ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯಾಮಲಿನ ಮನ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

“ಮಾಯಾಮಲಿನ ಮನ”

ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ?
ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯಬಲ್ಲಡೆ, ನಿನ್ನ ನೀ ತಿಳಿದು ನೋಡಾ.

ಪದಾರ್ಥ:
ಕಾಯದ = ದೇಹದ
ದಂದುಗ = ಚಿಂತೆ-ಭ್ರಾಂತಿ, ವ್ಯಥೆ-ವ್ಯಸನ
ಕಳೆಯಿಂದ = ಜೀವದಿಂದ
ನಿಜವು = ತನ್ನ ತಾನರಿದ ಅರಿವು

Advertisements

ವಚನಾರ್ಥ:

ಅರಿವು ಅಂದರೆ ಜಡ ದೇಹವು ತಾನಲ್ಲ, ಸದಾ ಚೈತನ್ಯದಾಯಕವಾದ ಜೀವಾತ್ಮನೇ ತಾನು ಎಂಬ ತಿಳಿವಳಿಕೆಯು ಸುಮ್ಮನೆ ತಾನೇ ತಾನಾಗಿ ಬರುವುದಿಲ್ಲ. ಅರಿವಿನ ನೆಲೆಯಲ್ಲಿ ನಿಲ್ಲಬೇಕಾದರೆ ಮೈ ಮನಸ್ಸುಗಳು ಸಜ್ಜಾಗಿರಬೇಕು. ಎಂತಹ ಮನಸ್ಸು? ಈ ಜೀವಜಗತ್ತು ಕ್ಷಣ ಕ್ಷಣಕ್ಕೂ ತಂದು ನಮ್ಮೆದುರು ಹರಡುವ ಮಾಯೆಯ ಜಾಲದಿಂದ ಮಲಿನಗೊಳ್ಳದ ಮನಸ್ಸಾಗಿರಬೇಕು. ಎಂತಹ ಮೈ? ದೇಹಕ್ಕೆ ಅಂಟಿದ ಬಾಧೆ, ಚಿಂತೆ, ವ್ಯಸನಗಳಿಂದ ಮುಕ್ತವಾಗಿರಬೇಕು. ಅಂತಹ ಮೈಮನಸ್ಸುಗಳು ಮೇಳಯಿಸಿದಲ್ಲಿ ನಿಜದ ಅರಿವು ಸಾಧ್ಯವಾಗುತ್ತದೆ. ತನ್ನ ತಾ ತಿಳಿದುನೋಡಲು ಮನಸ್ಸು ತೆರವಾಗುತ್ತದೆ. ಒಮ್ಮೆ ಒಬ್ಬ ಭಕ್ತನು ರಮಣಮಹರ್ಷಿಗಳಲ್ಲಿಗೆ ಬಂದ. ಸ್ವಾಮಿ, ನನಗೆ ದೇವರ ಬಗ್ಗೆ ತಿಳಿಸಿಕೊಡಿ ಅಂದ. ನಿನ್ನ ಬಗ್ಗೆ ನೀನು ತಿಳಿದುಕೊಂಡಿದ್ದೀಯ ಎಂದು ರಮಣರು ಕೇಳಿದರು. ಇಲ್ಲ ಅಂದ. ನಿನ್ನ ನೀ ತಿಳಿದುಕೊಂಡು ಬಾ, ಆಮೇಲೆ ದೇವರ ಬಗ್ಗೆ ತಿಳಿಸುತ್ತೇನೆ ಅಂದರು. ಇದೇ ಅಲ್ಲಮನ ವಚನದ ಇಂಗಿತ.

ಪದಪ್ರಯೋಗಾರ್ಥ:

ಮನಸ್ಸು ಮಾಯೆಗೊಳಗಾದರೆ ಮಲಿನವಾಗುತ್ತದೆ ಎಂಬುದರ ಕಾವ್ಯಮಯ ನಿರೂಪಣೆಯೇ ಮಾಯಾಮಲಿನಮನ. ಅಲ್ಲಮನೇ ತನ್ನ ವೈಯಕ್ತಿಕ ಬದುಕಿನಲ್ಲಿ ಮಾಯಾಂಗನೆ ಎಂಬ ಸುಂದರಿಯ ಪ್ರಣಯ ಪಾಶದಲ್ಲಿ ಸಿಲುಕಿ ಮಾಯೆಯಿಂದ ಮಲಿನಗೊಂಡ ಮನಸ್ಸಿನಿಂದ ಮುಕ್ತಿ ಹೊಂದಿ ತದನಂತರ ಅಧ್ಯಾತ್ಮ ಪಥವನ್ನು ತುಳಿದವ. ಅಲ್ಲಮನು ಮಾಯಾಮಲಿನ ಮನವನ್ನು ತನ್ನಲ್ಲಿ ಪೋಷಿಸಿಕೊಳ್ಳದೆ, ಮಾಯೆ ಮುಟ್ಟದ ಮೈಯನ್ನು ಮೈಗೂಡಿಸಿಕೊಂಡಿದ್ದರಿಂದಲೇ ಮಾಯಾಂಗನೆಯಿಂದ ಮುಕ್ತನಾದ ಅಲ್ಲಮಪ್ರಭುವಾಗಿ ಇಂದು ನಮಗೆ ಸಿಕ್ಕಿರುವುದು. ನಿನ್ನ ನೀ ತಿಳಿದು ನೋಡಲು, ತನ್ನ ತಾ ಅರಿದು ನೋಡಲು ಮಾಯಾಮಲಿನ ಮನದಿಂದ ವಿಮುಖನಾಗಬೇಕು ಎಂದು ಸಲಹೆ ಕೊಡುವಲ್ಲಿ ಅಲ್ಲಮ ಬಳಸಿದ ಕಾವ್ಯಗುಣವುಳ್ಳ ಪದಪುಂಜ “ಮಾಯಾಮಲಿನ ಮನ” ಅತ್ಯಪೂರ್ವವಾಗಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

3 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X