ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಯನ್ನೇ ಜೀವಂತ ಸುಟ್ಟ ವಿಕೃತ ಪತಿ

Date:

Advertisements

ಲಿಂಗ ತಾರತಮ್ಯದ ವಿರುದ್ಧ ಹೋರಾಟಗಳು, ಕಾನೂನುಗಳು, ಜಾಗೃತಿ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದರೂ ಗಂಡು ಮೇಲು, ಹೆಣ್ಣು ಕೀಳೆಂಬ ಧೋರಣೆ ಇನ್ನೂ ಸಮಾಜದಲ್ಲಿ ಉಳಿದಿದೆ. ಪುರುಷಾಧಿಪತ್ಯ ತುಂಬಿ ತುಳುಕುತ್ತಿರುವ ಸಾಮಾಜದಲ್ಲಿ ಗಂಡು ಮಗು ಬೇಕೆಂಬ ಧೋರಣೆ ಪೋಷಕರಲ್ಲಿ ಹೆಚ್ಚುತ್ತಲೇ ಇದೆ. ಪುರುಷ ಅಹಂಕಾರದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ನಾಕಾ ದುಶ್ಕೃತ್ಯ ನಡೆದಿದೆ. ಕುಂಡ್ಲಿಕ್ ಉತ್ತಮ್ ಕಾಳೆ ಎಂಬಾತ ತನ್ನ ಪತ್ನಿ ಮೈನಾ ಅವರನ್ನು ಜೀವಂತವಾಗಿ ಸುಟ್ಟು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಳೆ ಮತ್ತು ಮೈನಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕಾಳೆ ಮತ್ತು ಆತನ ಪೋಷಕರು ಗಂಡು ಮಗು ಆಗಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಇತ್ತೀಚೆಗೆ, ಮೈನಾ ಅವರಿಗೆ 3ನೇ ಹೆರಿಗೆ ಆಗಿದ್ದು, ಹೆಣ್ಣು ಮಗು ಜನಿಸಿತ್ತು. ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ಮೈನಾ ಜೊತೆ ಕಾಳೆ ಪದೇ-ಪದೇ ಜಗಳವಾಡುತ್ತಿದ್ದ ಎಂದು ವರದಿಯಾಗಿದೆ.

Advertisements

ಇತ್ತೀಚೆಗೆ, ಮತ್ತೆ ಮಗು ವಿಚಾರಕ್ಕೆ ಜಗಳವಾಗಿದ್ದು, ಮೈನಾ ಅವರ ಮೇಲೆ ಕಾಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ನೆರೆಹೊರೆಯವರು ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಗಂಗಾಖೇಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಾಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ನೆನಪಿನಲ್ಲಿಡಿ: ಮಹಿಳೆಯರಲ್ಲಿ ‘X’ ಕ್ರೋಮೋಸೋಮ್‌ ಮಾತ್ರವೇ ಇರುತ್ತದೆ. ಪುರುಷನಲ್ಲಿ ‘X’ ಮತ್ತು ‘Y’ ಕ್ರೋಮೋಸೋಮ್‌ ಎರಡೂ ಇರತ್ತವೆ. ಲೈಂಗಿಕತೆಯ ಸಮಯದಲ್ಲಿ ಮಹಿಳೆಯಿಂದ ‘X’ ಕ್ರೋಮೋಸೋಮ್‌ ಬಿಡುಗಡೆಯಾಗುತ್ತದೆ. ಪುರುಷನಿಂದ ‘X’ ಮತ್ತು ‘Y’ ಕ್ರೋಮೋಸೋಮ್‌ಗಳು ಬಿಡುಗಡೆಯಾಗುತ್ತದೆ. ಈ ವೇಳೆ, ಮಹಿಳೆಯ ‘X’ ಕ್ರೋಮೋಸೋಮ್‌ ಜೊತೆಗೆ, ಪುರುಷನಲ್ಲಿನ ‘X’ ಕ್ರೋಮೋಸೋಮ್‌ ಸೇರಿದರೆ ‘XX’ ಜೀನೋಟೈಪ್‌ನ ರಚನೆಯಾಗಿ ಹೆಣ್ಣು ಮಗು ಜನಿಸುತ್ತದೆ. ಮಹಿಳೆಯ ‘X’ ಕ್ರೋಮೋಸೋಮ್‌ ಜೊತೆಗೆ, ಪುರುಷನಲ್ಲಿನ ‘Y’ ಕ್ರೋಮೋಸೋಮ್‌ ಸೇರಿದರೆ ‘XY’ ಜೀನೋಟೈಪ್‌ ರಚನೆಯಾಗಿ ಗಂಡು ಮಗು ಜನಿಸುತ್ತದೆ. ಹೀಗಾಗಿ, ಹೆಣ್ಣು ಅಥವಾ ಗಂಡು ಮಗು ಹುಟ್ಟುವುದರಲ್ಲಿ ಪುರುಷನ ಪಾತ್ರವಿದೆಯೇ ಹೊರತು, ಮಹಿಳೆಯದ್ದಲ್ಲ. ತಾವು ಇಚ್ಚಿಸಿದ ಮಗು ಜನಿಸದೇ ಇರುವುದಕ್ಕೆ ಪುರುಷನೇ ಕಾರಣ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X