ಕಲಬುರಗಿ | ಪುರಸಭೆ ಸಿಬ್ಬಂದಿ ಯಂಕಪ್ಪರನ್ನು ಮೂಲಹುದ್ದೆಗೆ ವರ್ಗಾಯಿಸಿ: ದಸಂಸ ಆಗ್ರಹ

Date:

Advertisements

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಯಂಕಪ್ಪ ಇವರು ತಮ್ಮ ಮೂಲಹುದ್ದೆ ಬಿಟ್ಟು ಬೇರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದು ದಸಂಸ ಮುಖಂಡ ಸಿದ್ದು ಕೆರೂರು ತಿಳಿಸಿದರು.

ಸರಕಾರದ ಆದೇಶದ ಪ್ರಕಾರ ಅವರನ್ನು ಮೂಲ ಹುದ್ದೆಗೆ ಕಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ತಾಲೂಕ ಸಮಿತಿ ಜೇವರ್ಗಿ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ದಸಂಸ ತಾಲೂಕು ಸಮಿತಿಯ ಸಂಚಾಲಕ ಸಿದ್ದು ಕೆರೂರವರು ಮಾತನಾಡಿ, “ಪುರಸಭೆ ಮುಖ್ಯ ಅಧಿಕಾರಿಗಳಾದ ಶಂಭುಲಿಂಗ ದೇಸಾಯಿ ರವರು. ಸರಕಾರದ ಆದೇಶವನ್ನು ಪಾಲಿಸಲು ವಿಫಲರಾಗಿದ್ದಾರೆ” ಎಂದು ದೂರಿದರು.

Advertisements

“ಪುರಸಭೆಯಲ್ಲಿ ಲೋಡರ್ ಆಗಿ ಸರಕಾರದ ನಿಯಮನುಸಾರ ಸೇವೆ ಸಲ್ಲಿಸಬೇಕು ಆದರೆ ಸದರಿ ರವರು ತಮ್ಮ ಮೂಲಹುದ್ದೆ ಬಿಟ್ಟು ಬೇರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರನು ಮೂಲ ಹುದ್ದೆಗೆ ಕಳಿಸಿಕೊಡಬೇಕು. ಅದರಲ್ಲಿ ಕೆಲವರನ್ನು ಅವರ ಮೂಲ ಹುದ್ದೆಗೆ ಕಳಿಸಿದ್ದೀರಿ. ಆದರೆ ಯಂಕಪ್ಪ (ಲೋಡರ್) ಇವರನ್ನು ಇನ್ನೂ ಅವರ ಮೂಲ ಹುದ್ದೆಗೆ ಕಳಿಸಿರುವುದಿಲ್ಲ. ಆದಕಾರಣ ಅವರನ್ನು ಮೂಲ ಹುದ್ದೆಗೆ ಕಳಿಸಬೇಕೆಂದು ಮತ್ತೊಮ್ಮೆ ತಮ್ಮ ಗಮನಕ್ಕೆ ಸಮಿತಿಯು ತರಬಯಸುತ್ತದೆ. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿದ್ದೀರಾ? ಬೆಳಗಾವಿ ಅಧಿವೇಶನ | ನೇಕಾರ ಮಾಲೀಕರಷ್ಟೆ ಅಲ್ಲ, ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಹ ಚರ್ಚೆಗೆ ಆಗ್ರಹ

ಈ ಸಂದರ್ಭದಲ್ಲಿ ಜಿಲ್ಲಾ ಸಂ.ಸಂಚಾಲಕ ಶ್ರೀಹರಿ ಕರಕಿಹಳ್ಳಿ, ಶರಣಬಸಪ್ಪ ಲಖಣಾಪೂರ, ಜೈಭೀಮ ನರಿಬೋಳ, ರೇವಣ ಸಿದ್ದಪ್ಪ ಬಿರಾಳ, ಯಶವಂತ ಬಡಿಗೇರ, ಲಕ್ಷ್ಮಣ ಡೊಳ್ಳೆ, ಬಸವರಾಜ ವರ್ಚನಳ್ಳಿ, ಭೀರಲಿಂಗ ಕೆಲ್ಲೂರ, ಶ್ರೀಮಂತ ಕಿಲೆದಾರ, ಸಭಾಷ ಭಂಡಾರಿ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X