೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲು ಚರ್ಚಿಸಿದ್ದು, ಕಂದಾಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಭೂಮಿ ಮೀಸಲಿಡಲು ಸರ್ಕಾರ ಸೂಚಿಸಲಿದೆ. ಬರುವ ನಗರೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಲಂ ಜನರು ಬದುಕುವ ಹಕ್ಕಿನ ಆಯಾಮದಲ್ಲಿ ಹೊಸ ಕಾಯಿದೆಯನ್ನು ರೂಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಹಕ್ಕುಪತ್ರ ವಿತರಣೆಗಾಗಿ 6 ತಿಂಗಳ ಗಡುವು ನೀಡಿ ಬಾಕಿ ಇರುವ ಹಕ್ಕುಪತ್ರಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ವಿತರಣೆ ಮಾಡಿ ನೋಂದಣಿ ಮಾಡಿಸುವ ಎಲ್ಲಾ ಕ್ರಮಗಳನ್ನು ತಗೆದುಕೊಂಡು ನಗರ ಸ್ಥಳೀಯ ಸಂಸ್ಥೆಗಳು ಖಾತಾ ಮಾಡಿಕೊಡಲು ಪ್ರಸ್ತುತ ತೆರಿಗೆಯನ್ನು ಮಾತ್ರ ಪಾವತಿಸಿಕೊಳ್ಳಲು ಮಂಡಳಿಯಿಂದ ಪತ್ರ ಬರೆಯಲಾಗುವುದು. ಸ್ಲಂ ಕಾಯಿದೆ ಆಶಯಕ್ಕೆ ವಿರುದ್ಧವಾಗಿರುವ ಮತ್ತು ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ರದ್ದುಗೊಳಿಸಲಾಗುವುದೆಂದರು.

ರಾಜ್ಯದಲ್ಲಿ 1.80 ಲಕ್ಷ ವಸತಿಗಳನ್ನು ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಮತ್ತು ಇನ್ನಿತರೆ ಯೋಜನೆಗಳಲ್ಲಿ ನಿರ್ಮಾಣ ಮಾಡುತ್ತಿದ್ದು 6 ಸಾವಿರ ಕೋಟಿಗಳನ್ನು ಸರ್ಕಾರ ನೀಡಲು ಒಪ್ಪಿದೆ. ಕೇಂದ್ರದ ಅನುದಾನ ಕಡಿಮೆ ಇದ್ದು, ರಾಜ್ಯದ ಅನುದಾನ ಹೆಚ್ಚಿದೆ. ಆದರೂ ಫಲಾನುಭವಿಗಳ ವಂತಿಕೆ ಕಡಿಮೆ ಮಾಡಲು ವಸತಿ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಮಂಡಳಿ ಬರಿ ವಸತಿ ನಿರ್ಮಾಣ ಮಾಡಲು ಕೆಲಸವಲ್ಲದೆ ಸ್ಲಂ ಜನರಿಗೆ ಶಿಕ್ಷಣ,ಆರೋಗ್ಯ, ಜೀವನೋಪಾಯದಂತಹ ಕಾರ್ಯಕ್ರಮಗಳನ್ನು ಒದಗಿಸಲು ಕಾಯಕಲ್ಪ ನೀಡಲಾಗುವುದು ಎಂದು ಪ್ರಸಾದ್ ಅಬ್ಬಯ್ಯ ಹೇಳಿದರು.

ಸಾಮಾಜಿಕ ನ್ಯಾಯದ ಆಯಾಮದಲ್ಲಿ ಸ್ಲಂಗಳ ಅಭಿವೃದ್ಧಿ ಮಾಡಲು ಆಗ್ರಹ

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, ರಾಜ್ಯ ಸ್ಲಂ ನಿವಾಸಿಗಳ ಬೇಡಿಗಳನ್ನು ವಿಷಯ ಸೂಚಿಗಳನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ 50 ಲಕ್ಷಕ್ಕೂ ಮೇಲ್ಪಟ್ಟು ಸ್ಲಂ ನಿವಾಸಿಗಳಿದ್ದು ನಮ್ಮ ಜನಸಂಖ್ಯೆಗೆ ಅನುಗುಣವಾಗಿ 1,000 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈಗಿರುವ ಸ್ಲಂ ಕಾಯಿದೆ ಸಾರ್ವಜನಿಕ ಆರೋಗ್ಯ ಕಾಪಾಡುವ ಪರಿಚ್ಛೇಧ 47ರ ಅಡಿಯಲ್ಲಿ ಜಾರಿಯಾಗಿದ್ದು, ಪರಿಚ್ಛೇಧ 21ರಲ್ಲಿ ಬದುಕುವ ಹಕ್ಕಿನ ಅಡಿಯಲ್ಲಿ ಹಾಗೂ ಮುಂಬರುವ ನಗರೀಕರಣದ ವೇಗಕ್ಕೆ ಅನುಗುಣವಾಗಿ ಹೊಸ ಕಾಯಿದೆ ಅಗತ್ಯವಿದೆ ಎಂದರು.

2016ರಲ್ಲಿ ಜಾರಿಯಾದ ಸ್ಲಂ ನೀತಿ, ಸ್ಲಂ ನಿವಾಸಿಗಳ ಪಾಲ್ಗೊಳ್ಳುವ ಅವಕಾಶ ನೀಡಿದ್ದು, ಈ ನೀತಿಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು. 2016-17ರ ಬಜೆಟ್ ಭಾಷಣದಲ್ಲಿ ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಘೋಷಣೆ ಮಾಡಿದ್ದು, ಅದರಂತೆಯೇ ಕ್ರಮವಹಿಸಿ, ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಿ ಸ್ಲಂ ಜನರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗಬೇಕು. ಸ್ಲಂ ನಿವಾಸಿಗಳ ಸಮಸ್ಯೆಯನ್ನು ಸಾಮಾಜಿಕ ಆಯಾಮದಲ್ಲಿ ನೋಡಿ ಅಭಿವೃದ್ಧಿಯಲ್ಲಿ ಪಾಲು ನೀಡಲು ಮುಂದಾಗಲು ಆಗ್ರಹಿಸಿದರು.

ಇದನ್ನು ಓದಿದ್ದೀರಾ? ಬೆಂಗಳೂರು | ರಾಜ್ಯಪಾಲರ ನಡೆಗೆ ಖಂಡನೆ: ಸಿಎಂ ಸಿದ್ದರಾಮಯ್ಯ ಪರ ಒಂದಾದ ದಸಂಸ ಮುಖಂಡರು

ಈ ಸಂದರ್ಭದಲ್ಲಿ ಮಂಡಳಿ ಆಯುಕ್ತರಾದ ಆಶೋಕ್, ಮುಖ್ಯ ಇಂಜಿನಿಯರ್ ಬಾಲರಾಜ್, ತಾಂತ್ರಿಕ ಅಭಿಯಂತರರಾದ ಸುಧೀರ್, ಎಲ್ಲಾ ವಿಭಾಗಗಳ ಇಂಜಿನಿಯರ್‌ಗಳು ಮತ್ತು ಕಂದಾಯ ಅಧಿಕಾರಿಗಳು, ಅಧ್ಯಕ್ಷರ ವಿಶೇಷ ಅಧಿಕಾರಿಗಳು ಸೇರಿದಂತೆ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಮಿತಿ ಪದಾಧಿಕಾರಿಗಳಾದ ಬೆಂಗಳೂರಿನ ಚಂದ್ರಮ್ಮ, ರಾಯಚೂರಿನ ಜನಾರ್ಧನ್ ಹಳ್ಳಿಬೆಂಚಿ, ದಾವಣಗೆರೆಯ ರೇಣುಕಾ ಎಲ್ಲಮ್ಮ, ಬಳ್ಳಾರಿಯ ಶೇಖರ್ ಬಾಬು, ಕಲ್ಬುರ್ಗಿ-ಯಾದಗಿರಿಯ ರೇಣುಕ ಸರಡಗಿ, ಚಿತ್ರದುರ್ಗದ ಸುಧಾ, ತುಮಕೂರಿನ ಅರುಣಾ, ಬೆಂಗಳೂರು ನಗರ ಸಮಿತಿಯ ಮಂಜುಬಾಯ್, ತೇಜಸ್ ಕುಮಾರ್, ಆಂಜನೇಯ, ರೇಖಾ ಕಂಬಳಿ, ಅರಸ್, ಶ್ರೀನಿವಾಸ್, ವೆಳ್ಳಿಯಮ್ಮ, ಶಕುಂತಲ್, ಜಲಗೇರಮ್ಮ, ವೆಂಕಟಮ್ಮ, ಜ್ಯೋತಿ, ಕಲಾವತಿ, ಆನಂದ್ ಸೇರಿದಂತೆ ಮುತ್ತಿತರರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X