ಗುಬ್ಬಿ | ಕಾರಿನ ಗ್ಲಾಸ್ ಒಡೆದು 15 ಲಕ್ಷ ದೋಚಿದ ಖದೀಮರು..!!

Date:

Advertisements

ಕೆಲಸದ ನಿಮಿತ್ತ ಗುಬ್ಬಿ ಎಪಿಎಂಸಿ ಕಚೇರಿ ಒಳ ತೆರಳಿ ಐದು ನಿಮಿಷ ಮರಳಿ ವಾಪಸ್ ಕಾರಿನ ಬಳಿಗೆ ಬರುವ ವೇಳೆಗೆ ಕಾರಿನ ಗ್ಲಾಸ್ ಒಡೆದು ಚೀಲದಲ್ಲಿದ್ದ ಹದಿನೈದು ಲಕ್ಷ ರೂ ಕಳ್ಳತನ ಆಗಿರುವ ಅಚ್ಚರಿಯ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ನಿಟ್ಟೂರು ಎಸ್ ಬಿಐ ಬ್ಯಾಂಕ್ ನಿಂದ ಕಡಬ ಹೋಬಳಿ ಡಿ.ರಾಂಪುರ ಗ್ರಾಮದ ವರ್ತಕ ಶಿವರಾಜ್ ಹದಿನೈದು ಲಕ್ಷ ರೂಗಳನ್ನು ಪಡೆದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗುಬ್ಬಿ ಪಟ್ಟಣದ ಎಪಿಎಂಸಿ ಕಚೇರಿಗೆ ಕಾರ್ಯನಿಮಿತ್ತ ಆಗಮಿಸಿದ್ದರು. ಕಚೇರಿ ಒಳಗೆ ತೆರಳಿ ಐದೇ ನಿಮಿಷದಲ್ಲಿ ಹೊರ ಬಂದು ನೋಡಿದಾಗ ಕಾರಿನ ಡ್ರೈವರ್ ಭಾಗದ ಕಿಟಿಕಿ ಗಾಜು ಒಡೆದು ಪುಡಿಯಾಗಿತ್ತು. ಬಿಸಿಲಿಗೆ ಒಡೆದಿರಬಹುದು ಎಂದು ತಿಳಿದ ಕೊಬ್ಬರಿ ವರ್ತಕ ಶಿವರಾಜ್ ಗೆ ಅಚ್ಚರಿ ಆತಂಕ ಒಟ್ಟಿಗೆ ಎದುರಾಯಿತು. ಮುಂದಿನ ಸೀಟ್ ನಲ್ಲಿಟ್ಟಿದ್ದ ಹದಿನೈದು ಲಕ್ಷ ರೂಗಳ ಕೈ ಚೀಲ ಮಂಗಮಾಯ ಆಗಿತ್ತು.

ಕೂಡಲೇ ಗುಬ್ಬಿ ಪೊಲೀಸ್ ಠಾಣೆಗೆ ತೆರಳಿದ ನಿಟ್ಟೂರು ಭವಾನಿ ಟ್ರೇಡರ್ಸ್ ಮಾಲೀಕ ಮಂಡಿ ವರ್ತಕ ಶಿವರಾಜ್ ದೂರು ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Advertisements

ರೈತರಿಗೆ ಅನುಕೂಲ ಮಾಡಬೇಕಾದ ಎಪಿಎಂಸಿ ಯಾರ್ಡ್ ನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿ ಯಾವುದೇ ದುರ್ಘಟನೆ ನಡೆದರೂ ರೈತರಿಗೆ ರಕ್ಷಣೆ ನೀಡಲು ಅಳವಡಿಸಿದ್ದ ಸಿಸಿ ಕ್ಯಾಮರಾ ಕಾರ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರ ಓಡಾಟ ಇರುವ ಈ ಸರ್ಕಾರಿ ಕಚೇರಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಕೆಟ್ಟು ನಿಂತಿರುವ ಕಾರಣ ಇಂದಿನ ಪ್ರಕರಣದಲ್ಲಿ ವರ್ತಕರ ಹಣ ಲೂಟಿಯಾಗಿದೆ. ಪೊಲೀಸರಿಗೂ ಈ ಘಟನೆ ತನಿಖೆಗೆ ಕಷ್ಟವಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಬೇಸರ ವ್ಯಕ್ತಪಡಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X