ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗಾಂಧಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಸಾಪ ಅಧ್ಯಕ್ಷ ಪಾಂಡುರಂಗ ಜಟ್ಟಗನ್ನವರ ಕರೆ ನೀಡಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಸಾಪದಿಂದ ನಗರದ ಸರ್ಕಾರಿ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕ ಎಂ ಎಚ್ ಚಾಬುಕಸ್ವಾರ ಮಾತನಾಡಿ, “ಗಾಂಧೀಜಿ ಇಡೀ ಜಗತ್ತಿಗೆ ಶಾಂತಿ ಮತ್ತು ಸಹೋದರತೆಯನ್ನು ಸಾರಿದವರು. ಅವರ ಸ್ಮರಣೆಗಾಗಿ ವಿಶ್ವಸಂಸ್ಥೆ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಎಂದರು.
ಶಿಕ್ಷಣ ಸಂಯೋಜಕ ಶ್ರೀಕಾಂತ ಕರಲಿಂಗಪ್ಪನವರ ಮಾತನಾಡಿ, “ಗಾಂಧೀಜಿಯವರು ಪ್ರಾಮಾಣಿಕತೆ ಹಾಗೂ ಸತ್ಯ ನುಡಿಯುವುದನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಂಡಿದ್ದರು. ಪ್ರಸ್ತುತ ವಿದ್ಯಾರ್ಥಿಗಳೂ ಕೂಡ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಜನರ ನೋವಿಗೆ ಮಾಧ್ಯಮ ದನಿಯಾಗಲಿ : ಭರತ್ ಹೆಬ್ಬಾಳ
ಗಾಂಧಿ ಓದು ನಿಮಿತ್ಯ ಗಾಂಧೀಜಿಯ ಜೀವನ, ಸಾಧನೆ ಕುರಿತು ಬೋಳುವಾರು ಮಹಮ್ಮದ್ ಕುಂಞ ಅವರು ಮಕ್ಕಳಿಗಾಗಿ ಬರೆದ ಪಾಪು ಬಾಪು ಕೃತಿಯನ್ನು 26 ಮಂದಿ ವಿದ್ಯಾರ್ಥಿಗಳು ವಾಚನ ಮಾಡಿದರು.
ವೇದಿಕೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ, ಅರಣ್ಯಾಧಿಕಾರಿ ಪ್ರತಿಭಾ ಕೊಪ್ಪಳ, ಗೌರವ ಕೋಶಾಧ್ಯಕ್ಷ ಎಸ್ ಎಸ್ ಹುಚ್ಚನ್ನವರ, ಆರ್ ಎಸ್ ಸಂಕನ್ನವರ, ಅರಣ್ಯ ಇಲಾಖೆಯ ಆನಂದ ಮಸಳಿ ಸೇರಿದಂತೆ ಇತರರು ಇದ್ದರು.