ಭತ್ತ ನಾಟಿ ಮಾಡಿ ವಾಪಸ್ ತೆರಳುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ, ಓರ್ವ ಮಹಿಳೆ ಮೃತಪಟ್ಟಿದ್ದು, 7 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಹೊರವಲಯದ ಬಂಡೆಮ್ಮಳ ಹಳ್ಳದ ಹತ್ತಿರ ನಡೆದಿದೆ.
ಗೌರಮ್ಮ ಬಳಗಾನೂರು(40) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೌನಮ್ಮ, ಪಾರ್ವತಮ್ಮ, ಬಸವರಾಜ್ ದೇಸಾಯಿ ಗಂಭೀರ ಗಾಯಗೊಂಡಿದ್ದ, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಸುದೆದಿ ಓದಿದ್ದೀರಾ? ರಾಯಚೂರು | ಟೈರ್ ಸ್ಪೋಟದಿಂದ ಕ್ರೂಸರ್ ಪಲ್ಟಿ : ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರ ಸಾವು
ಟ್ರ್ಯಾಕ್ಟರ್ನಲ್ಲಿ 16 ಮಂದಿ ಕಾರ್ಮಿಕರು ಇದ್ದರು ಎನ್ನಲಾಗಿದೆ. ಭತ್ತ ನಾಟಿ ಮಾಡಲು ಹೋಗಿದ್ದ ಕಾರ್ಮಿಕರು ಸಂಜೆ ಮನೆಗೆ ಮರಳುವಾಗ 7ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎಂದು ಗ್ರಾಮದ ನಿವಾಸಿಯೊಬ್ಬರು ಮಾಹಿತಿ ನೀಡಿದರು.
ಸಿರವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.