ಐಪಿಎಲ್‌ 2023 | ಪ್ಲೇ ಆಫ್‌ ಅಂಚಿನಲ್ಲಿ ಎಡವಿದ ಪಂಜಾಬ್‌!

Date:

Advertisements

ಐಪಿಎಲ್‌ 16ನೇ ಆವೃತ್ತಿಯ ಮಹತ್ವದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಮುಗ್ಗರಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪಂಜಾಬ್‌ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 15 ರನ್‌ಗಳ ಸೋಲು ಅನುಭವಿಸಿದೆ. ಆ ಮೂಲಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಕ್ಯಾಪಿಟಲ್ಸ್‌, ಪಂಜಾಬ್‌ ಬೌಲರ್‌ಗಳ ಬೆವರಿಳಿಸಿತ್ತು. ಕೇವಲ 2 ವಿಕೆಟ್‌ ನಷ್ಟದಲ್ಲಿ ನಿಗದಿತ 20 ಓವರ್‌ಗಳಲ್ಲಿ 213 ರನ್‌ಗಳಿಸಿತ್ತು. ಕ್ವಾಲಿಫೈಯರ್‌ ಆಸೆಯನ್ನು ಜೀವಂತವಾಗಿರಿಸಿದ್ದ ಶಿಖರ್‌ ಧವನ್‌ ಪಡೆ ಡೆಲ್ಲಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಚೇಸಿಂಗ್‌ ವೇಳೆ ಲಿವಿಂಗ್‌ಸ್ಟನ್‌ (94*) ಮತ್ತು ಅಥರ್ವ ತೈಡೆ (55) ಹೊರತು ಪಡಿಸಿ, ಇನ್ನುಳಿದ ಬ್ಯಾಟರ್‌ಗಳು ತಂಡದ ನೆರವಿಗೆ ನಿಲ್ಲಲಿಲ್ಲ.

ನಾಯಕ ಶಿಖರ್‌ ಧವನ್‌ ತಾನೆದುರಿಸಿದ ಮೊದ ಎಸೆತದಲ್ಲೇ ಸ್ಲಿಪ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಪ್ರಭಾಸಿಮ್ರನ್‌ ಸಿಂಗ್‌ 22 ರನ್‌ಗಳಿಸಿದರು. ಬಳಿಕ ಜೊತೆಯಾದ ಲಿವಿಂಗ್‌ಸ್ಟನ್‌ ಮತ್ತು ಥೈಡೆ, ಪಂಜಾಬ್‌ ತಂಡಕ್ಕೆ ಆಸರೆಯಾದರು. 48 ಎಸೆತಗಳನ್ನು ಎದುರಿಸಿದ ಲಿವಿಂಗ್‌ಸ್ಟನ್‌ 9 ಸಿಕ್ಸರ್‌ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 94 ರನ್‌ಗಳಿಸಿದರೆ, ತೈಡೆ 55 ರನ್‌ಗಳಿಸಿದರು.

Advertisements

ಜಿತೇಶ್‌ ಶರ್ಮಾ (0), ಶಾರೂಖ್‌ ಖಾನ್‌ (6), ಸ್ಯಾಮ್‌ ಕರನ್‌ (11), ಗೆಲುವಿಗಾಗಿ ಹೋರಾಟ ಪ್ರದರ್ಶಿಸಲಿಲ್ಲ . ಅಂತಿಮವಾಗಿ 8 ವಿಕೆಟ್‌ ನಷ್ಟದಲ್ಲಿ 198 ರನ್‌ಗಳಿಸಲಷ್ಟೇ ಕಿಂಗ್ಸ್‌  ಶಕ್ತವಾಯಿತು. ಆ ಮೂಲಕ  ಪ್ಲೇ ಆಫ್‌ ಅಂಚಿನಲ್ಲಿ ಪಂಜಾಬ್‌ ಎಡವಿದೆ.

ಟೂರ್ನಿಯಲ್ಲಿ ತನ್ನ 5ನೇ ಜಯದೊಂದಿಗೆ ಡೆಲ್ಲಿ ತಂಡ ಕೊನೇ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಕ್ಕೇರಿದರೆ, ಪಂಜಾಬ್‌ ಕಿಂಗ್ಸ್ 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಡೆಲ್ಲಿ ಪರ ಅಬ್ಬರಿಸಿದ ರೊಸೊವ್!

ಅಂಕ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದ ಡೆಲ್ಲಿ, ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಬಿರುಸಿನ ಬ್ಯಾಟಿಂಗ್‌ ನಡೆಸಿದ ಪೃಥ್ವಿ ಶಾ (54), ಡೇವಿಡ್‌ ವಾರ್ನರ್‌ (46), ರೈಲೀ ರೊಸೊವ್ (82*) ಮತ್ತು ಫಿಲಿಪ್ ಸಾಲ್ಟ್ (26*) ಪಂಜಾಬ್ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದರು. ಪರಿಣಾಮ ಕ್ಯಾಪಿಟಲ್ಸ್‌, 20 ಓವರ್‌ಗಳಲ್ಲಿ 213/2 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X