‘ಸಿಎಪಿಎಫ್‌’ಗೆ 100 ದಿನಗಳ ರಜೆ: 9.5 ಲಕ್ಷ ಸಿಬ್ಬಂದಿಗಳಲ್ಲಿ ರಜೆ ಸಿಕ್ಕಿದ್ದು ಕೇವಲ 42 ಸಾವಿರ ಮಂದಿಗೆ

Date:

Advertisements

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳಿಗೆ 100 ದಿನ ರಜೆ ಪಡೆಯುವ ಸೌಲಭ್ಯವಿದೆ. ಆದಾಗ್ಯೂ, 2020 ಮತ್ತು 2024ರ (ಅಕ್ಟೋಬರ್ ವರೆಗೆ) ನಡುವೆ ಈ ಪಡೆಗಳಲ್ಲಿರುವ 9.5 ಲಕ್ಷ ಸಿಬ್ಬಂದಿಗಳ ಪೈಕಿ ಕೇವಲ 42,000 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆಯ ಲಾಭ ಪಡೆದಿದ್ದಾರೆ ಎಂಂದು ಕೇಂದ್ರ ಗೃಹ ಸಚಿವಾಲಯ (MHA) ಮಾಹಿತಿ ನೀಡಿದೆ.

ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಆತ್ಮಹತ್ಯೆಗಳು ಮತ್ತು ಸ್ವಯಂನಿವೃತ್ತಿಯನ್ನು ಕಡಿಮೆ ಮಾಡುವ ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ 100 ದಿನಗಳ ರಜೆ ನೀತಿಯನ್ನು ಘೋಷಿಸಲಾಗಿತ್ತು. ಆದಾಗ್ಯೂ, ತೀರಾ ಕಡಿಮೆ ಸಿಬ್ಬಂದಿಗಳು ಈ ನೀತಿಯಡಿ ರಜೆ ಪಡೆದಿದ್ದಾರೆ.

ಸಂಸತ್ತಿನಲ್ಲಿ ಮಂಡಿಸಲಾದ ಗೃಹ ಸಚಿವಾಲಯದ ಮಾಹಿತಿಯಂತೆ, ಕಳೆದ ನಾಲ್ಕು ವರ್ಷಗಳಲ್ಲಿ ಸಿಆರ್‌ಪಿಎಫ್‌ನ ಒಟ್ಟು 2,245 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆ ಪಡೆದುಕೊಂಡಿದ್ದಾರೆ. ಆದಾಗ್ಯೂ, 2024ರಲ್ಲಿ ಕೇವಲ 71 ಮಂದಿ ಮಾತ್ರವೇ ರಜೆ ಮೇಲೆ ತಮ್ಮೂರಿಗೆ ಹೋಗಲು ಸಾಧ್ಯವಾಗಿದೆ.

Advertisements

ಇನ್ನು, ಗಡಿ ಭದ್ರತಾ ಪಡೆಯಲ್ಲಿ (BSF) ಒಟ್ಟು 21,733 ಸಿಬ್ಬಂದಿ 100 ದಿನ ರಜೆಯನ್ನು ತೆಗೆದುಕೊಂಡಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಪಡೆಯ 1,472 ಸಿಬ್ಬಂದಿ, ಸಶಸ್ತ್ರ ಸೀಮಾ ಬಾಲ್‌ನ (SSB) 6,142 ಸಿಬ್ಬಂದಿ ಹಾಗೂ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ನ (CISF) 8,838 ಸಿಬ್ಬಂದಿ ಈ ರಜೆಗಳನ್ನು ಪಡೆಯಲು ಸಾಧ್ಯವಾಗಿದೆ.

ಇದಲ್ಲದೆ, ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ಮಣಿಪುರದಲ್ಲಿ ನಿಯೋಜಿಸಲಾದ ಅಸ್ಸಾಂ ರೈಫಲ್ಸ್‌ನ 2,367 ಸಿಬ್ಬಂದಿಗಳು 100 ದಿನಗಳ ರಜೆ ಪಡೆದಿದ್ದಾರೆ. ಒಟ್ಟಾರೆಯಾಗಿ, 42,797 ಸಿಬ್ಬಂದಿಗಳು ರಜೆಯ ಉಪಯೋಗ ಪಡೆದುಕೊಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. 100 day’s ರಾಜ ಇನ್ನೂ ನಮಗೆ ಸಿಗುತ್ತಿಲ್ಲ ಅದನ್ನು ಕೇಂದ್ರೀಯ ರಕ್ಷಣಾ ಮಂತ್ರಿಗಳು ಇನ್ನು ಬಿಲ್ ಪಾಸ್ ಮಾಡಿಲ್ಲ ಈ ತರಹದ ಸುಳ್ಳು ಸುದ್ದಿಗಳನ್ನು ಸಾಮಾನ್ಯ ಜನರಿಗೆ ಕೊಡಬೇಡಿ ಈ ಕೂಡಲೇ ಈ ಸುದ್ದಿಯನ್ನು ಇಂಟರ್ನೆಟ್ ನಿಂದ ಡಿಲೀಟ್ ಮಾಡು

  2. 100 ದಿನ ರಜೆ ಇನ್ನು ಶುರು ಆಗಿಲ್ಲ ವಿಷಯ ಗೊತ್ತಿಲ್ಲ ಅಂದ್ರೆ ಯಾಕೆ ಸುಳ್ಳು ಸುದ್ಧಿ ಹಾಕ್ತೀರಾ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X