ಮೈಸೂರು | ರೈಲ್ವೆ ನಿಲ್ದಾಣದಲ್ಲಿ 54ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಿದ ಆರ್‌ಪಿಎಫ್‌

Date:

Advertisements

ಮೈಸೂರು ನಗರದ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ರೈಲು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಮಾಡುವುದಷ್ಟೇ ಅಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಾಸ್ಪದವಾಗಿ ಅಲೆದಾಡುವ ನಿರ್ಗತಿಕ ಮಕ್ಕಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಆರ್‌ಪಿಎಫ್‌ ಮೈಸೂರು ರೈಲ್ವೆ ನಿಲ್ದಾಣದಿಂದ 54ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದೆ.

ಅನೇಕ ಮಕ್ಕಳು ರೈಲು ನಿಲ್ದಾಣಗಳಲ್ಲಿ ಆಶ್ರಯ ಹುಡುಕುತ್ತ. ಅಲ್ಲಿಯೇ ಉಳಿಯುತ್ತಾರೆ. ಅಲ್ಲದೆ ಅವರು ವಿವಿಧ ಅಪಾಯಗಳಿಗೆ ಗುರಿಯಾಗುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಂತಹ ಮಕ್ಕಳನ್ನು ಗುರುತಿಸಿ ಅವರನ್ನು ರಕ್ಷಿಸಲು ಆರ್‌ಪಿಎಫ್‌ ರೈಲ್ವೆ ಸಂರಕ್ಷಣಾ ಪಡೆ ಎಂಬ ವಿಶೇಷ ಯೋಜನೆಯನ್ನು ಸ್ಥಾಪಿಸಿತು. ಈ ಮೂಲಕ ಮಕ್ಕಳನ್ನು ರಕ್ಷಿಸಿದ ಬಳಿಕ ಅವರನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗುತ್ತದೆ. ಹೆಚ್ಚಿನ ಆರೈಕೆ ಮತ್ತು ಪುನರ್ವಸತಿಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗುತ್ತದೆ.

ಮೈಸೂರು ರೈಲು ನಿಲ್ದಾಣ 2
ಮೈಸೂರು ರೈಲು ನಿಲ್ದಾಣ

“ನಮ್ಮ ಜಾಗೃತ ಸಿಬ್ಬಂದಿ ರೈಲ್ವೆ ನಿಲ್ದಾಣವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಮಕ್ಕಳು ಅನುಮಾನಾಸ್ಪದವಾಗಿ ವರ್ತಿಸುವುದು ಕಂಡುಬಂದರೆ ಅವರೊಂದಿಗೆ ತೊಡಗಿ ವಿಚಾರಣೆ ಮಾಡುತ್ತಾರೆ. ಸಂಭಾಷಣೆಯ ಮೂಲಕ, ಮಕ್ಕಳು ತಮ್ಮ ಮನೆಗಳನ್ನು ಅಥವಾ ವಸತಿ ಶಾಲೆಗಳನ್ನು ತೊರೆದಿದ್ದಾರೆಯೇ ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ಆಹಾರ, ವಿಶ್ರಾಂತಿ, ವೈದ್ಯಕೀಯ ಆರೈಕೆ ಮತ್ತು ಸಮಾಲೋಚನೆಯಂತಹ ಅಗತ್ಯ ಆರೈಕೆಯನ್ನು ಒದಗಿಸಿದ ನಂತರ, ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುತ್ತೇವೆ. ಇದರಿಂದ ಮಕ್ಕಳು ಮತ್ತೆ ತಮ್ಮ ಕುಟುಂಬಗಳೊಂದಿಗೆ ಒಂದಾಗಲು ಅನುಕೂಲವಾಗುತ್ತದೆ” ಎಂದು ಮೈಸೂರಿನ ಆರ್‌ಪಿಎಫ್‌ನ ಪೋಸ್ಟ್ ಕಮಾಂಡರ್ ಕೆ ವಿ ವೆಂಕಟೇಶ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಉಡುಪಿ | ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ, ಯುವಕ‌ ಸಾವು

“ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬೀಳುವ ಮಕ್ಕಳ ಹಿಂದಿನ ಕಾರಣಗಳು ಬೇರೆಬೇರೆಯಾಗಿರುತ್ತವೆ. ಕೆಲವರು ತಮ್ಮ ಪೋಷಕರೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಬಂದಿದ್ದರೆ, ಇತರರು ಶೈಕ್ಷಣಿಕ ಒತ್ತಡ ಅಥವಾ ವೈಯಕ್ತಿಕ ತೊಂದರೆಗಳಿಂದಾಗಿ ತಮ್ಮ ಹಾಸ್ಟೆಲ್ ಅಥವಾ ಶಾಲೆಗಳನ್ನು ತೊರೆದು ಬಂದಿದ್ದರು. ಕಾರಣವನ್ನು ಲೆಕ್ಕಿಸದೆ, ಒಮ್ಮೆ ರಕ್ಷಿಸಿದ ನಂತರ, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುತ್ತದೆ. ಸಮಿತಿಯು ಅವರನ್ನು ಅವರ ಕುಟುಂಬಗಳಿಗೆ ಕಳುಹಿಸಿಲು ಅಥವಾ ಅವರಿಗೆ ಅಗತ್ಯವಾದ ಪುನರ್ವಸತಿ ಒದಗಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X