ಬೆಂಗಳೂರು | ಹೆಜ್ಜೆ ಥಿಯೇಟರ್‌ ತಂಡದಿಂದ ಮಾ.6ರಂದು ʼಸುಣ್ಣದ ಸುತ್ತುʼ ನಾಟಕ ಪ್ರದರ್ಶನ

Date:

Advertisements

ಹೆಜ್ಜೆ ಥಿಯೇಟರ್‌ ತಂಡವು ಸದ್ಯಕ್ಕೆ ʼಸುಣ್ಣದ ಸುತ್ತುʼ ಎಂಬ ನಾಟಕದ ತಾಲೀಮು ನಡೆಸುತ್ತಿದ್ದು, ಈ ನಾಟಕವು ಮಾರ್ಚ್‌ 06ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಸಂಜೆ 07ಕ್ಕೆ ಪ್ರದರ್ಶನಗೊಳ್ಳಲಿದೆ.

ಒಂದು ಸಾಮ್ರಾಜ್ಯ, ಆ ಸಾಮ್ರಾಜ್ಯದಲ್ಲಿ ರಕ್ತ ಸಂಬಂಧಗಳ ಬೆಲೆ ಗೊತ್ತಿಲ್ಲದೆ, ಕೇವಲ ಹಣ ಬಂಗಾರದ ಬಗ್ಗೆ ಯೋಚಿಸುವ ರಾಣಿ. ಯಾವಗ ರಾಜನ ಬೆನ್ನಿಗೆ ಕತ್ತಿ ಚುಚ್ಚುತ್ತೀನೆಂದು ಸಂಚು ಹೂಡೋ ಮರಿದೊರೆ. ಇವರುಗಳ ಮಧ್ಯೆ ಇವರ ಮಸಲತ್ತಿನ ಯೋಜನೆಗಳಿಗೆ ಬಲಿಯಾಗಿ ದೂರ ಉಳಿಯುವ ಪ್ರೇಮಿಗಳು. ಮರಿದೊರೆ ಸಂಚಿನಿಂದ ಸುಳ್ಳು ಪ್ರೀತಿ ತೋರುವ ತಾಯಿಂದ ದೂರಾಗಿ, ನಿಜ ಪ್ರೀತಿ ಪಡೆದುಕೊಳ್ಳುವ ಎಳೆಗೂಸಿನ ಸುತ್ತ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.

ಒಂದು ಕಡೆ ಮರಿದೊರೆಗೆ ಮಗು ಕಂಡರೆ ಕೊಂದು ಬಿಡುವನಲ್ಲ ಎನ್ನುವ ಭಯವಿದ್ದರೆ, ಇತ್ತ ಯುದ್ದಕ್ಕೆ ಹೋದ ಪೇಮಿ ಬರುವ ದಾರಿ ಕಾಯುತ್ತ, ಸೊರಗಿ ಕೂತು, ಜತೆಗೆ ತನ್ನದಲ್ಲದ ಮಗುವನ್ನು ನನ್ನದೆಂದು ಭಾವಿಸಿ, ಆ ಮುಗುವಿಗೆ ಲಾಲನೆ, ಪಾಲನೆ, ಪ್ರೀತಿ, ಕಾಳಜಿ ತೋರುವ ಹೆಣ್ಣಿಗೆ, ಕೊನೆಗೊಂದು ಅಗ್ನಿ ಪರೀಕ್ಷೆ ಕಾದಿರುತ್ತದೆ.

Advertisements

ಈ ಸುದ್ದಿ ಓದಿದ್ದೀರಾ? ಶಿಕಾರಿಪುರ | ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಆರೋಪಿ ನಾಪತ್ತೆ

ಆ ಮಗು, ಕೊನೆಗೆ ಹಣ ಮತ್ತು ಸಂಪತ್ತು ಹೊಂದಿರುವ ಹಾಗೂ ಸುಳ್ಳು ಪ್ರೀತಿ ಉಳ್ಳವರ ಪಾಲಾಗುತ್ತ ಅಥವಾ ಬಡತನದಲ್ಲಿದ್ದು, ನಿಜ ಪ್ರೀತಿ, ಕಾಳಜಿ ತೋರಿದ ಆ ಬಡ ಹೆಣ್ಣಿನ ಪಾಲಾಗುತ್ತ ಎನ್ನವಂತಹ ಕಥೆಯನ್ನು ರಚಿಸಿದ ಜರ್ಮನ್‌ನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರ ಕಥೆಯನ್ನು ಎಚ್‌ ಎಸ್‌ ವೆಂಕಟೇಶ್‌ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು, ರಂಗ ನಿರ್ದೇಶಕ ಹೇಮಂತ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X