ಮೈಸೂರು | ಎಐಎಂಎಸ್ಎಸ್ ಸಂಘಟನೆಯಿಂದ ‘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘

Date:

Advertisements

ಎಐಎಂಎಸ್ಎಸ್ ಸಂಘಟನೆ ಮೈಸೂರು ಜಿಲ್ಲಾ ಸಮಿತಿಯಿಂದ ನಟರಾಜ ವಿದ್ಯಾಸಂಸ್ಥೆಯ ಟೈಲರಿಂಗ್ ವಿಭಾಗದಲ್ಲಿ ‘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘ಯನ್ನು ಕ್ಲಾರಾ ಜೆಟ್ಕಿನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಮೈಸೂರು ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಶೀಭಾ ಮಾತನಾಡಿ ” 1908ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದ ಜವಳಿ ಕಾರ್ಖಾನೆಯ ಹೆಣ್ಣು ಮಕ್ಕಳು ಲಾಟಿ, ಗುಂಡಿನೇಟು ಎದುರಿಸಿ ತಮ್ಮ ಕೆಲವೊಂದು ಹಕ್ಕುಗಳನ್ನು ಗೆದ್ದುಕೊಂಡ ದಿನವೇ ಮಾರ್ಚ್ 8 ಎಂದೂ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ರವರು ಇದನ್ನು ‘ ಅಂತರರಾಷ್ಟ್ರೀಯ ಮಹಿಳಾ ದಿನ’ವಾಗಿ ಘೋಷಿಸಿದರ ಬಗ್ಗೆ ಹಾಗೂ ಅಂದಿನಿಂದ ಇದು ಮಹಿಳಾ ಹೋರಾಟದ ದಿಕ್ಸೂಚಿಯಾಗಿದೆ. ಮಹಿಳೆಯರು ತಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಾ ಮುಂದೆ ಸಾಧಿಸಬೇಕಾಗಿರುವ ಗುರಿಯ ರೂಪುರೇಷೆ ನಿರ್ಧರಿಸಲು ಮೀಸಲಿಡಬೇಕಾದ ಪ್ರೇರಣಾ ದಿನವಾಗಿದೆ ” ಎಂದರು.

” ನಮ್ಮ ನವೋದಯದ ಹರಿಕಾರರಾದ ರಾಜಾರಾಂ ಮೋಹನ್‌ರಾಯ್, ಈಶ್ವರ ಚಂದ್ರ ವಿದ್ಯಾಸಾಗರ, ಪಂಡಿತ ತಾರಾನಾಥ, ಸಾವಿತ್ರಿಬಾಯಿ ಫುಲೆ, ಮುಂತಾದವರ ಹೋರಾಟದ ಫಲವಾಗಿ ಅಲ್ಪ ಸ್ವಲ್ಪ ಹಕ್ಕುಗಳನ್ನು ಮಹಿಳೆಯರು ಗಳಿಸಿಕೊಂಡಿದ್ದರು. ಅವರ ಪರಿಸ್ಥಿತಿ ಇನ್ನು ಸಂಕಟಮಯವಾಗಿಯೇ ಇದೆ. ಜೊತೆಗೆ 20 ರ ದಶಕದಲ್ಲಿ ಇಲ್ಲಿ ನೆಲೆಗೊಂಡ ಜಾಗತೀಕರಣ ನೀತಿ, ಪರಿಸ್ಥಿತಿಯನ್ನು ಇನ್ನಷ್ಟು ವಿಷಮಯಗೊಳಿಸಿದೆ. ಅಲ್ಲದೆ ಸರ್ಕಾರಗಳೇ, ದುಡಿಯುವ ಹೆಣ್ಣು ಮಕ್ಕಳಿಗೆ ಜೀವನದ ಭದ್ರತೆ ಕಲ್ಪಿಸದೆ ಅವರನ್ನು ಶೋಷಿಸುತ್ತಿರುವುದಕ್ಕೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮಹಿಳೆಯರು ಜೀವಂತ ಸಾಕ್ಷಿ ” ಎಂದು ವಿಷಾದಿಸಿದರು.

Advertisements

ಉಪಾಧ್ಯಕ್ಷೆ ಸೀಮಾ ಮಾತನಾಡಿ ” ಮಹಿಳಾ ಸಮುದಾಯ ಹೋರಾಟದಿಂದ ಗಳಿಸಿಕೊಂಡಿರುವ ಎಲ್ಲ ರೀತಿಯ ಹಕ್ಕುಗಳನ್ನು ಇಂದು ಉಳಿಸಿಕೊಳ್ಳಬೇಕಿದೆ ಮಹಿಳೆಯರು ಮತ್ತು ಮಕ್ಕಳು ಜೀವಿಸುವ ಹಕ್ಕಿಗಾಗಿ ನಾವೆಲ್ಲರೂ ಧ್ವನಿ ಎತ್ತಬೇಕಿದೆ. ಹೆಣ್ಣು ಮಕ್ಕಳಿಗೆ ಸರ್ಕಾರ, ಆರೋಗ್ಯ, ಶಿಕ್ಷಣ,ಸುರಕ್ಷತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ಮಹಿಳಾ ಸಮುದಾಯ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ ” ಎಂದು ಹೇಳಿದರು

ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಬಿ-ಖಾತಾ ‘ ಅಭಿಯಾನಕ್ಕೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಚಾಲನೆ

ಕಾರ್ಯಕ್ರಮದಲ್ಲಿ ಟೈಲರಿಂಗ್ ಇನ್ಸ್ಟಿಟ್ಯೂಷನ್ ನ ಮುಖ್ಯಸ್ಥೆ ಮಧು, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ನಳಿನ , ಕಾರ್ಯದರ್ಶಿ ಆಸಿಯಾ ಬೇಗಂ ಮತ್ತು ವಿದ್ಯಾರ್ಥಿಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X