ಬೀದರ್‌ | ಸಮ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಅಗತ್ಯ : ನಟ ಚೇತನ್

Date:

Advertisements

ಸಂವಿಧಾನದ ಆಶಯದಂತೆ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಅಭಿವೃದ್ಧಿ ಹೀಗೆ ಎಲ್ಲವೂ ಸಮಾನವಾಗಿ ಇರಬೇಕೆಂಬ ಕನಸಿನೊಂದಿಗೆ ಕಳೆದ 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಪರ್ಯಾಯ ರಾಜಕಾರಣದಿಂದ ಸಮ ಸಮಾಜ ಕಟ್ಟುವ ಗುರಿ ನನ್ನದಾಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.

ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ ‘ಸಮಾನತಾವಾದಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ʼನಾವು ಸಮ ಸಮಾಜ ನಿರ್ಮಾಣಕ್ಕಾಗಿ ಪರ್ಯಾಯ ರಾಜಕಾರಣ‌ದ ಸಸಿ ನೆಡುತ್ತಿದ್ದು, ಸತ್ಯ , ಪ್ರಾಮಾಣಿಕ, ಸೇವಾ ಮನೋಭಾವದೊಂದಿಗೆ ರಾಜಕೀಯ ಚಳವಳಿಯ ಪ್ರಯತ್ನಕ್ಕೆ ಮುಂದಾಗಿದ್ದು,‌ ಇದು ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಗೆ ಮುಟ್ಟಬಹುದು ಎಂಬ ಸದಾಶಯ ನಮ್ಮದಾಗಿದೆ. ಅವ್ಯವಸ್ಥೆ, ಅನ್ಯಾಯ ವಿರುದ್ಧ ದನಿಯೆತ್ತುವ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆʼ ಎಂದು ತಿಳಿಸಿದರು.

Advertisements

ʼಡಾ.ಅಂಬೇಡ್ಕರ್‌, ಪೆರಿಯಾರ್‌ ಹಾಗೂ ಕಾನ್ಸಿರಾಮ್‌ ಬಿಟ್ಟರೆ ಸಮಾನತೆ ಸಮಾಜ ಕಟ್ಟಲು ಯಾರೂ ಬರಲಿಲ್ಲ. ಇಂದಿನ ರಾಜಕಾರಣಿಗಳು ರಸ್ತೆ, ಕಟ್ಟಡಗಳು ನಿರ್ಮಿಸುತ್ತಾರೆ, ಭ್ರಷ್ಟಾಚಾರ ಸೇರಿದಂತೆ ಎಲ್ಲವೂ ಯಥಾಸ್ಥಿತಿ ಕಾಪಾಡಿಕೊಂಡು ನಾನು ಮುಖ್ಯಮಂತ್ರಿ ಆಗಬೇಕೆಂದು ಬರ್ತಾರೆ, ಹೊರತು ಸಮ ಸಮಾಜ ಕಟ್ಟಲು ಬಂದಿರುವುದು ನೋಡಲಿಲ್ಲʼ ಎಂದರು.

ʼಪರ್ಯಾಯ ರಾಜಕೀಯದಿಂದ ಸಮ ಸಮಾಜ ಕಟ್ಟಲು ಸಾಧ್ಯ. ಒಂದು ವರ್ಗ, ಜಾತಿ ಧರ್ಮಕ್ಕೆ ಸೀಮಿತ ಆಗದೇ ಇದು ಕರ್ನಾಟಕದ ಸಮ ಸಮಾಜವಾದದ ಪಕ್ಷವಾಗಿದ್ದು, ಮಾದರಿ ಕರ್ನಾಟಕ ರೂಪಿಸುವ ಉದ್ದೇಶದಿಂದ ರಾಜ್ಯದ 25ಕ್ಕೂ ಹೆಚ್ಚಿನ ಮತಕ್ಷೇತ್ರದಲ್ಲಿ ಜನಪರ ಸಂಘಟನೆಗಳ ಪ್ರಮುಖರೊಂದಿಗೆ ಕೈಜೋಡಿಸಿ ಸಿದ್ದತೆಗಳನ್ನು ಮಾಡುತ್ತಿದ್ದೇವೆ. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಇಲ್ಲ. ಪಕ್ಷದ ಸಿದ್ಧಾಂತ ಮುನ್ನಡೆಸುವ ಜವಾಬ್ದಾರಿ ಮಾತ್ರ ನನ್ನದು. ಅಧಿಕಾರಿ ಬೇರೆಯವರೇ ನಡೆಸಲಿ’ ಎಂದು ಹೇಳಿದರು.

ʼಅಸಮಾನತೆಯ ಪಕ್ಷಗಳು ಅಧಿಕಾರ ಪಡೆದುಕೊಳ್ಳುವ ಗುರಿಯಿಂದ ಪ್ರಬಲ ಜಾತಿಗಳೊಂದಿ ಕೈಜೋಡಿಸಿ ಓಲೈಸುತ್ತಿವೆ. ಆದರೆ ಅನ್ಯಾಯಕ್ಕೊಳಗಾದ ದಲಿತ, ಒಬಿಸಿ, ಆದಿವಾಸಿ ಹಾಗೂ ಬಹುಜನರಿಗೆ ಆಗಿರುವ ನ್ಯಾಯ ಸರಿಪಡಿಸುವ ಆಲೋಚನೆ ಇಂದಿನ ಪಕ್ಷಗಳಿಗೆ ಇಲ್ಲ.‌ ಅಧಿಕಾರ ಹಿಡಿಯಬೇಕಾದರೆ ಏನೆಲ್ಲಾ ಮಾಡುತ್ತಾರೆ. ಅಧಿಕಾರ ಸಿಕ್ಕನಂತರ ಏನು ಮಾಡಬೇಕೆಂಬ ಆಲೋಚನೆ ಮರೆಯುತ್ತಾರೆ.‌ ಹೀಗಾಗಿ ರಾಜ್ಯಕ್ಕೆ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆದರ್ಶ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್‌ ತಳಿ ಎತ್ತು

ಸಂವಾದದಲ್ಲಿ ಸಂಯೋಜಕರಾದ ಸುಭಾಷ ಲಾಧಾ, ರಾಹುಲ್ ಖಂದಾರೆ, ಸುಧಾಕರ್ ಕೊಳ್ಳೂರ್, ಗಣಪತಿ ವಾಸುದೇವ, ಶಿವು ಕಾಂಬಳೆ, ರಹೀಂ ಸಾಬ್ ಸೇರಿದಂತೆ ಪ್ರಮುಖರಾದ ನಂದಾದೀಪ ಬೋರಾಳೆ, ಡಾ.ಮನ್ಮಥಪ್ಪ ಡೋಳೆ, ಕಪೀಲ್ ಗೋಡಬೋಲೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X