ಮಸೀದಿಯೊಳಗೆ ಜೈ ಶ್ರೀರಾಮ್‌ ಘೋಷಣೆ ಓಕೆ; ಇದೆಂಥಾ ತೀರ್ಪು!

Date:

Advertisements

ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ ಸಾಕ್ಷಿಯಾಗಲಿರುವುದು ನಿಶ್ಚಿತ. ಆದರೆ ಇಂತಹ ವಿಲಕ್ಷಣ ತೀರ್ಪುಗಳು ಇಂತಹ ತಿಳಿಗೇಡಿ ಮತ್ತು ಕಿಡಿಗೇಡಿಗಳಿಗೆ ದುಷ್ಕೃತ್ಯ ಮುಂದುವರಿಸಲು ಲೈಸನ್ಸ್ ನೀಡಿದಂತಾಗಿದೆ.

ಕರ್ನಾಟಕದ ಹೈಕೋರ್ಟ್ ಮಸೀದಿಯ ಒಳಗೆ ಜೈ ಶ್ರೀರಾಮ್ ಕೂಗುವುದು ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಸ್ವತಃ ಈ ಪ್ರಕರಣದ ಆರೋಪಿಗಳೇ ಈ ತೀರ್ಪು ಕೇಳಿ ಒಳಗೊಳಗೆ ನಗುತ್ತಿರಬಹುದು. ಬಹುಶಃ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅತ್ಯಂತ ವಿಚಿತ್ರ ತೀರ್ಪು ಇದು. ಕಾರಣಗಳೇ ಇಲ್ಲದೆ ಭಾರತದಲ್ಲಿ ಕೋಮುಗಲಭೆಗಳು ಸಾಮಾನ್ಯವಾಗಿ ಬಿಟ್ಟಿದೆ. ಈಗಂತೂ ಈ ತೀರ್ಪಿನಿಂದ ಪ್ರೇರಿತವಾಗಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆ ತೋರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಲವಾರು ಪ್ರಶ್ನೆಗಳು ಎದ್ದಿವೆ. ಗಣೇಶ ಚತುರ್ಥಿಯ ದಿನ ಪ್ರಧಾನಮಂತ್ರಿಯೇ ಈ ದೇಶದ ಮುಖ್ಯ ನ್ಯಾಯಮೂರ್ತಿ ಮನೆಗೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು ನ್ಯಾಯಾಂಗ ಮತ್ತು ಆಡಳಿತದ ವರ್ಗದವರ ಗಳಸ್ಯ ಕಂಠಸ್ಯತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಇಂತಹ ನಡತೆಗಳಿಂದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ತೀವ್ರ ದಕ್ಕೆ ಬಂದಿರುವುದು ಸುಳ್ಳಲ್ಲ. ಭಾರತದ ಅಲ್ಪಸಂಖ್ಯಾತರ ಮಟ್ಟಿಗೆ ಅಕ್ಷರಶಃ ನ್ಯಾಯಾಂಗವೆಂಬ ಬೇಲಿಯೇ ತನ್ನ ಹೊಲವನ್ನು ಮೇಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಧರ್ಮಗಳಿಂದ ಪ್ರೇರಿತವಾದ ರಾಜಕಾರಣವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವುದು ನ್ಯಾಯಾಲಯಗಳೇ ಆಗಿವೆ..

ಆದರೆ ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ ಸಾಕ್ಷಿಯಾಗಲಿರುವುದು ನಿಶ್ಚಿತ. ಕಾನೂನಿನಲ್ಲಿರುವ ಉತ್ತಮ ಅಂಶಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜಘಾತಕ ಶಕ್ತಿಗಳು ಸೌಹಾರ್ದಯುತವಾದ ವಾತಾವರಣಗಳನ್ನು ಕೆಡಿಸುತ್ತಿರುವುದು ನಾವೆಲ್ಲ ನೋಡುತ್ತಿದ್ದೇವೆ. ಆದರೆ ಇಂತಹ ವಿಲಕ್ಷಣ ತೀರ್ಪುಗಳು ಇಂತಹ ತಿಳಿಗೇಡಿ ಮತ್ತು ಕಿಡಿಗೇಡಿಗಳಿಗೆ ದುಷ್ಕೃತ್ಯ ಮುಂದುವರಿಸಲು ಲೈಸನ್ಸ್ ನೀಡಿದಂತಾಗಿದೆ.

Advertisements

ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೇಸ್ ರದ್ದು; ಸರ್ಕಾರದ ಜವಾಬ್ದಾರಿ ಏನು ?

ಈ ತೀರ್ಪು ಕೋಮುವಾದದ ವ್ಯಾಪಕ ಪ್ರಸರಣ ಮತ್ತು ಪೋಷಣೆಗೆ ಕಾರಣವಾಗಲಿದೆ ಎನ್ನುವ ವಿಚಾರ ಸಾಮಾನ್ಯ ಜ್ಞಾನಕ್ಕೆ ನಿಲ್ಲುಕುವಂಥದ್ದು. ಇಂತಹ ತೀರ್ಪುಗಳು ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವವರ ಪ್ರಭುದ್ಧತೆ ಮತ್ತು ಸಾಮಾಜಿಕ ಬದ್ಧತೆಯನ್ನು ಪ್ರಶ್ನಿಸುತ್ತದೆ. ಇದರಿಂದಾಗಿ ಮೊದಲೇ ಪ್ರಶ್ನೆಗಳ ಸುಳಿಯಲ್ಲಿರುವ ನ್ಯಾಯಾಂಗ ಮತ್ತೆ ತನ್ನ ಘನತೆಯನ್ನು ಕಳೆದುಕೊಳ್ಳಲಿದೆ. ತೀರ್ಪುಗಳ ಮೂಲಕ ಸಾಮಾಜಿಕ ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಪೂರಕವಾಗಬೇಕಾದ ನ್ಯಾಯಾಂಗವೇ ಹೀಗೆ ಕೋಮುವಾದಿ ಎಂದು ಕಾಣಿಸಿಕೊಳ್ಳುವುದು ದುರದೃಷ್ಟಕರ.

?s=150&d=mp&r=g
ಅಶ್ರಫ್ ಕುಂದಾಪುರ
+ posts

ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

17 COMMENTS

  1. ಹಾಗಾದ್ರೆ ದೇವಸ್ಥಾನ ದ ಒಳಗಡೆ ಅಲ್ಲಾ ಹೂ ಅಕ್ಬರ್ ಕೂಗಬಹುದೇ ನ್ಯಾಯ ದೀಶರೆ,

  2. ದನದ ಕೋಬ್ಬಿನಲ್ಲಿ ಪ್ರಸಾದ ಕೋಟ್ಟರಲ್ಲಾ ಅಲ್ಲಿ ಅಲ್ಲಾ ಓ ಅಕ್ಬರ್ ಅಂತ ಕೂಗಿ ಸಾಬರೆ, ಆಗ ಸರಿಯೋಗತ್ತೇ

      • Ee lekhana oduvaagale gottaytu idannu baredavanu obba turukane irbeku anta.K.J Halli, D.JHalli, hubballi yalli dushkrutya nadesida ee Sabra kesanna congress vaapassu tegedu kondaaga kushi patta ninnanta aneka sabigalu eega high court teerpu kandisi ishtondu urkondu page gattale lekhana bardidya

  3. Hello shabarimali temple nalli bere religion’ entry agbeku anth christian and Muslim casehakiddru Avan mukalyag yenu tuu itkondiddri. Monne obb muslim temple nalli namaz madtha idda yak madbeki namaz temple nalli tik barsuru yaru illa

  4. ನ್ಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು, ಸಂಪೂರ್ಣ ವಿಷಯ ಇಲ್ಲಿ ಏನು ಹೇಳಿಲ್ಲ,

  5. ಅದೇ ಒಬ್ಬ ಮುಸ್ಲಿಂ ವ್ಯಕ್ತಿ ದೇವಸ್ಥಾನದಲ್ಲಿ ಅಲ್ಲಾ ಹು ಅಕ್ಬರ್ ಅಂತ ಕೂಗಿದ್ದರೆ, ಅದನ್ನು ನ್ಯಾಯಾಲಯ ಸಹ ಅದರಲ್ಲಿ ಏನು ತಪ್ಪಿಲ್ಲ ಅಂತ ತೀರ್ಪು ಕೊಟ್ಟಿದ್ದಾರೆ ನೀವು ಅದನ್ನು ವಿರೋಧಿಸಿ ಈ ಲೇಖನ ಬರೆಯುತ್ತೀರಾ??? ಅಶ್ರಫ್ ಕುಂದಾಪುರ ಅವರೇ…ನೀವು ನಿಮ್ಮ ಅನುಭವದಲ್ಲಿ ಎಷ್ಟು ಸಲ ಭಯೋತ್ಪಾದನೆಯನ್ನು ವಿರೋಧಿಸಿ ಲೇಖನ ಬರೆದಿದ್ದೀರಾ????

  6. ಜಡ್ಜ್ಮೆಟ್ ಮೊದಲು ಓದು . ಕಂಪ್ಲೇಂಟ್ ಕೊಟ್ಟವರೇ ಹೇಳಿದ್ದಾರೆ ಆ ಜಾಗದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಇಂದ ಇದ್ದಾರೆ ಅಂತ , ಹಾಗಿದ್ದಾಗ ಜೈ ಶ್ರೀರಾಮ್ ಕೂಗುವದರಿಂದ ಭಾವೈಕ್ಯತೆಗೆ ಹೇಗೆ ಧಕ್ಕೆ ಆಗತ್ತೆ ? ಅಂತ ಕೇಸ್ ಅನ್ನು dismiss ಮಾಡಿದ್ದಾರೆ ಅಸ್ಟೆ. ಪೂರ್ತಿ ವಿಶಯ ನೀನು ಯಾವತ್ತು ಹೇಳಿದ್ದೀಯ ಬಿಡು.

    • ರೀ ಸ್ವಾಮಿ ಅಶ್ರಫ್, ನೀವು ಮುಸ್ಲಿಂವಾದಿ ಪತ್ರಕರ್ತ ಅನ್ನೋದನ್ನ ನಿಮ್ಮ ಲೇಖನದ ಕೆಳಗೆ ಬರ್ಕೊಳಿ, ಈ ರೀತಿ ನ್ಯಾಯಾಲಯದ ತೀರ್ಪನ್ನ ವಿಮರ್ಶೆ ಮಾಡೋ ಮುನ್ನ,
      ೧) ಕೋಲಾರದ ದೇವಸ್ಥಾನದ ಒಳಗಡೆ ನುಗ್ಗಿ, ಅಲ್ಲಾಹು ಅಕ್ಬರ್ ಅಂತ ಕೂಗುತ್ತಾ ದಾಂದಲೆ ನಡೆಸಿದ ಮುಸಲ್ಮಾನ ಪುಂಡನ ಬಗ್ಗೆ ಬರೆದಿದ್ದೀರ?
      ೨) ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಕೊಡಬೇಕು ಅಂತ ಹೇಳಿ ಅನ್ಯ ಕೋಮಿನ ಮಹಿಳೆಯರೆಲ್ಲ ನೂಕು ನುಗ್ಗಲು ಬಿದ್ದರಲ್ಲ ಅದರ ಬಗ್ಗೆ ವಿಮರ್ಶೆ ಮಾಡಿದ್ದೀರಾ?
      ೩) ತಿರುಪತಿ ತಿಮ್ಮಪ್ಪನ ಮಂದಿರದಲ್ಲಿ ಹಿಂದುಗಳಿಗಿಂತ ಹೆಚ್ಚಿಗೆ ಅನ್ಯಕೋಮಿನ ಜನರೂ ಯಾಕೆ ಕೆಲಸ ಮಾಡೋ ನೆಪದಲ್ಲಿ ಅಪಚಾರ ಮಾಡ್ತಿದ್ರು ಅನ್ನೋದರ ಬಗ್ಗೆ ಯಾವತ್ತಾದ್ರೂ ಬರ್ದಿದ್ದೀರಾ?
      ೪)ಗಣೇಶ ಚತುರ್ಥಿ ಸಂದರ್ಭದಲ್ಲಿ ಮುಸ್ಲಿಂ ಪುಂಡರು ಮಸೀದಿಯ ಮುಂದೆ ಹೋಗದನ್ನ ವಿರೋಧಿಸಿ ಕಲ್ಲು ಹೊಡೆದ್ರಲ್ಲ ಆ ಕಲ್ಲೆಸೆತದ ಬಗ್ಗೆ ಬರೆದಿದ್ದೀರಾ?
      ೫) ಕಾರಿಗೆ ಕಟ್ಟಿದ ಜೈ ಶ್ರೀ ರಾಮ್ ಧ್ವಜವನ್ನು ಕಿತ್ತಾಕಿ ಹೊಡೆದಾಟ ಮಾಡಿದ್ರಲ್ವಾ, ಆ ಮುಸ್ಲಿಮರ ಬಗ್ಗೆ ಮಾತಾಡಿದ್ದೀರ?
      ೬) ಹನುಮಾನ್ ಚಾಲೀಸಾ ನ ತನ್ನ ಅಂಗಡಿಯಲ್ಲಿ ಕೇಳೋದನ್ನ ವಿರೋಧಿಸಿದ , ದಾಂದಲೆ ಮಾಡಿದ ಅಯೋಗ್ಯ ಕಚಡ ಕಜ್ಜಿ ಕಂತ್ರಿ ಮುಸಲ್ಮಾನರ ಬಗ್ಗೆ ಬರೆದಿದ್ದೀರ?

      ನಿನ್ನ ಯೋಗ್ಯತೆಗಿಷ್ಟು, ನೀವೆಲ್ಲ ಪತ್ರಕರ್ತರು ನಾಚ್ಕೆ ಆಗ್ಬೇಕು ನಿಮ್ಮ ಜನ್ಮಕ್ಕೆ ಪತ್ರಿಕಾ ಧರ್ಮ ಅಂದ್ರೆ ಯಾವುದೋ ಒಂದು ಧರ್ಮಕ್ಕೆ ಮೀಸಲಾಗಿರೋದಲ್ಲ ಮಿಸ್ಟರ್.

      ನೀನೊಂದು ಪತ್ರಿಕೆಯ ಮುಖವಾಣಿಯಲ್ಲಿ ಬರೆದ ಮಾತ್ರಕ್ಕೆ ನ್ಯಾಯ ಅನ್ಯಾಯ ಆಗಲ್ಲ ,ಅನ್ಯಾಯ ನ್ಯಾಯನು ಆಗಲ್ಲ, ನೆನಪಿರಲಿ.

  7. ಅಶ್ರಫ್ ಅವರೇ ನೀವು ಮತ್ತು ನಿಮ್ಮ ಸಮಾಜದ ಮುಖಂಡರು ಎಂದಾದರೂ ನಿಮ್ಮ ಜನ ತಪ್ಪು ಮಾಡಿದಾಗ ಅದನ್ನು ತಪ್ಪು ಎಂದು ಹೇಳಿ ತಿದ್ದುವ ಕೆಲಸ ಮಾಡಿದ್ದೀರಾ ಹೇಳಿ…

  8. Ee lekhana oduvaagale gottaytu idannu baredavanu obba turukane irbeku anta.K.J Halli, D.JHalli, hubballi yalli dushkrutya nadesida ee Sabra kesanna congress vaapassu tegedu kondaaga kushi patta ninnanta aneka sabigalu eega high court teerpu kandisi ishtondu urkondu page gattale lekhana bardidya

  9. These people have to learn the lessons from Indonesian Muslims how humanity and good administration exists by following the principles of Ramayana and sanathana dharma.

    Unfortunately, rogue politicians of this country encourage the barbaric administration to appease a section of the society as minority,in fact the term minority is not applicable to any religious group but is applicable to section in democratic society either a caste or class of people.

    These so called press reporter seems to antagonise the society rather than educating innocents for good administration and harmoniously living.
    Please become noble person of the society.

    There

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ...

ಸಾಹಿತ್ಯ ಸಮ್ಮೇಳನ | ಗೋಷ್ಠಿಗಳಲ್ಲೂ ಮಹಿಳಾ ಪ್ರಾತಿನಿಧ್ಯವಿರಲಿ; ರಾಜಕಾರಣಿಗಳು ಕೇಳುಗರಾಗಲಿ

ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ...

ಮಂಡ್ಯ| ಸ್ವಾಮೀಜಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಸಮಾಜವನ್ನು ಹಿಂದಕ್ಕೆಳೆದಂತೆ

ಸಮ್ಮೇಳನದ ಅಧ್ಯಕ್ಷಗಿರಿಯನ್ನು ಮಠಾಧೀಶರಿಗೆ ನೀಡಿದರೆ ಬಲಿಷ್ಠ ಜಾತಿಯವರಿಗೆ ಮಾತ್ರ ಅವಕಾಶ ಸಿಗುತ್ತದೆ....

ಮಂಡ್ಯ ಸಮ್ಮೇಳನ | ಸಾಹಿತ್ಯದ ಸಾರ್ವಭೌಮತ್ವ ಆಳುವವರ ಅಧೀನಕ್ಕೆ ಬಲಿಯಾಗದಿರಲಿ

ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಯೊಬ್ಬರು ಅಧ್ಯಕ್ಶರಾಗಬಾರದೆಂದೇನೂ ಇಲ್ಲ. ಆದರೆ ಅವರು ಸಾಹಿತ್ಯದಲ್ಲಿಯೂ ಸಾಕಶ್ಟು...

Download Eedina App Android / iOS

X