ಮೈಸೂರು | ‘ಟ್ರಿಣ್-ಟ್ರಿಣ್’ಗೆ ಹೊಸ ಮಜಲು; ರಸ್ತೆಗಳಿಯಲಿವೆ ಎಲೆಕ್ಟ್ರಿಕ್ ಬೈಸಿಕಲ್

Date:

Advertisements

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್ ವ್ಯವಸ್ಥೆಯಾದ ‘ಟ್ರಿಣ್-ಟ್ರಿಣ್’ ಯೋಜನೆ ಮತ್ತೊಂದು ಹಂತ ಮೇಲೇರಲಿದೆ. ಈಗಿರುವ ಬೈಸಿಕಲ್‌ಗಳ ಜೊತೆಗೆ ಎಲೆಕ್ಟ್ರಿಕಲ್ ಬೈಸಿಕಲ್‌ಗಳನ್ನೂ ಒದಗಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಮುಂದಾಗಿದೆ. ಶೀಘ್ರದಲ್ಲೇ ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗ ನಗರದಲ್ಲಿ ಆರಂಭವಾಗಲಿದೆ.

2017ರ ಜೂನ್ 4ರಂದು ಟ್ರಿಣ್-ಟ್ರಿಣ್ ಯೋಚನೆಗೆ ಚಾಲನೆ ನೀಡಲಾಗಿತ್ತು. ನಗರದಲ್ಲಿ 430 ಬೈಸಿಕಲ್‌ಗಳಿದ್ದು, ಇದೂವರೆಗೂ 17,000 ಮಂದಿ ಯೋಜನೆಯ ಚಂದಾದಾರರಾಗಿ ಬೈಸಿಕಲ್‌ಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ, 52 ಬೈಸಿಕಲ್ ನಿಲ್ದಾಣಗಳಿವೆ.

“ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗವನ್ನು ಮುಂದಿನ ವಾರ ಪ್ರಾರಂಭಿಸಲಾಗುವುದು. ನಾವು ಸುಮಾರು 500 ಬ್ಯಾಟರಿ ಚಾಲಿತ ಬೈಸಿಕಲ್‌ಗಳನ್ನು ಮೊದಲ ಹಂತದಲ್ಲಿಯೇ ರಸ್ತೆಗಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಗಮನದಲ್ಲಿಟ್ಟುಕೊಂಡು 1,000ಕ್ಕೆ ಏರಿಸಲಾಗುತ್ತದೆ” ಎಂದು ಡಿಯುಎಲ್‌ಟಿ ಆಯುಕ್ತೆ ವಿ ಮಂಜುಳಾ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ?:ಮೈಸೂರು | ತಮ್ಮ ಮೊದಲ ಮತವನ್ನೇ ಮಾರಿಕೊಂಡ ಯುವಜನರು!

“ಆದರೆ, ಮುಂದಿನ ವಾರವೇ ಹೊಸ ಬೈಸಿಕಲ್‌ಗಳು ಸಾರ್ವಜನಿಕರ ಬಳಕೆಗೆ ದೊರೆಯುವುದಿಲ್ಲ. ನಗರದ ಜನರಿಗೆ ಅವುಗಳನ್ನು ಒದಗಿಸುವುದಕ್ಕೂ ಮೊದಲು, ಒಂದು ತಿಂಗಳ ಕಾಲ ಅಧಿಕಾರಿಗಳು ತಮ್ಮದೇ ಆದ ಪರಿಶೀಲನೆ ನಡೆಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X