ಕಲಬುರಗಿ | ವರದಕ್ಷಿಣೆ ಕಿರುಕುಳ; ನೇಣು ಬಿಗಿದು ಮಹಿಳೆ ಕೊಲೆಗೆ ಯತ್ನ

Date:

Advertisements

ಕೌಟುಂಬಿಕ ಕಲಹದಲ್ಲಿ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದಿದ್ದು, ಮಹಿಳೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ನಗರದ ರೋಜಾ ಮಾರುಕಟ್ಟೆ ನಿವಾಸಿ ಯಾಸ್ಮಿನ್ ಎಂಬುವವರಿಗೆ ಕುಟುಂಬಸ್ಥರು ಕಿರುಕುಳ ನೀಡಿದ್ದು, ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.

ಸಂತ್ರಸ್ತೆ ಯಾಸ್ಮಿನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗಂಡ ಶೇಖ್ ಅಬ್ದುಲಾ, ಅತ್ತೆ‌ ಹಾಗೂ ಐದು ಮಂದಿ ನಾದಿನಿಯರಾದ ಕರಿಮಾ, ಕಲಿಮಾ, ಆಫರಿನ್, ಜರಿನಾ, ಹಸಿನಾ ಅವರೆಲ್ಲ ಸೇರಿಕೊಂಡು, ʼನಿನ್ನ ತವರು ಮೆನೆಯಿಂದ ಬಂಗಾರ ತೆಗೆದುಕೊಂಡು ಬಾʼ ಎಂದು ಪ್ರತಿನಿತ್ಯ ನನ್ನನ್ನು ಪೀಡಿಸುತ್ತಿದರು. ಮಂಗಳವಾರ ಬೆಳಿಗ್ಗೆ ಊಟ ಮಾಡುತ್ತಿರುವಾಗ ತಟ್ಟೆ ಕಸಿದುಕೊಂಡು ತಟ್ಟೆಯಿಂದ ಬೆನ್ನು, ಮುಖ ಮೊಳಕಾಲು ಎಲ್ಲೆಂದರಲ್ಲಿ ಮನಬಂದಂತೆ ಹೊಡೆದಿದ್ದರಿಂದ ನಾನು ಮೂರ್ಛೆ ಹೋಗಿದ್ದೆ. ಆ ಸಮಯದಲ್ಲಿ ನನ್ನನ್ನು ನೇಣು ಹಾಕಿ ಸಾಯಿಸಲು ಯತ್ನಿಸಿದ್ದಾರೆ. ನನ್ನ ಗಂಡ, ಅತ್ತೆ, ನಾದಿನಿಯರಿಗೆಲ್ಲ ಶಿಕ್ಷೆಯಾಗಬೇಕು” ಎಂದು ಅವಲತ್ತುಕೊಂಡಿದ್ದಾರೆ.

Advertisements
ಸಂತ್ರಸ್ತೆ ತಾಯಿ

ಸಂತ್ರಸ್ತೆ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಗಳ ಗಂಡನ ಮನೆಯವರು ಬಂಗಾರ, ದುಡ್ಡು ತಗೆದುಕೊಂಡು ಬರುವಂತೆ ಬಹಳ ಜಗಳ‌ ಮಾಡುತ್ತಿದ್ದರು‌. ನಾವು ಬಡವರು ಎಲ್ಲಿಂದ ಕೊಡಬೇಕು. ನಮ್ಮ ಹತ್ತಿರ ಏನೂ ಇಲ್ಲವೆಂದು ತಿಳಿಸಿದ ಮೇಲೆ ಮನೆಯಲ್ಲಿ ಮಗಳ ಜತೆಗೆ ಜಗಳ ಮಾಡಿದ್ದಾರೆ. ಪ್ರತಿದಿನ ಫೋನ್ ಮಾಡುವ ಮಗಳು ಮೂರು ದಿನಗಳಿಂದ ಪೋನ್ ಮಾಡಿಲ್ಲವೆಂದು ಆತಂಕಗೊಂಡು ಮಗಳ ಮನೆಗೆ ಹೋದಾಗ, ಮಗಳು ಮೂರ್ಛೆ ಹೋಗಿ ಬಿದ್ದಿರುವುದನ್ನು ನೋಡಿ‌ ನಾನು ಗಾಬರಿಗೊಂಡು ಆಟೊದಲ್ಲಿ ಮಗಳನ್ನು ತಂದು ಆಸ್ಪತ್ರೆಗೆ ಸೇರಿಸಿದ್ದೇನೆ. ನನ್ನ ಮಗಳಿಗೆ ಈ ರೀತಿ ಹಿಂಸೆ ನೀಡಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.

ಸಂತ್ರಸ್ತೆ ಯಾಸ್ಮಿನ್‌ ಎಂಬುವವರಿಗೆ ಒಬ್ಬಳು ಪುತ್ರಿ, ಒಬ್ಬ ಪುತ್ರನಿದ್ದು, ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಮಕ್ಕಳು, “ನಮ್ಮ ಅಮ್ಮನಿಗೆ ಅತ್ತೆ ಕರಿಮಾ ತಟ್ಟೆಯಿಂದ ಹೊಡೆದು ನೇಣು ಹಾಕಿದ್ದಾರೆ. ನಮ್ಮ ಅಪ್ಪ ನೇಣು ಬಿಗಿದಿರುವುದು ಚಾಕುವಿನಿಂದ ಕತ್ತರಿಸಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ; ಗಿಡಗಳ ವಿತರಣೆ

“ಯಾಸ್ಮಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆಸ್ಪತ್ರೆಯ ಸಿಬ್ಬಂದಿಗಳು ಎಂಎಲ್‌ಸಿ ಮಾಡುವುದಾಗಿ ತಿಳಿಸಿದರು. ದೂರು ದಾಖಲಿಸಿಕೊಳ್ಳಲು ಮಹಿಳಾ ಪೊಲೀಸ್ ಠಾಣೆಯವರು ಹಿಂದೇಟು ಹಾಕಿದಾಗ ಈ ದಿನ.ಕಾಮ್ ಪ್ರತಿನಿಧಿ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಮಾತನಾಡಿದ ಬಳಿಕ ದೂರು ದಾಖಲಿಸಲಾಯಿತು” ಎಂದು ಸಂತ್ರಸ್ತೆ ಕುಟುಂಬಸ್ಥರು
ಈ ದಿನ.ಕಾಮ್‌ಗೆ ಧನ್ಯವಾದ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X