ರನ್ನ ವೈಭವ: ಸಾಂಸ್ಕೃತಿಕ ಮಹಾ ಉತ್ಸವಕ್ಕೆ ಸಜ್ಜಾದ ಬಾಗಲಕೋಟೆ

Date:

Advertisements

ಕವಿ ಚಕ್ರವರ್ತಿ ರನ್ನನ ಗತ ವೈಭವ ಸಾರುವ ನಾಡಿನ ಮಹಾ ಉತ್ಸವ ರನ್ನ ವೈಭವಕ್ಕೆ ದಿನಗಣನೆ ಶುರುವಾಗಿದೆ. ರನ್ನನ ನಾಡು ಮುಧೋಳ ಹಾಗೂ ರನ್ನ ಬೆಳಗಲಿಗಳು ಸಾಂಸ್ಕೃತಿಕ ಮಹಾ ಹಬ್ಬಕ್ಕೆ ಸಕಲ ತಯಾರಿಗಳೊಂದಿಗೆ ಸಜ್ಜಾಗಿ ನಿಂತಿವೆ.

ಮುಧೋಳದಲ್ಲಿ ರನ್ನ ವೈಭವ-2025 ನಾಳೆಯೇ, ಅಂದರೆ ಫೆ.22 ರಿಂದ ಶುರುವಾಗಿ ಮೂರು ದಿನ ಅದ್ದೂರಿಯಾಗಿ ನಡೆಯಲಿದೆ. 22ರಂದು ರನ್ನ ಬೆಳಗಲಿಯಲ್ಲಿ ಹಾಗೂ 23, 24ರಂದು ಮುಧೋಳದಲ್ಲಿ ಸಾಂಸ್ಕೃತಿಕ ವೈಭವವೇ ಧರೆಗಿಳಿಯಲಿದೆ.

ಸಿನಿ ತಾರೆಯರು, ಖ್ಯಾತ ಗಾಯಕರು, ಸಂಗೀತ ನಿರ್ದೇಶಕರ ತಂಡಗಳೇ ಮೇಳೈಸಲಿದ್ದು, ಉತ್ಸವವನ್ನು ಕಣ್ತುಂಬಿಕೊಳ್ಳಲು ಕನ್ನಡದ ಮನಸ್ಸುಗಳು, ಕನ್ನಡಾಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿವೆ.

Advertisements

ಈ ಕಾರ್ಯಕ್ರಮಕ್ಕೆ ಜನಪ್ರಿಯ ಚಿತ್ರ ನಟಿ ರಚಿತಾ ರಾಮ್, ಖ್ಯಾತ ನಿರೂಪಕಿ ಅನುಶ್ರೀ, ಗಾಯಕ ಗುರುಕಿರಣ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಆರ್ ಜಿ ರಶೀದ್, ಹಿರಿಯ ನಟ, ಗಾಯಕ ಗುರುರಾಜ ಹೊಸಕೋಟೆ, ಕಿರುತೆರೆ ತಾರೆ ಹನುಮಂತ ಲಮಾಣಿ, ಮಾಳು ನೀಪನಾಳ, ಗಾಯಕಿ ಅನುಪಮ ಭಟ್ ಸೇರಿದಂತೆ ಹಲವು ಸಹ ಕಲಾವಿದರು, ನಾಯಕರು ಆಗಮಿಸಲಿದ್ದಾರೆ.

ರನ್ನ ವೈಭವದ ಮೆರವಣಿಗೆ ಈ ಬಾರಿ ಆಕರ್ಷಣೀಯವಾಗಿರಲಿದೆ. ಕುದರೆ, ಸಾರೋಟು, ಛತ್ರ ಚಾಮರ, ಕೀರ್ತಿ ಧ್ವಜ, ಕೊಂಬು ಕಹಳೆ, ಜಾಗಟೆ, ಪೂರ್ಣ ಕುಂಭ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಕಳೆ ತುಂಬಲಿವೆ. ಇನ್ನು ಮುಧೋಳ್ ಸಾರಿಗೆ ಡಿಪೋದಿಂದ ಸ್ಥಬ್ಧಚಿತ್ರ, ವೈವಿಧ್ಯಮಯ ಕಲೆಗಳು, ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಮತ್ತಷ್ಟು ಮೆರಗು ನೀಡಲಿವೆ.

ಈ ಸುದ್ದಿ ಓದಿದ್ದೀರಾ?: ಸೌಹಾರ್ದತೆಯ ಹೊಸ ಹೆಜ್ಜೆ; ನವನಗರ ಬಾಗಲಕೋಟೆಗೆ ವಿಸ್ತರಿಸಿದ ಸದ್ಭಾವನ ಮಂಚ್

ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ರಾಜ್ಯದ 18ಕ್ಕೂ ಹೆಚ್ಚು ಸಚಿವರು, ಇಪ್ಪತ್ತಕ್ಕೂ ಹೆಚ್ಚು ಶಾಸಕರು, ನಿಗಮದ ಅಧ್ಯಕ್ಷರು, ಮೇಲ್ಮನೆ ಸದಸ್ಯರು ಈ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X