ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ‘ಜನಕಲ್ಯಾಣ ಸಮಾವೇಶ’ಕ್ಕೆ ತೆರಳುವಾಗ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಹಾಸನದ ಶಾಂತಿಗ್ರಾಮ ಬಳಿ ಅಪಘಾತ ಸಂಭವಿಸಿದೆ.
ಶಾಂತಿಗ್ರಾಮದ ಸಮೀಪವಿರುವ ಟೋಲ್ ಬಳಿ ಹಿಂದಿನಿಂದ ಬಂದ ಕಾರು ಸಚಿವ ಮುನಿಯಪ್ಪ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಸದ್ಯ, ಯಾರಿಗೂ ಯಾವುದೇ ಅಪಾಯವಾಗಿಲ್ಲ. ಸಚಿವ ಮುನಿಯಪ್ಪ ಅವರ ಕಾರಿನಲ್ಲಿದ್ದವರು ಹಾಗೂ ಡಿಕ್ಕಿ ಹೊಡೆದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
#official #car which #food and civil supplies #minister Muniyappa travelling met with #accident enrooting #kpcc Swabhimana Samavesha #hassan. Nobody injured.@NewIndianXpress @Cloudnirad @ramupatil_TNIE @AshwiniMS_TNIE pic.twitter.com/olyAcd21ib
— Udayakumarbr@tniehassan (@udayakumarbr) December 5, 2024