ಬಳ್ಳಾರಿ | ನಮ್ಮ ಚರಿತ್ರೆಯನ್ನು ನಾವು ನೆನಪಿಟ್ಟುಕೊಳ್ಳಬೇಕು: ಸಾಹಿತಿ ವಸುಂಧರಾ ಭೂಪತಿ

Date:

Advertisements

ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಈ ಚರಿತ್ರೆ. ನಮ್ಮ ಚರಿತ್ರೆಯನ್ನ ನಾವು ನೆನಪಿಟ್ಟುಕೊಳ್ಳಬೇಕು ಎಂದು ಸಾಹಿತಿ ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ಕಾವ್ಯಮನೆ ಪ್ರಕಾಶನದಿಂದ‌ ಪ್ರಕಟಗೊಂಡ ಅಬ್ದುಲ್ ಹೈ ಅವರ ತೋರಣಗಲ್ಲು ಚಾರಿತ್ರಿಕ ಅಧ್ಯಯನ ಕೃತಿಯನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತೋರಣಗಲ್ಲಿನ ಸಾಂಸ್ಕೃತಿಕ, ಬೌಗೊಳಿಕ, ಚಾರಿತ್ರಿಕ ಇತಿಹಾಸವನ್ನು, ಐತಿಹಾಸಿಕ ಘಟಕಗಳು, ಸಂಗತಿಗಳು ಸಮಗ್ರ ಚಿತ್ರಣಗಳೊಂದಿಗೆ ಓದುಗರ ಎದೆಯನ್ನು ತಟ್ಟುವಲ್ಲಿ ಅಧ್ಯಯನ ಕೃತಿಯು ಸೃಜನಶೀಲವಾಗಿದೆ. ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಚರಿತ್ರೆ. ನಮ್ಮ ಈ ನಾಡಿನ ಚರಿತ್ರೆಯನ್ನು ನೆನಪಿಸಿಕೊಳ್ಳಬೇಕು ಅಂತ ತೋರಣಗಲ್ಲಿನ ಚರಿತ್ರೆಯನ್ನು ಅಬ್ದುಲ್ ಹೈ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

Advertisements

ತೋರಣಗಲ್ಲ ಅಂದರೆ ಒಂದು ಕಾಲದಲ್ಲಿ ಒಂದು ಕಾಲದಲ್ಲಿ ‘ವಿಜಯನಗರ’ ಎಂದು ಬೆಂಗಳೂರಿನಂತ ದೂರದ ಊರಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ತೋರಣಗಲ್ಲ ಎಂದರೆ, ‘ಜಿಂದಾಲ್‌’ ಎಂದು ಗುರುತಿಸುವ ಮಟ್ಟಿಗೆ ಬಂದಿದೆ ವಿಜಯನಗರ ಇತಿಹಾಸ ಮರೆತು ಹೋಗುವಂತ ಸಂದರ್ಭ ಬಂದಿದೆ. ಇದು ಬೇಸರ ಸಂಗತಿ ಎಂದು ಸಾಹಿತಿ ವಸುಂಧರಾ ಭೂಪತಿ ಕಳವಳ ವ್ಯಕ್ತಪಡಿಸಿದರು.

WhatsApp Image 2024 12 14 at 4.32.37 PM

ಕೃತಿ ಕುರಿತು ಮಾತನಾಡಿದ ಎನ್.ಶಂಕರಪ್ಪ ತೋರಣಗಲ್, ನಮ್ಮ ಸಾಂಸ್ಕೃತಿಕ ನೆಲ, ಮಣ್ಣನ್ನು ನಾವು ಮರೆಯಬಾರದು. ತೋರಣಗಲ್ಲಿನ ಚಾರಿತ್ರಿಕ ಇತಿಹಾಸವನ್ನು ಶೇಖರಿಸಿ ಬರೆದಂತೆ ಈ ಪುಸ್ತಕವಿದೆ. ಬರಹಗಾರರು ಕೃತಿಕಾರರಿಗೆ ಇಲ್ಲಿ ಇನ್ನಷ್ಟೂ ಮಾಹಿತಿ ಸಂಗ್ರಹಿಸಿ ಬರೆದಿದ್ದರೆ ಒಳ್ಳೆಯದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತೋರಣಗಲ್ಲಿನ ಪರಂಪರೆ, ಇತಿಹಾಸ, ಸಾಧಕರು, ಕಾರ್ಖಾನೆಗಳಿಂದ ಆಗುವಂತಹ ಪರಿಸರ ದುರ್ವಸ್ಥೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನಷ್ಟು ಸಾಧಕರ ಮತ್ತು ಕುರಿತು ತೋರಣಗಲ್ಲಿನ ಪರಂಪರೆಗಾಗಿ ಜೀವ ಸವೆಸಿದವರ ಕುರಿತು ಬರೆಯಬೇಕಿತ್ತು ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಅಬ್ದುಲ್ ಹೈ ತೋರಣಗಲ್ಲ ನೂರ್ ಜಹಾನ್, ಸಿಕಂದರ್ ಅಲಿ, ಸ್ನೇಹಲತಾ, ರಮ್ಜಾನ್ ಕಿಲ್ಲೆ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X