ದಲಿತರನ್ನು ಬೇರೆಡೆ ಕಳಿಸಿ ಎಂದ ಗ್ರಾಮಸ್ಥ; ಕೇಸ್‌ ಬೀಳ್ತವೆ ಹುಷಾರ್ ಎಂದ ಪಕ್ಷೇತರ ಅಭ್ಯರ್ಥಿ

Date:

Advertisements

ಚುನಾವಣಾ ಪ್ರಚಾರದ ಮೇಳೆ ಗ್ರಾಮಸ್ಥರೊಬ್ಬರು ದಲಿತರನ್ನು ಗ್ರಾಮದಿಂದ ಬೇರೆಡೆ ಕಳಿಸಿ ಎಂದು ಹೇಳಿದ್ದು, ಎಲ್ಲರಿಗೂ ಬದುಕುವ ಹಕ್ಕಿದೆ. ಹಿಂಗೆಲ್ಲ ಮಾತಾಡಿದ್ರೆ ಕೇಸ್‌ ಹಾಕ್ತಾರೆ ಹುಷಾರಾಗಿರುವ ಎಂದು ಪಕ್ಷೇತರ ಅಭ್ಯರ್ಥಿ ಎಚ್ಚರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಕುಪ್ಪಳಿ ಗ್ರಾಮದಲ್ಲಿ ನಡೆದಿದೆ.

ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಚಂದನ್‌ಗೌಡ ಪ್ರಚಾರಕ್ಕೆಂದು ಕುಪ್ಪಳ್ಳಿಗೆ ತೆರಳಿದ್ದರು. ಗ್ರಾಮಸ್ಥರೊಂದಿಗೆ ಮಾತನಾಡುವ ವೇಳೆ, ಮೈಕ್‌ ಪಡೆದುಕೊಂಡ ವ್ಯಕ್ತಿಯೊಬ್ಬ, “ದಲಿತರನ್ನು ಊರಿಂದ ಬೇರೆ ಜಾಗಕ್ಕೆ ಕಳಿಸಿಕೊಡಿ ಸಾಕು. ಅವರು ನಮ್ಮ ಮನೆಗಳ ಸುತ್ತಲೂ ಇದ್ದು, ನಾವು ಮಧ್ಯದಲ್ಲಿದ್ದೇವೆ” ಎಂದು ಹೇಳಿದ್ದಾರೆ.

ಯಾಕಪ್ಪ ಅವರನ್ನು ಬೇರೆ ಕಳಿಸಬೇಕು ಎಂದು ಚಂದನ್‌ ಗೌಡ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ವ್ಯಕ್ತಿ, “ನಮಗೆ ದನ-ಕರ ಕಟ್ಟಿಕೊಳ್ಳೇಕೆ ತೊಂದರೆ ಆಗ್ತಾ ಇದೆ” ಎಂದು ಹೇಳಿದ್ದಾರೆ.

Advertisements

ಹಾಗೆ ಹೇಳಿದ ವ್ಯಕ್ತಿಗೆ ಬುದ್ದಿ ಹೇಳಿದ ಚಂದನ್ ಗೌಡ, “ಸಾಮಾಜಿಕವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದನ್ನ ಕಸಿದುಕೊಳ್ಳೋಕೆ ಆಗಲ್ಲ. ಯಾರನ್ನು ಎಲ್ಲಿಂದಲೂ ಕಳಿಸೋಕೆ ಯಾರಿಗೂ ಹಕ್ಕಿಲ್ಲ. ಹೀಗೆಲ್ಲ ಮಾತಾಡಿದ್ರೆ ಕೇಸ್‌ ಬೀಳ್ತವೆ” ಎಂದು ಎಚ್ಚರಿಸಿದ್ದಾರೆ.

“ನಿಮಗೆ ಅವರನ್ನ ಬೇರೆಡೆ ಕಳಿಸಲೇಬೇಕೆಂದಿದ್ದರೆ, ನನ್ನಿಂದ ಆಗಲ್ಲ. ನನಗೆ ನೀವ್ಯಾರೂ ಮತ ಹಾಕಬೇಡಿ. ಓಟು ಕೇಳೋಕೆ ಬರುವ ಎಂಪಿ ಅಥವಾ ಶಾಸಕನ ಬಳಿ ಕೇಳಿ, ಸ್ಥಳಾಂತರ ಮಾಡಿಸಿಕೊಳ್ಳಿ” ಎಂದು ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X