ಐಪಿಎಲ್ | ಆಟಗಾರರಿಗೆ ಹೊಸ ನಿಯಮ; ತೋಳಿಲ್ಲದ ಜೆರ್ಸಿ ಹಾಕಂಗಿಲ್ಲ, ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ

Date:

Advertisements

ಐಪಿಎಲ್‌-2025 ಟೂರ್ನಿಯು ಮಾರ್ಚ್‌ 22ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಆಟಗಾರರಿಗೆ ಬಿಸಿಸಿಐ ಹಲವಾರು ನಿಮಯಗಳನ್ನು ವಿಧಿಸಿದೆ. ನಿಯಮಗಳಂತೆ, ಎಲ್ಲ ಆಟಗಾರರು ಕಡ್ಡಾಯವಾಗಿ ತಂಡದ ಬಸ್‌ನಲ್ಲಿ ಮಾತ್ರವೇ ಪ್ರಯಾಣಿಸಬೇಕು. ಪಂದ್ಯವಿಲ್ಲದ ದಿನಗಳಲ್ಲಿಯೂ ಸಹ ಕುಟುಂಬ ಸದಸ್ಯರು ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರವೇಶಿಸಬಾರದು. ಆಟಗಾರರು ತೋಳುಗಳಿಲ್ಲದ ಜರ್ಸಿಗಳನ್ನು ಧರಿಸುವಂತಿಲ್ಲ ಎಂಬ ನಿಮಯಗಳು ಸೇರಿವೆ.

ಬಿಸಿಸಿಐ ಜಾರಿಗೆ ತಂದಿರುವ ನಿಮಯಗಳು;

  1. ಆಟಗಾರರು ಕಡ್ಡಾಯವಾಗಿ ತಂಡದ ಬಸ್‌ನಲ್ಲಿಯೇ ಪ್ರಯಾಣಿಸಬೇಕು.
  2. ಪಂದ್ಯಾವಳಿ ಆರಂಭವಾಗಿ, ಮುಕ್ತಾಯಗೊಳ್ಳುವವರೆಗೂ ಡ್ರೆಸ್ಸಿಂಗ್ ಕೊಠಡಿ ಮತ್ತು ಆಟದ ಮೈದಾನಕ್ಕೆ ಮಾನ್ಯತೆ ಪಡೆದ ಸಿಬ್ಬಂದಿಗೆ ಮಾತ್ರ ಪ್ರವೇಶ.
  3. ಆಟಗಾರರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವರದ್ದೇ ಅಥವಾ ಇತರ ವಾಹನದಲ್ಲಿ ಪ್ರಯಾಣಿಸಬಹುದು. ಆತಿಥ್ಯ ಪ್ರದೇಶದಿಂದ ತಂಡದ ಅಭ್ಯಾಸವನ್ನು ವೀಕ್ಷಿಸಬಹುದು.
  4. ಓಪನ್ ನೆಟ್‌ ಅಭ್ಯಾಸಕ್ಕೆ ಅನುಮತಿ ಇಲ್ಲ. ನೆಟ್‌ಗಳ ನಡುವೆಯೇ ಅಭ್ಯಾಸ ನಡೆಸಬೇಕು.
  5. ಅಭ್ಯಾಸದ ವೇಳೆ ಒಂದು ತಂಡ ಬಳಿಸಿದ ವಿಕೆಟ್‌ಗಳನ್ನು ಮತ್ತೊಂದು ತಂಡ ಬಳಸಲು ಅವಕಾಶವಿಲ್ಲ.
  6. ಪಂದ್ಯದ ದಿನ ಯಾವುದೇ ತಂಡವು ಅಭ್ಯಾಸ ನಡೆಸಲು ಅನುಮತಿ ಇಲ್ಲ.
  7. ಪಂದ್ಯದ ದಿನದಂದು ಮುಖ್ಯ ಸ್ಕ್ವೇರ್‌ನಲ್ಲಿ ಯಾವುದೇ ಫಿಟ್‌ನೆಸ್ ಪರೀಕ್ಷೆ ನಡೆಯಲ್ಲ.
  8. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ LED ಬೋರ್ಡ್‌ಗಳ ಮುಂದೆ ಕುಳಿತುಕೊಳ್ಳುವಂತಿಲ್ಲ.
  9. ಆಟಗಾರರು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಧರಿಸಬೇಕು. ಆಟಗಾರರಿಗೆ ಧರಸಲು ಸಾಧ್ಯವಾಗದ ಸಮಯದಲ್ಲಿ ಕನಿಷ್ಠ ಮೊದಲ ಎರಡು ಓವರ್‌ಗಳವರೆಗೆ ಧರಿಸಬೇಕು.
  10. ಪಂದ್ಯದ ನಂತರದ ಪ್ರೆಸೆಂಟೇಶನ್ ಸಮಯದಲ್ಲಿ ತೋಳುಗಳಿಲ್ಲದ ಜೆರ್ಸಿಯನ್ನು ಧರಿಸುವಂತಿಲ್ಲ.
  11. ಪಂದ್ಯದ ದಿನಗಳಲ್ಲಿ ತಂಡದ ವೈದ್ಯರು ಸೇರಿದಂತೆ 12 ಮಾನ್ಯತೆ ಪಡೆದ ಸಹಾಯಕ ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X