ಅಲ್ಲಮನ ಅನನ್ಯ ಪದಪ್ರಯೋಗಗಳು | ನಿಜವನರಿದ ನಿಶ್ಚಿಂತ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ

ನಿಜವನರಿದ ನಿಶ್ಚಿಂತನೆ
ಮರಣವ ಗೆಲಿದ ಮಹಂತನೆ
ಘನವ ಕಂಡ ಮಹಿಮನೆ
ಪರವನೊಳಕೊಂಡ ಪರಿಣಾಮಿಯೆ
ಬಯಲಲೊದಗಿದ ಭರಿತನೆ
ಗುಹೇಶ್ವರಲಿಂಗ
ನಿರಾಳವನೊಳಕೊಂಡ ಸಹಜನೆ

ಪದಾರ್ಥ:
ನಿಜ = ಸತ್ಯ
ಅರಿದ = ತಿಳಿದ
ನಿಶ್ಚಿಂತ = ಶಾಂತ, ಪ್ರಶಾಂತ
ಘನ = ಪರಿಪೂರ್ಣತೆ
ಪರಿಣಾಮಿ = ಪರಮತೃಪ್ತ

ವಚನಾರ್ಥ:
ಶರಣ ವ್ಯಕ್ತಿತ್ವಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಉದ್ದೇಶದಲ್ಲಿ ಈ ವಚನ ರಚನೆಯಾದಂತೆ ಕಂಡುಬರುತ್ತದೆ. ಶರಣ ವ್ಯಕ್ತಿತ್ವ ಹೇಗಿರುತ್ತದೆ ಎಂಬ ವಿವರಣೆಯನ್ನು ಆರು ತೆರನಾಗಿ ಅಲ್ಲಮ ವಿವರಿಸುತ್ತಾರೆ. ಶರಣನು ಅಂತಿಮ ಸತ್ಯವನ್ನು ಅರಿತವನಾಗಿದ್ದರಿಂದ ಜೀವನ್ಮಾರ್ಗ ಮಧ್ಯದಲ್ಲಿ ಬರುವ ಯಾವ ಸುಖ ದುಃಖಗಳ ಗೋಜಿಗೂ ಲೆಕ್ಕಿಸದೆ ನಿಶ್ಚಿಂತನಾಗಿರುತ್ತಾನೆ. ಆತ ಜನನ ಮರಣಗಳ ಚಕ್ರಕ್ಕೆ ಸಿಲುಕದ ಮರಣ ಭಯವನ್ನು ಮೀರಿ ನಿಂತ ಮಹಾ ಮನುಷ್ಯ. ಹಾಗಾಗಿ ಅವನು ಮಹಾಂತ. ಮೃತ್ಯುಂಜಯ. ಮರಣವನ್ನು ಗೆದ್ದು ನಿಂತ ಮನಸ್ಥಿತಿಯುಳ್ಳವ. ಜೀವನದ ಪ್ರತಿ ಘಟ್ಟದಲ್ಲೂ ಪರಿಪೂರ್ಣತೆಯನ್ನು ಕಂಡ ಅಥವಾ ಕಾಣಲೆತ್ನಿಸುವ ನಿರಂತರ ಸಾಧಕ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಘನ ಮಹಿಮ. ಪರ ಅಂದರೆ ಪರವಸ್ತುವನ್ನೇ ತನ್ನ ಅಂತರಂಗದೊಳಗೆ ಅಳವಡಿಸಿಕೊಂಡಿರುವ ಅದ್ವೈತಿ ಮತ್ತು ಅದರ ಅಪೂರ್ವ ಪರಿಣಾಮವನ್ನು ತನ್ನಲ್ಲಿಯೇ ತಾನು ಆನಂದಿಸುವ ಪರಿಣಾಮಿ ಅಂದರೆ ಆತ್ಮತೃಪ್ತ. ಕಡೆಗೊಂದು ದಿನ ವಿಶ್ವದ ಅನಂತ ವಿಸ್ತಾರದ ಬಯಲಿನಲ್ಲಿ ಒಂದಾಗಿ ಬಯಲಾಗುವ ಸಂಪದ್ಭರಿತ ಬಯಕೆಯುಳ್ಳ ಸಜ್ಜನ. ಆತನದು ನಿರಾಳತೆಯೇ ಸಾಕಾರಗೊಂಡ ಸರಳ ಸಹಜ ಸುಂದರ ಮನಸ್ಸು.

Advertisements

ಪದಪ್ರಯೋಗಾರ್ಥ:
ನಿಜವನರಿದ ನಿಶ್ಚಿಂತ ಎಂಬ ಪದ ಪ್ರಯೋಗವೇ ಇಡೀ ವಚನಕ್ಕೆ ಕಳಸಪ್ರಾಯವಾಗಿದೆ. ಜೀವನದಲ್ಲಿ ನಿಶ್ಚಿಂತತೆ ಪ್ರಾಪ್ತವಾಗುವುದು ನಿಜವನ್ನು ಅರಿತರೆ ಮಾತ್ರ. ಇಲ್ಲದಿದ್ದಲ್ಲಿ ಸತ್ಯ ಅಸತ್ಯಗಳ ತಾಕಲಾಟದಲ್ಲಿ ಚಿಂತೆ ಆವರಿಸುತ್ತದೆ. ಜೀವನದಲ್ಲಿ ಚಿಂತೆ ಚಿತೆಯಾಗಿ ಕಾಡುವ ಬಗೆಯಿದು. “ನಿರ್ಣಯವನರಿಯದ ಮನವೇ ದುಗುಡವನೆ ಆಹಾರಗೊಂಡೆಯಲ್ಲ” ಎಂದು ಅಲ್ಲಮ ಇನ್ನೊಂದು ವಚನದಲ್ಲಿ ಪ್ರಶ್ನಿಸುವ ಪ್ರಸಂಗ ಬರುತ್ತದೆ. ಈ ವಚನದಲ್ಲಿ ಬರುವ ಆರೂ ಸಾಲುಗಳಲ್ಲಿ ಅಲ್ಲಮ ಮಾಡಿರುವ ಪದಪ್ರಯೋಗಗಳಿಗೆ ಅಪೂರ್ವವಾದ ಕಾವ್ಯಗುಣವಿದೆ. ಪ್ರಾಸಬದ್ಧತೆಯಿದೆ. ಶರಣರ ಕ್ಲಿಷ್ಟಕರ ವ್ಯಕ್ತಿತ್ವವನ್ನು ಸರಳವಾಗಿ ಪ್ರತಿಪಾದಿಸುವ ಅಲ್ಲಮನ ಪದತಂತ್ರಗಾರಿಕೆ ಅತ್ಯಂತ ನಿಖರವಾಗಿ ನಿರೂಪಣೆಯಾಗಿದೆ.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

2 COMMENTS

  1. ಸರ್,ಅಲ್ಲಮಪ್ರಭುಗಳ ವ್ಯಕ್ತಿತ್ವ ಎಷ್ಟು ಆಳವೋ,ಅವರ ವಚನಗಳೂ ಅಷ್ಟೇ, ಅರ್ಥಗರ್ಭಿತ ಮತ್ತು ಕ್ಲಿಷ್ಟಕರ. ನೀವು ಸರಳ ಭಾಷೆಯಲ್ಲಿ ತಿಳಿಸಿದ್ದೀರಿ. ಧನ್ಯವಾದಗಳು,ನಿಮ್ಮ ಬಹುಮುಖ ಪ್ರತಿಭೆಗೆ. ನಾನು ತಿಳಿದುಕೊಂಡ ಹೊಸ ಶಬ್ದ, ಘನ=ಪರಿಪೂರ್ಣ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X