ಆಹಾರ ದ್ವೇಷ | ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ಗ್ರಾಹಕರನ್ನು ನಿಂದಿಸಿದ ಡೆಲಿವೆರಿ ಏಜೆಂಟ್

Date:

Advertisements

ಚಿಕನ್ ಬಿರಿಯಾನಿಯನ್ನು ಆರ್ಡರ್‌ ಮಾಡಿದ್ದಕ್ಕಾಗಿ ಗ್ರಾಹಕರನ್ನು ಆಹಾರ ವಿತರಣಾ (ಡೆಲಿವೆರಿ) ಏಜೆಂಟ್ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬಿರಿಯಾನಿ ತಿನ್ನುವೆಯಾ ಎಂದು ಡೆಲಿವೆರಿ ಏಜೆಂಟ್ ಗದ್ದಲ ಮಾಡಿದ್ದಾನೆಂದು ಆರೋಪಿಸಲಾಗಿದೆ.

ದೆಹಲಿಯ ನಿವಾಸಿಯೊಬ್ಬರು ಇತ್ತೀಚೆಗೆ ಚಿಕನ್ ಬಿರಿಯಾನಿ ಆರ್ಡರ್‌ ಮಾಡಿದ್ದಕ್ಕಾಗಿ ತಾವು ಡೆಲಿವೆರಿ ಏಜೆಂಟ್‌ನಿಂದ ನಿಂದನೆಗೆ ಒಳಗಾಗಿರುವುದಾಗಿ ‘ರೆಡ್ಡಿಟ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಡೆಲಿವೆರಿ ಏಜೆಂಟ್‌ ನಾನು ಆರ್ಡರ್‌ ಮಾಡಿದ್ದ ಆಹಾರವನ್ನು ತಲುಪಿಸಿ ಹೋಗುವ ಬದಲು, ದೀಪಾವಳಿಯ ಸಮಯದಲ್ಲಿ ಮಾಂಸಾಹಾರಿ ಆಹಾರ ತಿನ್ನುವೆಯಾ? ನೀನು ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ. ದೀಪಾವಳಿಯ ವರೆಗೆ ಏನಾದರು ಸ್ವಚ್ಛ ಆಹಾರ ತಿನ್ನಿ, ಹಬ್ಬದ ಬಳಿಕ ಎಲ್ಲ ಚಿಕನ್ ಮತ್ತು ಮಟನ್ ತಿನ್ನಿರಿ” ಎಂದಿದ್ದಾನೆ. ಆತನ ವರ್ತನೆಯಿಂದ ಗ್ರಾಹಕ ದಿಗ್ಭ್ರಾಂತರಾಗಿದ್ದಾರೆ.

“ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಬೇಕೇ ಹೊರತು, ಗ್ರಾಹಕರು ಯಾವ ಆಹಾರ ಆಯ್ಕೆ ಮಾಡಬೇಕು ಎಂಬ ವಿಚಾರದಲ್ಲಿ ಮೂಗು ತೂರಿಸಬಾರದು. ಆತನ ವಿರುದ್ಧ ಡೆಲಿವೆರಿ ಕಸ್ಟಮರ್ ಕೇರ್‌ಗೆ ದೂರು ನೀಡಲು ಯೋಜಿಸಿದ್ದೆ. ಆದರೆ, ಯಾವ ಕ್ರಮ ಕೈಗೊಳ್ಳಬಹುದು ಎಂಬ ಗೊಂದಲದಲ್ಲಿ ಸುಮ್ಮನಾದೆ. ಆದರೂ, ಆ ಘಟನೆ ನನ್ನ ಇಡೀ ದಿನವನ್ನೇ ಹಾಳು ಮಾಡಿತು. ಅಲ್ಲದೆ, ಆತ ಬಿರಿಯಾನಿಯಲ್ಲಿ ಏನನ್ನಾದರೂ ಬೆರೆಸಿರಬಹುದೇ ಎಂಬ ಭಯದಲ್ಲಿ ಬಿರಿಯಾನಿಯನ್ನೂ ತಿನ್ನಲಾಗಲಿಲ್ಲ” ಎಂದು ಗ್ರಾಹಕ ಹೇಳಿಕೊಂಡಿದ್ದಾರೆ.

Advertisements

“ಇದು ಭಯ ಬಿತ್ತುವ ವರ್ತನೆಗಳಲ್ಲಿ ಒಂದಾಗಿ. ಈ ರೀತಿಯ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, “ನಾನೂ ಸಹ ಸಸ್ಯಾಹಾರಿ. ಆದರೆ ಯಾರಾದರೂ ತಮ್ಮ ಆಹಾರದ ಆದ್ಯತೆಗಳನ್ನು ಇತರರ ಮೇಲೆ ಹೇರಲು ಮುಂದಾದರೆ ನಾನು ಅದನ್ನು ವಿರೋಧಿಸುತ್ತೇನೆ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X