ತುಂಬಾ ಕಡುಬಡತನದಲ್ಲಿ ಜನಿಸಿದ್ದ ಮಾತೆ ರಮಾಬಾಯಿ ಅವರ ಜೀವನ ನಮಗೆಲ್ಲ ಸ್ಪೂರ್ತಿದಾಯಕವಾದದ್ದು, ಸಾವಿರಾರು ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾರೆ ಎಂದು ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ದೇವಿಂದ್ರ ಬಣಮಗಿ ಹೇಳಿದರು.
ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಾಮದ ಸದಸ್ಯರೆಲ್ಲರೂ ಸೇರಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.
“ಅಂಬೇಡ್ಕರ್ ಅವರ ಶಿಕ್ಷಣ, ಸಾಧನೆ, ಬೆಳವಣಿಗೆ ದಾರಿಯಲ್ಲಿ ನಡೆದ ಅವರ ಪಾತ್ರದಷ್ಟೇ ರಮಾಬಾಯಿ ಅಂಬೇಡ್ಕರ್ ಕೂಡಾ ಮಹತ್ವವಾಗಿದ್ದಾರೆ. ಜೀವನದುದ್ದಕ್ಕೂ ಅಂಬೇಡ್ಕರ್ ಅವರಿಗೆ ರಮಾತಾಯಿ ಸಹಕರಿಸಿದ ರೀತಿ ತುಂಬಾ ದೊಡ್ಡದು. ಅವರು ನಡೆದುಬಂದ ಹಾದಿ ಇಂದಿಗೂ ಸಾವಿರಾರು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕುದರಿಮೋತಿಯಲ್ಲಿ ಕುಷ್ಠರೋಗ ಜಾಗೃತಿ ಅಭಿಯಾನ
ಈ ಸಂದರ್ಭದಲ್ಲಿ ಪರಶುರಾಮ ನಡಗಟ್ಟಿ ಸದಸ್ಯರು, ಸಾಗರ ನೆಲೋಗಿ ಡಾ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷರು, ರಾಜು ಅಂಕಲಗಿ ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟನ್ ಪ್ರಧಾನ ಕಾರ್ಯದರ್ಶಿ, ದೇವಿಂದ್ರ ಜಳಕಿ ಸದಸ್ಯರು, ಭೂತಾಳಿ ನಡಗಟ್ಟಿ ಡಾ, ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟನ್ ಸಲಹೆಗಾರರು ಹಾಗೂ ಅಭಿಷೇಕ ಜಳಕಿ, ಸಿದ್ದಪ್ಪ ಜಳಕಿ ಕಾರ್ಯಕ್ರಮದಲ್ಲಿ ಇದ್ದರು.