ಸಾಹಿತ್ಯ ಉತ್ಸವ | ಮಣ್ಣಿನ ವಾಸನೆ ಬರುವುದು ಜನಸಾಮಾನ್ಯರಿದ್ದಾಗ..!

Date:

Advertisements

“ಸಾಹಿತ್ಯ ಉತ್ಸವಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಮಾಡಬೇಕಾದ ಕೆಲಸಗಳು ಹೊರಬೇಕಾದ ಹೊಣೆಗಾರಿಕೆಗಳು ಹೆಚ್ಚಾಗಿವೆ. ಆದರೆ, ಫೆಸ್ಟಿವಲ್‌ನ ಸ್ವರೂಪ್ ಇನ್ನೂ ಸ್ವಲ್ಪ ಬದಲಾವಣೆ ಮಾಡಿದರೇ, ಅದು ಸೂಕ್ತ. ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಒಳಗೊಂಡರೇ ಮಾತ್ರ ಅದಕ್ಕೆ ಮಣ್ಣಿನ ವಾಸನೆ ಬರುತ್ತದೆ” ಎಂದು ವಿಮರ್ಶಕಿ ಆಶಾದೇವಿ ಹೇಳಿದ್ದಾರೆ.

ಬೆಂಗಳೂರಿನ ಲಲಿತ ಅಶೋಕ ಹೋಟೇಲ್‌ನಲ್ಲಿ ‘ಬೆಂಗಳೂರು ಸಾಹಿತ್ಯ ಉತ್ಸವ’ ನಡೆಯುತ್ತಿದ್ದು, ಹಲವು ಜನರು ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಂಡು ಈದಿನ.ಕಾಮ್‌ ಜತೆಗೆ ಅವರು ಮಾತನಾಡಿದರು. ಉತ್ಸವಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ಭಾಗವಹಿಸಬೇಕು. ಆಗ ಮಾತ್ರವೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ಸಾಹಿತ್ಯ ಉತ್ಸವವು 5 ವೇದಿಕೆಗಳಲ್ಲಿ ನಡೆಯುತ್ತಿದೆ. ಡಿಸೆಂಬರ್ 14 ಮತ್ತು 15 ರಂದು ವಿಚಾರ ಸಂಕಿರಣ ಮತ್ತು ಸಂವಾದಗಳು ನಡೆಯಲಿದೆ. ಸಾಹಿತ್ಯ ಉತ್ಸವ ಆರಂಭವಾದ ದಿನವೇ ಹಲವು ಜನರು ತಮ್ಮ ನೆಚ್ಚಿನ ಕವಿ ಮತ್ತು ಭಾಷಣಕಾರರನ್ನು ಕಾಣಲು ಬಂದಿದ್ದಾರೆ. ಎರಡು ದಿನ ನಡೆಯುವ ಈ ಉತ್ಸವ ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಸಾಹಿತ್ಯದ ಜತೆಗೆ ಸಂಗೀತ, ಸಿನಿಮಾ, ಕ್ರೀಡೆ ಸೇರಿ ನಾನಾ ಕ್ಷೇತ್ರಗಳ ಪ್ರಮುಖರು ದೇಶ–ವಿದೇಶಗಳಿಂದ ಬಂದಿದ್ದಾರೆ.  

Advertisements

ಸಾಹಿತ್ಯ ಉತ್ಸವದಲ್ಲಿ 350ಕ್ಕೂ ಹೆಚ್ಚು ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 5 ವೇದಿಕೆಗಳಲ್ಲಿ ನಡೆಯುತ್ತಿರುವ ಸಂವಾದದಲ್ಲಿ ಕವಿಗಳು ಮತ್ತು ಭಾಷಣಕಾರರು ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ ಸೇರಿ ವೈವಿಧ್ಯಮಯ ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ. ಅಲ್ಲದೇ, ಸಂವಾದದ ಜತೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇದೆ.

ಕಾರ್ಯಕ್ರಮದಲ್ಲಿ ‘ನೊಬೆಲ್ ಪ್ರಶಸ್ತಿ’ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ, ವೆಂಕಿ ರಾಮಕೃಷ್ಣನ್, ‘ಬುಕರ್ ಪ್ರಶಸ್ತಿ’ ಪುರಸ್ಕೃತರಾದ ಕಿರಣ್ ದೇಸಾಯಿ, ಲೇಖಕ ಉಪಮನ್ಯು ಚಟರ್ಜಿ, ಹಂಪನಾ, ಎಸ್‌.ಆರ್ ಹಿರೇಮಠ, ಗಾಯಕಿ ಹಾಗೂ ನಟಿ ಇಳಾ ಅರುಣ್, ಸಂಗೀತಗಾರ ಎಲ್ ಸುಬ್ರಮಣ್ಯಂ, ಪತ್ರಕರ್ತ ಅನುಪ್ರೀತಾ ದಾಸ್, ಬಚ್ಚಿ ಕರ್ಕಾರಿಯಾ, ರಾಜ್‌ದೀಪ್ ಸರ್ದೇಸಾಯಿ, ಲೇಖಕರಾದ ಚೇತನ್ ಭಗತ್, ವಿಕಾಸ್ ಸ್ವರೂಪ್, ರಾಮ್ ಮಾಧವ್, ರಾಮಚಂದ್ರ ಗುಹಾ, ಸುಧಾ ಮೂರ್ತಿ, ಅರುಣಾ ರಾಯ್ ಸೇರಿ ಹಲವರು ಉತ್ಸವದಲ್ಲಿ ಭಾಗವಹಿಸಿದ್ದಾರೆ. ಉತ್ಸವವು ಭಾನುವಾರವೂ ನಡೆಯಲಿದ್ದು, ಇನ್ನೂ ಹಲವರು ಭಾಗಿಯಾಗಲಿದ್ದಾರೆ.

ಸಾಹಿತ್ಯ ಉತ್ಸವ ಸಾಹಿತ್ಯಿಕ ಲೋಕದ ವೈವಿಧ್ಯವನ್ನು ಅನಾವರಣ ಮಾಡಲಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಒಂದೆಡೆ ಸೇರಿಸಲು ಈ ಉತ್ಸವ ಸಹಕಾರಿಯಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.

ನಾಳೆಯೂ ಕೂಡ ಮುಂದುವರೆಯುವ ಈ ಸಾಹಿತ್ಯ ಹಬ್ಬದಲ್ಲಿ  Lit Lawns, Waterfront, The Valley, Red Couch, New Book Alert ಎಂಬ 5 ವೇದಿಕೆಗಳಲ್ಲಿ ಬಿಂಬ ಬಿಂಬನ, ನನ್ನ ಪಾಡಿಗೆ ನಾನು, ಕನ್ನಡ ಪತ್ರಿಕೋದ್ಯಮ, ನುಡಿ, ನಾಡು, ನೆನಪು, ತುಳುನಾಡು, ಇಂದಿನ ರಾಜಕೀಯ, ಕಥೆ ಹೇಳುವುದು, ನ್ಯಾಯ ಕೇಳುವುದು, Kuvempu’s ಶ್ರೀ ರಾಮಾಯಣ ದರ್ಶನಂ ಸಾಹಿತ್ಯದ ವಿಚಾರಗಳ ಮೇಲೆ ಸಂವಾದ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿ ಓದಿದ್ದೀರಾ? ದೆಹಲಿ ಚಲೋ | ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯ ಪ್ರಯೋಗ

ಉತ್ಸವದಲ್ಲಿ ಈದಿನ.ಕಾಮ್ ಜತೆ ಮಾತನಾಡಿದ ಸಾಹಿತಿ ಹಂಪನಾ, “ಬೆಂಗಳೂರು ಸಾಹಿತ್ಯ ಉತ್ಸವ ಈ ಹಿಂದೆ ಕೊಠಡಿಯಲ್ಲೋ, ಸಭಾಂಗಣದಲ್ಲೋ ನಡಿಯುತ್ತಿತ್ತು. ಆದರೆ, ಈಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರ ಆವರಣದಲ್ಲಿ ನಡಿಯುತ್ತಿದೆ. ಲೌಕಿಕದ ದೃಷ್ಟಿಯಿಂದ ಕನ್ನಡಕ್ಕೆ ಒಂದು ರೀತಿಯಲ್ಲಿ ಇದು ಪ್ರತಿಷ್ಠೆ ಬಂದ ಹಾಗೇ, ಸಾಹಿತ್ಯಕ್ಕೆ ಒಂದು ದೊಡ್ಡ ಮಾನ್ಯತೆ ದೊರಕಿದ ಹಾಗೇ ಎಂದು ತಿಳಿದುಕೊಳ್ಳಬಹುದು. ಸಾಹಿತ್ಯದ ಉತ್ಸವ ಅರಮನೆಯಲ್ಲಿ ನಡೆದರೇ, ಶ್ರೇಷ್ಠ ಬಯಲಿನಲ್ಲಿ ನಡೆದರೇ, ಕನಿಷ್ಟ ಎಂಬುದಿಲ್ಲ. ಈ ಬಾರಿಯ ನಡೆಯುತ್ತಿರುವ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಾಹಿತ್ಯ ಓದುಗರಿಗೆ ಇದೊಂದು ಹಬ್ಬ” ಎಂದು ಹೇಳಿದರು.  

ವಿದ್ಯಾರ್ಥಿನಿ ಶ್ರವಂತಿ ಈದಿನ.ಕಾಮ್‌ ಜತೆಗೆ ಮಾತನಾಡಿ, “ ಸಾಹಿತ್ಯ ಉತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಇದು ಹೊಸ ಅನುಭವವಾಗಿದೆ. ಕನ್ನಡ ಸಂವಾದ ಮತ್ತು ಚರ್ಚೆಗಳು ಕಡಿಮೆ ನಿರಾಸೆಯಾಯಿತು. ಇದು ಸ್ವಲ್ಪ ಮಟ್ಟಿಗೆ ಬೇಜಾರನ್ನ ತರಿಸಿತ್ತು” ಎಂದು ತಿಳಿಸಿದರು.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X