ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸದಸ್ಯರ ನೇಮಕ ಹೆಸರಿಗಷ್ಟೆಯೇ?!

Date:

Advertisements

ಕಳೆದ ಬಾರಿಯ 15ನೇ ಚಲನಚಿತ್ರೋತ್ಸವ ಸದಸ್ಯರುಗಳಿಲ್ಲದೇ ಆಗಿತ್ತು. ಈ ಬಾರಿ 16ನೇ ಚಿತ್ರೋತ್ಸವ ಆರಂಭಕ್ಕೂ ಮೊದಲು ಸದಸ್ಯರ ನೇಮಕವಾಗಿದೆ. ಆದರೂ ಅವರನ್ನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಅಧ್ಯಕ್ಷರು ಏಕೆ ಆಸಕ್ತಿ ವಹಿಸುತ್ತಿಲ್ಲ?

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ರಾಜ್ಯ ಸರ್ಕಾರ ಏಳು ಮಂದಿ ಸದಸ್ಯರ ನೇಮಕ ಮಾಡಿದೆ. ಆದೇಶ ಹೊರಡಿಸಿ ನಾಲ್ಕು ದಿನಗಳು ಕಳೆದರೂ ಅವರಿಗೆ ಇನ್ನೂ ಅಧಿಕಾರ ಕೊಟ್ಟಿಲ್ಲ ಏಕೆ ಎನ್ನುವುದು ಪ್ರಶ್ನೆಯಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ಅಧೀನದಲ್ಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಾರ್ತಾ ಇಲಾಖೆಯ ಉಸ್ತುವಾರಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಚಿತ್ರರಂಗವನ್ನು ಬಲ್ಲ ಜೊತೆಗೆ ಅಕಾಡೆಮಿಯ ಕ್ರಿಯಾತ್ಮಕತೆಗೆ ಕೆಲಸ ಮಾಡುವ ಶಕ್ತಿ ಇರುವ ಸದಸ್ಯರ ನೇಮಕವೂ ಆಗಿದೆ.

ಪತ್ರಕರ್ತರಾದ ಸಾವಿತ್ರಿ ಮಜುಂದಾರ್, ಚಿದಾನಂದ ಪಟೇಲ್, ದೇಶಾದ್ರಿ ಹೊಸ್ಮನೆ, ಸಿನೆಮಾ ಕಲಾವಿದೆ ನಿಖಿತಾ ಸ್ವಾಮಿ, ಸಿನೆ ಪ್ರಚಾರಕ ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್, ಸಿನೆಮಾ ತಂತ್ರಜ್ಞ ಐವಾನ್ ಡಿಸಿಲ್ವಾ ಅವರ ನೇಮಕಾತಿ ಆದೇಶ ಫೆಬ್ರವರಿ 15, 2025ರಂದೇ ಸಚಿವಾಲಯದಿಂದ ಆಗಿದೆ. ಆ ದಿನವೇ ಮಾಧ್ಯಮಗಳಲ್ಲಿ ಪ್ರಕಟಣೆಯೂ ಆಗಿದೆ.

ರಾಜ್ಯ ಸರ್ಕಾರವೇ ನಡೆಸುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1, 2025ರಿಂದ ಆರಂಭವಾಗುತ್ತಿದೆ. ದಿನಗಣನೆ ಅಲ್ಲ ಕ್ಷಣಗಣನೆ ಆರಂಭವಾಗಿದೆ. ಅಕಾಡೆಮಿಯ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಇಂಥ ಹೊತ್ತಿನಲ್ಲಿ ನೇಮಕ ಆದವರನ್ನು ತುರ್ತಾಗಿ ಕರೆಸಿಕೊಂಡು ಕೆಲಸದ ಹಂಚಿಕೆಗಳನ್ನು ಮಾಡಬೇಕಿತ್ತು.

film academy

ಈ ಕಾರ್ಯ ಮಾಡುವ ಜವಾಬ್ದಾರಿ ವಾರ್ತಾ ಇಲಾಖೆಯ ಆಯುಕ್ತರು ಮತ್ತು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರ ಮೇಲಿದೆ. ಆದರೂ ಅವರು ಸದಸ್ಯರನ್ನು ಅಕಾಡೆಮಿ ಕಚೇರಿಗೆ ಕರೆಸಿಕೊಂಡು ಅಧಿಕಾರ ನೀಡುವ ಪ್ರಕ್ರಿಯೆ ಆರಂಭಿಸಿಲ್ಲ
ಸರ್ಕಾರದ ನೇಮಕಾತಿ ಆದರೂ ಅಕಾಡೆಮಿ ಕಚೇರಿಗೆ ಕರೆಸಿಕೊಂಡು ಸಂಬಂಧಿಸಿದ ದಾಖಲಾತಿ ಪುಸ್ತಕಗಳಲ್ಲಿ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ. ಸದಸ್ಯರು ಅಧಿಕಾರ ವಹಿಸಿಕೊಂಡ ದಿನಾಂಕವನ್ನು ನಮೂದು ಮಾಡಿಕೊಳ್ಳಬೇಕಾಗುತ್ತದೆ. ಅಕಾಡೆಮಿಯ ಕೆಲಸ ಕಾರ್ಯಗಳ ಬಗ್ಗೆ ಸದಸ್ಯರಿಗೆ ಗೊತ್ತಿದ್ದರೂ ಔಪಚಾರಿಕವಾಗಿ ವಿವರಿಸಬೇಕಾಗುತ್ತದೆ. ಫಿಲ್ಮ್ ಫೆಸ್ಟಿವಲ್ ಕೆಲಸಗಳ ಹೊರೆಯೇ ಇರುವುದರಿಂದ ತಕ್ಷಣವೇ ಇದರ ಬೇರೆ ಬೇರೆ ಕೆಲಸಗಳ ಉಸ್ತುವಾರಿಯನ್ನು ಸದಸ್ಯರಿಗೆ ಹಂಚಿಕೆ ಮಾಡಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ ಎಂಬುದು ಸದಸ್ಯರ ನೇಮಕ ನಾಮ್ ಕಾ ವಾಸ್ತೆಯೇ ಎಂದು ಪ್ರಶ್ನಿಸುವಂತೆ ಮಾಡಿದೆ.

Advertisements

ಇದನ್ನೂ ಓದಿ ಕರ್ನಾಟಕ ಫಿಲ್ಮ್ ಅಕಾಡೆಮಿ | ಮೂಲ ಉದ್ದೇಶ ಮರೆತಿದೆಯೇ ಅಥವಾ ಉದ್ದೇಶಗಳೇ ಇಲ್ಲವೇ ? -ಭಾಗ 1

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ರಾಜ್ಯ ಸರ್ಕಾರ ಸಾಧು ಕೋಕಿಲಾ ಅವರನ್ನು 2024ರ ಫೆಬ್ರವರಿಯಲ್ಲಿ ನೇಮಕ ಮಾಡಿತ್ತು. ಕಳೆದ ಬಾರಿಯ 15ನೇ ಚಲನಚಿತ್ರೋತ್ಸವ ಸದಸ್ಯರುಗಳಿಲ್ಲದೇ ಆಗಿತ್ತು. ಈ ಬಾರಿ 16ನೇ ಚಿತ್ರೋತ್ಸವ ಆರಂಭಕ್ಕೂ ಮೊದಲು ಸದಸ್ಯರ ನೇಮಕವಾಗಿದೆ. ಆದರೂ ಅವರನ್ನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಅಧ್ಯಕ್ಷರು ಏಕೆ ಆಸಕ್ತಿ ವಹಿಸುತ್ತಿಲ್ಲ?

ಕುಮಾರ ರೈತ
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X