ಪಿತೃಪ್ರಭುತ್ವಕ್ಕೆ ಸೆಡ್ಡು: ತಾಯಿಗೆ 2ನೇ ಮದುವೆ ಮಾಡಿಸಿದ ಪಾಕಿಸ್ತಾನಿ ಬಾಲಕ

Date:

Advertisements

ಪಾಕಿಸ್ತಾನದ ಹುಡುಗನೊಬ್ಬ ತನ್ನ ದೃಢ ಮತ್ತು ನಿಸ್ವಾರ್ಥ ನಿರ್ಧಾರಕ್ಕಾಗಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ಆತ ತನ್ನ ಒಬ್ಬಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿಸಿದ್ದಾನೆ. ತನ್ನ ತಾಯಿ ಮತ್ತೆ ಸಾಂಗತ್ಯ ಜೀವನ ಪಡೆದುಕೊಳ್ಳುವಂತೆ ಮಾಡಿದ್ದಾನೆ.

ಇದು ಭಾರತ ಮತ್ತು ಪಾಕಿಸ್ತಾನದಂತಹ ಪಿತೃಪ್ರಧಾನ/ಪಿತೃಪ್ರಭುತ್ವ ಸಮಾಜದಲ್ಲಿ ಗಂಭೀರ ನಡೆಯಾಗಿದೆ. ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾದರೂ ಸಮಸ್ಯೆಯಿಲ್ಲ. ಆದರೆ, ಹೆಣ್ಣು ಮಾತ್ರ ಒಬ್ಬನನ್ನು ಮಾತ್ರವೇ ಮದುವೆಯಾಗಬೇಕು. ಪತಿ ಸತ್ತ ನಂತರವೂ ಆತನ ನೆನಪಿನಲ್ಲೇ ಜೀವನ ದೂಡಬೇಕು. ಮತ್ತೊಂದು ಮದುವೆಯಾಗಬಾರದು ಎಂಬಂತಹ ಅಲಿಖಿತ ನಿಯಮವನ್ನು ಪಿತೃಪ್ರಭುತ್ವದ ವ್ಯವಸ್ಥೆಯಲ್ಲಿ ಹೇರಲಾಗಿದೆ. ಈ ವ್ಯವಸ್ಥೆಯಲ್ಲಿ ಮರುವಿವಾಹವಾಗಲು ಮುಂದಾಗುವ ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರನ್ನು ದೂಷಿಸಲಾಗುತ್ತದೆ. ಕಳಂಕಿತರಂತೆ ನೋಡಲಾಗುತ್ತದೆ. ಇಂತಹ ಧೋರಣೆಯ ವಿರುದ್ಧ ಬಾಲಕ ಸೆಡ್ಡುಹೊಡೆದು ನಿಂತಿದ್ದು, ಹಲವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬಾಲಕನ ನಿರ್ಧಾರವನ್ನು ನೆಟ್ಟಿಗರು ಅತ್ಯುತ್ತಮ ನಡೆ ಎಂದು ಶ್ಲಾಘಿಸಿದ್ದಾರೆ.

ಆ ಚಿಕ್ಕ ಬಾಲಕ ಸಮಾಜದಲ್ಲಿನ ಪಿತೃಪ್ರಭುತ್ವ ಧೋರಣೆಯನ್ನು ಧಿಕ್ಕರಿಸಿದ್ದಾನೆ. ಸಮಾಜಿನ ಅಲಿಖಿತ ನಿಯಮಗಳಿಗೆ ಸವಾಲು ಹಾಕಿದ್ದಾನೆ. ತಾಯಿ ಏಕಾಂಗಿ ಜೀವನ ದೂಡಬಾರದು, ಆಕೆಯೂ 2ನೇ ಮದುವೆಯಾಗಲು ಸ್ವತಂತ್ರಳೆಂದು ಆಕೆಗೆ ವಿವಾಹ ಮಾಡಿಸಿದ್ದಾನೆ.

Advertisements

ಬಾಲಕ ತನ್ನ ತಾಯಿಗೆ 2ನೇ ಮದುವೆ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ತಾಯಿಗೆ ಮದುವೆ ಮಾಡಿಸಿದ ಹುಡುಗನನ್ನು ಅಬ್ಲುಲ್ ಅಹದ್ ಎಂದು ಗುರುತಿಸಲಾಗಿದೆ. ಬಾಲಕನ ನಿರ್ಧಾರವನ್ನು ಶ್ಲಾಘಿಸಿದ ನೆಟ್ಟಿಗರು, “ನೀವು ಆಕೆಗಾಗಿ ಮಾಡಬಹುದಾದ ಅತ್ಯುತ್ತಮ ಕೆಲಸ” ಎಂದು ಕಾಮೆಂಟ್ ಮಾಡಿದ್ದಾರೆ.

“ಈ ವಯಸ್ಸಿನಲ್ಲಿ ಆತನ ಬಹಳ ಸಂವೇದನಾಶೀಲ ಮತ್ತು ಭಾವನಾತ್ಮಕವಾಗಿ ಸವಾಲಿನ ನಿರ್ಧಾರ” ಎಂದು ಕೆಲವರು ಹೇಳಿದ್ದಾರೆ. “ಇದು ಕಠಿಣ ನಿರ್ಧಾರ, ಆದರೆ ನೀವು ಅದನ್ನು ಉತ್ತಮವಾಗಿ ಮಾಡಿದ್ದೀರಿ. ನಿಮ್ಮ ತಾಯಿಯ ಭವಿಷ್ಯ ಮತ್ತು ಜೀವನದ ಬಗ್ಗೆ ಯೋಜಿಸುವ ನೀವು ಒಬ್ಬ ಒಳ್ಳೆಯ ಮಗ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

Download Eedina App Android / iOS

X