ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸದಸ್ಯರಿಗೆ ನೀಡಿದ ಸಂಬಳ, ಭತ್ಯೆಗಳೆಷ್ಟು ಗೊತ್ತೆ?

Date:

Advertisements

ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸದಸ್ಯರ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳಿಗಾಗಿ ಸುಮಾರು ₹ 200 ಕೋಟಿ ಖರ್ಚು ಮಾಡಲಾಗಿದೆ ಮತ್ತು ಅವರ ಪ್ರಯಾಣಕ್ಕಾಗಿಯೇ ಸುಮಾರು ₹ 63 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಆಯೋಗದ (ಆರ್‌ಟಿಐ) ಕಾಯಿದೆಯಡಿ ನೀಡಿದ ಉತ್ತರದಲ್ಲಿ ಬಹಿರಂಗಗೊಂಡಿದೆ.

2021-22ರಲ್ಲಿ, ಕೋವಿಡ್ ಸಾಂಕ್ರಾಮಿಕದ ನಂತರ, ರಾಜ್ಯಸಭಾ ಸದಸ್ಯರಿಗಾಗಿ ₹ 97 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

ಈ ವೆಚ್ಚವು ಸ್ವದೇಶಿ ಪ್ರಯಾಣಕ್ಕೆ ₹ 28.5 ಕೋಟಿ ಮತ್ತು ವಿದೇಶ ಪ್ರಯಾಣಕ್ಕಾಗಿ ₹ 1.28 ಕೋಟಿ ಒಳಗೊಂಡಿದೆ. ಸಂಬಳ ₹ 57.6 ಕೋಟಿ, ವೈದ್ಯಕೀಯ ವೆಚ್ಚ ₹ 17 ಲಕ್ಷ ಮತ್ತು ಕಚೇರಿ ವೆಚ್ಚ ₹ 7.5 ಕೋಟಿ. ಸಂಸದರಿಗೆ ಮಾಹಿತಿ ತಂತ್ರಜ್ಞಾನದ ನೆರವಿಗಾಗಿ ₹ 1.2 ಕೋಟಿ ಖರ್ಚು ಮಾಡಲಾಗಿದೆ.

Advertisements

2021-23ರಲ್ಲಿ ₹ 100 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ₹ 33 ಕೋಟಿ ಸ್ವದೇಶ ಮತ್ತು ವಿದೇಶ ಪ್ರಯಾಣ ವೆಚ್ಚ ಸೇರಿದೆ ಎಂದು ಮಧ್ಯಪ್ರದೇಶದ ಚಂದರ್ ಶೇಖರ್ ಗೌರ್ ಎಂಬುವವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಸಲ್ಲಿಸಲಾದ ಪ್ರಶ್ನೆಗೆ ರಾಜ್ಯಸಭಾ ಸಚಿವಾಲಯದ ಉತ್ತರದಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

2022-23ರಲ್ಲಿ ಸದಸ್ಯರ ವೇತನಕ್ಕೆ ₹ 58.5 ಕೋಟಿ, ಸ್ವದೇಶ ಪ್ರಯಾಣಕ್ಕೆ ₹ 30.9 ಕೋಟಿ ಮತ್ತು ವಿದೇಶ ಪ್ರಯಾಣಕ್ಕೆ ₹ 2.6 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.

ಇತರ ವೆಚ್ಚಗಳಲ್ಲಿ ವೈದ್ಯಕೀಯ ಚಿಕಿತ್ಸೆ (ರೂ. 65 ಲಕ್ಷ), ಕಚೇರಿ ವೆಚ್ಚದಲ್ಲಿ ₹7 ಕೋಟಿ ಮತ್ತು ಐಟಿ ಸೇವೆಗಳಿಗೆ ₹ 1.5 ಕೋಟಿ ಸೇರಿವೆ.

2021-22ರಲ್ಲಿ, ರಾಜ್ಯಸಭೆಯ ಮಾಜಿ ಸದಸ್ಯರಿಗೆ ಸ್ವದೇಶಿ ಪ್ರಯಾಣ ವೆಚ್ಚಕ್ಕಾಗಿ ಮಾಡಿದ ವೆಚ್ಚವು ₹ 1.7 ಕೋಟಿ ಮತ್ತು 2022-23ರಲ್ಲಿ ₹ 70 ಲಕ್ಷ ಎಂದು ಸಚಿವಾಲಯ ತಿಳಿಸಿದೆ.

2021ರ ದಾಖಲೆಗಳ ಪ್ರಕಾರ, ರಾಜ್ಯಸಭೆಯ ಸದಸ್ಯರ ಹಾಜರಾತಿ ಚಳಿಗಾಲದ ಅಧಿವೇಶನದಲ್ಲಿ ಶೇ 43, ಮುಂಗಾರು ಅಧಿವೇಶನದಲ್ಲಿ ಶೇ 29 ಮತ್ತು ಬಜೆಟ್ ಅಧಿವೇಶನದಲ್ಲಿ ಶೇ 90 ರಷ್ಟಿತ್ತು.

ಮರು ವರ್ಷ 2022ರಲ್ಲಿ, ಚಳಿಗಾಲದ ಅಧಿವೇಶನದಲ್ಲಿ ಶೇ 94, ಮುಂಗಾರು ಅಧಿವೇಶನದಲ್ಲಿ ಶೇ 42 ಮತ್ತು ಬಜೆಟ್ ಅಧಿವೇಶನದಲ್ಲಿ ಶೇಕಡಾ 90 ರಷ್ಟಿತ್ತು. ಈ ವರ್ಷದ ಮೇವರೆಗೆ, ಬಜೆಟ್ ಅಧಿವೇಶನದಲ್ಲಿ ಹಾಜರಾತಿಯು ಶೇ 24 ರಷ್ಟು ಕಡಿಮೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X